ಉಡುಪಿ: ಬದುಕನ್ನು ಅರ್ಥಪೂರ್ಣಗೊಳಿಸುಕೊಳ್ಳುವಲ್ಲಿ, ಬದುಕಿಗೊಂದು ಉದ್ದೇಶವನ್ನು ಕಲ್ಪಿಸಿಕೊಳ್ಳುವಲ್ಲಿ ಸಂಗೀತ, ನೃತ್ಯ, ಚಿತ್ರಕಲೆ, ಮಂಡಲ ಕಲೆ, ಯಕ್ಷಗಾನ, ಸಾಹಿತ್ಯ, ಕವನ ರಚನೆ, ಫೊಟೋಗ್ರಫಿ, ನಾಟಕ ಮುಂತಾದ ಕಲೆಗಳು ಮುಖ್ಯ ಪಾತ್ರವಹಿಸುತ್ತವೆ. ಕಲಾ ಮನಸ್ಸಿನಿಂದಷ್ಟೆ ಶಾAತಿ ಸಮಾಧಾನದ ಸಮಾಜ ನಿರ್ಮಾಣ ಸಾಧ್ಯ. ಈ ದೆಸೆಯಲ್ಲಿ ಪ್ರತಿಯೊಬ್ಬರೂ ಚಿಕ್ಕ ವಯಸ್ಸಿನಿಂದಲೇ ಕಲಾ ಹವ್ಯಾಸವನ್ನು ಮೈಗೂಡಿಸಿಕೊಳ್ಳಬೇಕಾದ ಅಗತ್ಯವಿದೆ. ಈ ನೆಲೆಯಲ್ಲಿ ಕಲಾ ತಪಸ್ ಸಂಸ್ಥೆ ಅತ್ಯಂತ ಸಮಯೋಚಿತವಾಗಿ ಕಲಾ ಕೌಶಲ್ಯ ವೆಂಬ ಬೇಸಿಗೆ ಕಲಾ ಶಿಬಿರವನ್ನು ಆಯೋಜಿಸಿರುವುದು ಶ್ಲಾಘನೀಯವಾಗಿದೆ, ಎಂದು ಖ್ಯಾತ ಮನೋರೋಗ ತಜ್ಞ, ಲೇಖಕ ಡಾ
ವಿರೂಪಾಕ್ಷ ದೇವರಮನೆ ಹೇಳಿದರು.
ಇಂದ್ರಾಳಿಯ ಕಲಾ ತಪಸ್ಸ್ ಸಂಗೀತ ಪಾಠಶಾಲೆಯು ಮಕ್ಕಳಿಗಾಗಿ ಆಯೋಜಿಸುತ್ತಿರುವ ಕಲಾ ಕೌಶಲ್ಯ 2025, ಎಂಟು ದಿನಗಳ ಕಲಾ ಶಿಬಿರದ ಉದ್ಘಾಟಿಸಿ ಮಾತನಾಡಿದರು. ಇಂದ್ರಾಳಿಯ ಕಲಾ ತಪಸ್ಸ್ ಶಾಲೆಯ ಆವರಣದಲ್ಲಿ ಏರ್ಪಡಿಸಲಾದ ಈ ಶಿಬಿರದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆವಹಿಸಿದ್ದ ಮಾಹೆ ಮಣಿಪಾಲದ ಗಾಂಧಿಯನ್ ಸೆಂಟರ್ ಮುಖ್ಯಸ್ಥರಾದ ಪ್ರೊ. ವರದೇಶ ಹಿರೇಗಂಗೆಯವರು, ‘ಮಕ್ಕಳು ಎಲ್ಲರ ತಂದೆ ತಾಯಿಗಳಿದ್ದಂತೆ. ಅವರ ನಿಷ್ಕಲ್ಮಶ ಮನಸ್ಸು ಎಲ್ಲರದ್ದಾಗಬೇಕು. ಮಕ್ಕಳ ಎಲ್ಲವನ್ನು ಅರಿಯುವ, ನೋಡುವ, ಅನುಭವಿಸುವ ಕುತೂಹಲಗಳು ಸೃಜನಶೀಲತೆಯನ್ನು ಹೆಚ್ಚಿಸುತ್ತದೆ. ಮಗುವಿನ ದೃಷ್ಟಿಯಲ್ಲಿ ಜಗತ್ತನ್ನು ಕಾಣವಂತಾಗಬೇಕು. ಆಗ ಸುಂದರವಾದ ಶಾಂತವಾದ ಬದುಕು ಮತ್ತು ಜಗತ್ತು ಸೃಷ್ಠಿಯಾಗುತ್ತದೆ ಎಂದು ತಿಳಿಸಿ ಈ ದೃಷ್ಠಿಯಲ್ಲಿ ಕಲಾ ಶಿಬಿರಗಳು ಮಕ್ಕಳಲ್ಲಿ ಕಲಾಮನಸ್ಸನ್ನು ಉದ್ದೀಪನಗೊಳಿಸುವಲ್ಲಿ ಸಹಕಾರಿಯಾಗುತ್ತವೆ ಎಂದು ಅಭಿಪ್ರಾಯಪಟ್ಟು ಶುಭ ಹಾರೈಸಿದರು.
