Saturday, June 28, 2025

spot_img

ಚಿಕಿತ್ಸೆ ಪಡೆದ ಮಹಿಳೆ ರಾಜ್ಯ ಮಹಿಳಾ ನಿಲಯಕ್ಕೆ ದಾಖಲು

ಉಡುಪಿ : ತಿಂಗಳ ಹಿಂದೆ ಪಿತ್ರೋಡಿಯಲ್ಲಿ ವಿಶು ಶೆಟ್ಟಿ ಅವರಿಂದ ರಕ್ಷಿಸಲ್ಪಟ್ಟ ಮಾನಸಿಕ ಮಹಿಳೆಯನ್ನು ಬಾಳಿಗಾ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಿದ್ದು ಇದೀಗ ಆಸ್ಪತ್ರೆಯಿಂದ ಬಿಡುಗಡೆಗೊಂಡು ಮಹಿಳೆಯು ಒಂಟಿಯಾಗಿರುವುದರಿಂದ ನಿಟ್ಟೂರು ರಾಜ್ಯ ಮಹಿಳಾ ನಿಲಯಕ್ಕೆ ವಿಶು ಶೆಟ್ಟಿ ದಾಖಲಿಸಿದ್ದಾರೆ.

ಮಹಿಳೆ ಅನಿತಾ ಪೂಜಾರಿ (40) ಮಾನಸಿಕ ಆಘಾತಕ್ಕೆ ಗುರಿಯಾಗಿ ಸ್ಥಳೀಯರಿಗೆ ದಾಂದಲೆ ನಡೆಸಿದ್ದರು. ಈ ಬಗ್ಗೆ ಸ್ಥಳೀಯರು ವಿಶು ಶೆಟ್ಟಿಗೆ ರಕ್ಷಿಸುವಂತೆ ವಿನಂತಿಸಿದ್ದು, ಉದ್ಯಾವರ ಜಯಶ್ರೀಯವರ ಸಹಾಯದಿಂದ ವಿಶು ಶೆಟ್ಟಿ ರಕ್ಷಿಸಿ ಬಾಳಿಗಾ ಆಸ್ಪತ್ರೆಗೆ ದಾಖಲಿಸಿದ್ದರು. ಮಹಿಳೆಯ ತಂದೆ ತಾಯಿ ತೀರಿಕೊಂಡಿದ್ದು ಪುನಃ ಪಿತ್ರೋಡಿಯ ಮನೆಗೆ ಬಿಟ್ಟರೆ ಮಹಿಳೆ ಔಷದಿ ತೆಗೆದುಕೊಳ್ಳದೆ ಪುನಃ ವ್ಯಾಧಿಗೆ ತುತ್ತಾಗಿ ಮೊದಲಿನ ಪರಿಸ್ಥಿತಿಗೆ ಬರುವುದನ್ನು ತಪ್ಪಿಸಲು ಪುನರ್ವಸತಿ ಕಲ್ಪಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದರು. ಈ ಬಗ್ಗೆ ಮಹಿಳಾ ನಿಲಯದ ಅಧಿಕಾರಿಯವರಿಗೆ ವಿಶು ಶೆಟ್ಟಿ ಮಾಹಿತಿ ನೀಡಿ ಅನುಮತಿ ಪಡೆದು ದಾಖಲಿಸಿದ್ದಾರೆ.

ಬಹಳ ಸಮಯದಿಂದ ಮಹಿಳೆಯ ರಂಪಾಟದಿಂದ ಸ್ಥಳೀಯರು ಭಯ ಭೀತರಾಗಿದ್ದು ಇದೀಗ ನಿಟ್ಟುಸಿರು ಬಿಟ್ಟಿದ್ದಾರೆ. ಸ್ಪಂದಿಸಿದ ವಿಶು ಶೆಟ್ಟಿ ಹಾಗೂ ಜಯಶ್ರೀ ಉದ್ಯಾವರ ಅವರಿಗೆ ಧನ್ಯವಾದ ತಿಳಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles