ಉಡುಪಿ : ಉಡುಪಿ ಜಿಲ್ಲೆಯಲ್ಲಿ ಬಡವರ ರಕ್ತ ಹೀರುತ್ತಿರುವ ಮಟ್ಕಾ ಜುಗಾರಿ ದಂಧೆಗೆ ಬ್ರೇಕ್ ಹಾಕುವ ಕೆಲಸವಾಗಬೇಕು ಎಂದು ಬಹಳ ಹಿಂದಿನಿಂದ ಕೂಗು ಕೇಳುತ್ತಲೆ ಇತ್ತು. ಶ್ರಮಿಕ ವರ್ಗದ ಜನ ಅಧಿಕ ಹಣದ ಆಸೆಗಾಗಿ ದುಡಿದ ಹಣವನ್ನು ಮಟ್ಕಾ ದಂಧೆಗೆ ಕಟ್ಟಿ ಹಣ ಕಳೆದುಕೊಂಡು ಮದ್ಯಪಾನಕ್ಕೆ ದಾಸರಾಗಿ ಕುಟುಂಬವನ್ನು ಬೀದಿಗೆ ತರುವ ಪ್ರಕರಣ ಜಿಲ್ಲೆಯಲ್ಲಿ ನಡೆಯುತ್ತಲೇ ಇತ್ತು ಎನ್ನಬಹುದು. ಸದ್ಯ ಈ ಮಟ್ಕಾ ದಂಧೆಯ ಬೆನ್ನು ಮೂಳೆ ಮುರಿಯುವ ಕೆಲಸ ಉಡುಪಿಯಲ್ಲಿ ಆಗಿದೆ ಎನ್ನುವುದು ಸಂತಸದ ಸುದ್ದಿ. ಹೊಸದಾಇ ಜಿಲ್ಲೆಗೆ ಪೊಲೀಸ್ ವರಿಷ್ಠಾಧಿಕಾರಿಯಾಗಿ ಬಂದಿರು ಹರಿರಾಮ್ ಶಂಕರ್ ಅವರು ಅಧಿಕಾರ ವಹಿಸಿಕೊಂಡ ದಿನದಿಂದಲೇ ಮಟ್ಕಾ ದಂಧೆಯ ನಡು ಮುರಿಯುವ ಕಾಯಕಕ್ಕೆ ಇಳಿದಿದ್ದಾರೆ.
ಐಪಿಎಸ್ ದಿವಂಗತ ಮಧುಕರ್ ಶೆಟ್ಟಿ ಅವರ ಶಿಷ್ಯ ಎಂದೆ ಕರೆಯಿಸಿಕೊಳ್ಳುವ ಹರಿರಾಮ್ ಶಂಕರ್ ಅವರಿಗೆ ಉಡುಪಿ ಜಿಲ್ಲೇ ಏನು ಹೊಸದಾಗಿ ಪರಿಚಯವಾಗಬೇಕಾದ ಜಿಲ್ಲೆಯಲ್ಲ. ಈಗಾಗಲೇ ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ ಎಎಸ್ ಪಿ ಆಗಿ ಕರ್ತವ್ಯ ನಿರ್ವಹಿಸಿರುವ ಅನುಭವ ಇರುವವರು. ಜಿಲ್ಲೆಯ ಸಮಸ್ಯೆ, ಕಾನೂನು ಸುವ್ಯವಸ್ಥೆಗೆ ಸಂಬಂಧಪಟ್ಟ ಹಾಗೇ ಸಂಪೂರ್ಣ ಮಾಹಿತಿ ಇರುವ ಹರಿರಾಮ್ ಶಂಕರ್ ಅವರಿಗೆ ಜಿಲ್ಲೆಯನ್ನು ಕಾಡುತ್ತಿರುವ ಮಟ್ಕಾ ದಂಧೆಯ ಕುರಿತು ಈ ಮೊದಲೇ ಮಾಹಿತಿ ಇತ್ತು ಎನ್ನಬಹುದು. ಹೀಗಾಗಿ ಕಳೆದ ಎರಡು ಮೂರು ದಿನಗಳಲ್ಲಿ ಜಿಲ್ಲೆಯ ಹಲವು ಪೊಲೀಸ್ ಠಾಣೆಗಳಲ್ಲಿ ಮಟ್ಕಾ ದಂಧೆಯಲ್ಲಿ ನಿರತರಾಗಿವವರ ಹೆಡೆಮುರಿ ಕಟ್ಟುವ ಕೆಲಸ ಹರಿರಾಮ್ ಶಂಕರ್ ನೇತೃತ್ವದಲ್ಲಿ ಉಡುಪಿ ಪೊಲೀಸ್ ರು ಮಾಡಿದ್ದಾರೆ.
ಮೇ 31ರಂದು ಜಿಲ್ಲೆಯ ಶಿರ್ವ ಪೊಲೀಸ್ ಠಾಣಾ ವ್ಯಾಪ್ತಿಯ ಶಂಕರ ಪುರ ಕುರ್ಕಾಲು ಗ್ರಾಮದ ಅಶ್ವತ್ಥ ಕಟ್ಟೆಯ ಬಳಿ ಮಟ್ಕಾ ಚೀಟಿ ಬರೆಯುತ್ತಿದ್ದ ವಿಠಲ ದೇವಾಡಿಗನ ಬಂಧನದಿಂದ ದಂಡಯಾತ್ರೆ ಪ್ರಾರಂಭಿಸಿದ ಉಡುಪಿ ಜಿಲ್ಲೆಯ ಪೊಲೀಸ್ ರು ಇದುವರೆಗೂ ಒಟ್ಟು 14 ಜನರ ಮಟ್ಕಾ ದಂಧೆಕೋರರನ್ನು ಬಂಧಿಸಿದ್ದಾರೆ. ಕುರ್ಕಾಲು ಬಳಿ ಸೆರೆ ಸಿಕ್ಕ ವಿಠಲ ದೇವಾಡಿಗ ನನ್ನು ತನಿಖೆ ಮಾಡಿದ ಪೊಲೀಸ್ ರಿಗೆ ಉಡುಪಿಯ ಮಟ್ಕಾ ಬುಕ್ಕಿ ಲಿಯೋ ಕರ್ನೇಲಿಯೋ ಮಾಹಿತಿ ಲಭಿಸಿದೆ. ಬಂಧಿತ ಆರೋಪಿಯ ಹೇಳಿಕೆ ಆಧರಿಸಿ ಉಡುಪಿಯ ಮಟ್ಕಾ ಬುಕ್ಕಿ ಲಿಯೋ ಕರ್ನೇಲಯೋ ನನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿ ವಿಚಾರಣೆ ನಡೆಸಿದಾಗ, ಜಿಲ್ಲೆಯ ನಾನಾ ಭಾಗದಲ್ಲಿ ಮಟ್ಕಾ ದಂಧೆ ನಡೆಸುವವರ ಮಾಹಿತಿ ಲಭಿಸಿದೆ. ಬುಕ್ಕಿ ಲಿಯೋ ಮಾಹಿತಿ ಆಧರಿಸಿ ಒಟ್ಟು 12 ಜನ ಮಟ್ಕಾ ದಂಧೆಕೋರರನ್ನು ಉಡುಪಿ ಜಿಲ್ಲೆಯ ನಾನಾ ಠಾಣೆಯಲ್ಲಿ ಪ್ರಕರಣ ದಾಖಲಿಸಿ ವಶಕ್ಕೆ ಪಡೆಯಲಾಗಿದೆ.
ಮಲ್ಪೆ ಠಾಣೆಯಲ್ಲಿ ಪ್ರಕಾಶ್ ಮೂಲ್ಯ (43), ರತ್ನಾಕರ ಅಮೀನ್ (48), ಮಣಿಪಾಲ ಠಾಣೆಯಲ್ಲಿ ನಾಗೇಶ (56), ಕೋಟ ಠಾಣೆಯಲ್ಲಿ ವಿಜಯ ನಾಯಿರಿ(50), ಉಡುಪಿ ನಗರ ಠಾಣೆಯಲ್ಲಿ ದಿವಾಕರ ಪೂಜಾರಿ (42), ರಾಮ್ ರಾಜ್ (44), ಜಗದೀಶ್ (39), ಚಿದಾನಂದ (35), ತಿಪ್ಪೆಸ್ವಾಮಿ (52), ರಾಘವೇಂದ್ರ (41), ಉದಯ ಎಸ್ ಭಂಡಾರಿ (45) ಮತ್ತು ಪಡುಬಿದ್ರೆ ಪೊಲೀಸ್ ಠಾಣೆಯಲ್ಲಿ ಮನೋಜ್ ಕುಮಾರ್ (39) ಎನ್ನುವವರ ಮೇಲೆ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ. ಒಟ್ಟಾರೆಯಾಗಿ ಜಿಲ್ಲೆಯನು ಕ್ಯಾನ್ಸರ್ ಮಾದರಿಯಲ್ಲಿ ಕಾಡುತ್ತಿರುವ ಮಟ್ಕಾ ದಂಧೆ ಮೇಲೆ ಉಡುಪಿ ಜಿಲ್ಲೆಯ ಪೊಲೀಸ್ ರು ಕೈಗೊಂಡಿರು ಕಾರ್ಯಾಚರಣೆ ಕುರಿತು ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ಮುಂದಿನ ದಿನಗಳಲ್ಲಿ ಬುದ್ಧಿವಂತರ ಜಿಲ್ಲೆ ಮಟ್ಕಾ ಮುಕ್ತವಾಗಲಿ ಎನ್ನುವುದೆ ನಮ್ಮ ಆಶಯ…
ಜಿಲ್ಲೆಯಲ್ಲಿ ಕೋಮು ಸಾಮರಸ್ಯ ಕದಡಬಾರದು. ಅಕ್ರಮ ಚಟುವಟಿಕೆಗಳಿಗೆ ಅವಕಾಶವಿಲ್ಲ. ರೌಡಿಸಂ, ಗೂಂಡಾಯಿಸಂನಿಂದ ಸಾಮಾನ್ಯ ಜನರಿಗೆ ತೊಂದರೆಯಾಗದಂತೆ ಕ್ರಮ. ಹಿಂದಿನ ಎಸ್ಪಿಯವರು ಉಡುಪಿ ಜಿಲ್ಲೆಯಲ್ಲಿ ಕಾನೂನು ವ್ಯವಸ್ಥೆ ಬಲಪಡಿಸಿದ್ದು ಅದು ಮುಂದುವರೆಸಲಾಗುವುದು.
ಹರಿರಾಮ್ ಶಂಕರ್ (ಉಡುಪಿ ಎಸ್ಪಿ)