ಉಡುಪಿ ಜಿಲ್ಲೆಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪನಿರ್ದೇಶಕಿ ಶ್ರೀಮತಿ ಪೂರ್ಣಿಮಾ ಮತ್ತು ರೋಟರಿ ಉಡುಪಿಯ ಅಧ್ಯಕ್ಷರಾದ ರೊ ಗುರುರಾಜ ಭಟ್ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಶುಭ ಹಾರೈಸಿದರು. ಕಲಾ ತಪಸ್ ಸಂಸ್ಥೆಯ ಸಂಸ್ಥೆಯ ನಿರ್ದೇಶಕಿ ಶ್ರಾವ್ಯಾ ಎಸ್ ಬಾಸ್ರಿ ಸ್ವಾಗತಿಸಿದರು. ಪ್ರಾಸ್ತವಿಕವಾಗಿ ಮಾತನಾಡಿದ ಸುಬ್ರಹ್ಮಣ್ಯ ಬಾಸ್ರಿಯವರು
ಶಿಬಿರದ ಉದ್ದೇಶಗಳು ಮತ್ತು ಶಿಬಿರದಲ್ಲಿ ಅಳವಡಿಸಿಕೊಂಡ ವಿವಿಧ ಕಲಾ ಮಾದ್ಯಮಗಳತ್ತ ಬೆಳಕು ಚೆಲ್ಲಿದರು.
ಶಿಬಿರದಲ್ಲಿ ಪ್ರತಿದಿನ ಸುಗಮ ಸಂಗೀತ (ಗಾನಕಲಾರತ್ನ ಎಮ್ ಎಸ್ ಗಿರಿಧರ್, ಬೆಂಗಳೂರು) ಯೋಗ ಮತ್ತು ಪ್ರಾಣಾಯಾಮ (ಯೋಗ ಗುರು ಪಿ ವಿ ಭಟ್) ಯಕ್ಷಗಾನ (ಗುರು ಬನ್ನಂಜೆ ಸಂಜೀವ ಸುವರ್ಣ), ಮಂಡಲ ಕಲೆ (ಶ್ರಾವ್ಯಾ ಎಸ್ ಬಾಸ್ರಿ) ರಂಗಭೂಮಿ (ಅಭಿನವ ಗ್ರೋವರ್) ಕ್ಯಾಲಿಗ್ರಫಿ (ಅಪರ್ಣಾ ಯು, ಮೈಸೂರು) ತರಬೇತಿ ನೀಡಲಾಗುತ್ತದೆ. ಇವುಗಳಲ್ಲದೇ ದಿನಂಪ್ರತಿ ಪರಿಣತ ವಿಷಯ ತಜ್ಞರಿಂದ, ಶ್ರೀ ರಾಜೇಂದ್ರ ಭಟ್, ರಾಷ್ಟ್ರೀಯ ತರಬೇತುದಾರರು (ಸಂಗೀತ ಪರಂಪರೆ ಮತ್ತು ಕಲಾಪಯಣ), ಪಿ ವೆಂಕಟರಮಣ ಕಾಮತ್ (ವೆಂಕಿ ಪಲಿಮಾರ್) (ಭುವಿ ಮತ್ತು ಕಲೆ – ಆವೆ ಮಣ್ಣಿನ ಕಲಾಕೃತಿಗಳು), ಡಾ ಭ್ರಮರಿ ಶಿವಪ್ರಕಾಶ್ (ಕಲೆ ಮತ್ತು ಸೌಂದರ್ಯ), ಡಾ ಜನಾರ್ಧನ ಹಾವಂಜೆ, ಕಲಾವಿದರರು-ಸಂಶೋಧಕರು (ಮುಖವಾಡ ಮತ್ತು ಮುಖವರ್ಣಿಕೆ) ಶ್ರೀಮತಿ ಸುಮನ ಆಚಾರ್ಯ, ಉಡುಪಿ (ಸಾಂಪ್ರದಾಯಿಕ ವಿನೋದದಾಟಗಳಲ್ಲಿ ಆತ್ಮಾನಂದ) ಮತ್ತು ಹರೀಶ ಕುಮಾರ್ (ಪರಿಸರ ಸಮತೋಲನದಲ್ಲಿ ಹಾವುಗಳು) ವಿಶೇಷ
ಉಪಾನ್ಯಾಸಗಳನ್ನ್ನೂ ಅಳವಡಿಸಲಾಗಿದ್ದು ನಿರ್ದರಿತ ವೇಳಾಪಟ್ಟಿಯಂತೆ ತರಬೇತಿ ವಿದ್ಯುಕ್ತವಾಗಿ ಆರಂಭಗೊಂಡವು. ಶಿಬಿರದ ಉಪವ್ಯವಸ್ಥಾಪಕಿ ಮಾನಸ ವಂದಿಸಿದರು. ರೊ. ಹೇಮಂತ್ ಯು ಕಾಂತ್ ಕಾರ್ಯಕ್ರಮವನ್ನು ನಿರೂಪಿಸಿದರು.