ಜನತಾ ನ್ಯೂ ಇಂಗ್ಲೀಷ್ ಮೀಡಿಯಂ ಸ್ಕೂಲ್ ಕಿರಿಮಂಜೇಶ್ವರ, ಜನತಾ ಪದವಿಪೂರ್ವ ಕಾಲೇಜು ಹೆಮ್ಮಾಡಿ ಇದರ ಆಸರೆಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಅಗಸ್ಟ್ 17ರಂದು ಮುದ್ದು ಕೃಷ್ಣ ಸ್ಪರ್ಧೆ ಜನತಾ ರಸಬುಗ್ಗೆ 2.0 ಕಾರ್ಯಕ್ರಮ ನಡೆಯಲಿದೆ.ಈ ಕಾರ್ಯಕ್ರಮವನ್ನು ಸರಿಗಮಪ ಖ್ಯಾತಿಯ ದಿಯಾ ಹೆಗ್ಡೆ ಉದ್ಘಾಟಿಸಲಿದ್ದಾರೆ

ಪ್ರಥಮ ಸ್ಥಾನ ಪಡೆದವರಿಗೆ 15,999,ದ್ವಿತೀಯ ಸ್ಥಾನ ಪಡೆದವರಿಗೆ 13,999,ತೃತೀಯ ಸ್ಥಾನ ಪಡೆದವರಿಗೆ 12,999 ಹಾಗೂ ಚತುರ್ಥ ಸ್ಥಾನ ಪಡೆದವರಿಗೆ 11,999 ರೂಪಾಯಿ ಹಾಗೂ 25 ಸಮಾಧಾನಕರ ಬಹುಮಾನ ನೀಡಲಿದ್ದೇವೆ ಎಂದು ಸಂಸ್ಥೆಯ ಅಧ್ಯಕ್ಷರಾದ ಗಣೇಶ ಮೊಗವೀರ ತಿಳಿಸಿದ್ದಾರೆ.

ಈ ಸ್ಪರ್ಧೆ ಜೂನಿಯರ್ ಹಾಗೂ ಸೀನಿಯರ್ ವಿಭಾಗಗಳಲ್ಲಿ ನಡೆಯಲಿದ್ದು, ಪ್ರತಿಯೊಬ್ಬರಿಗೂ ಒಟ್ಟು 2 ನಿಮಿಷ ಕಾಲಾವಕಾಶ ನೀಡಲಾಗುತ್ತದೆ. ಈ ಸ್ಪರ್ಧೆ ನೋಂದಣಿಗೆ ಕೊನೆಯ ದಿನಾಂಕ 13-08-2025 ನಿಗದಿಪಡಿಸಲಾಗಿದೆ.ಆಸಕ್ತರು ಹೆಸರು ನೋಂದಾಯಿಸಬಹುದಾಗಿದೆ.ಸಂಪರ್ಕ ಸಂಖ್ಯೆ -7760089403,9108691452


