ಉಡುಪಿ : ಉಡುಪಿಯಲ್ಲಿ ಸರಕಾರಿ ಇಲಾಖೆಯ ಸಿಬ್ಬಂದಿಗಳೇ ಕಳ್ಳರ ಟಾರ್ಗೆಟ್ ಆದ್ರಾ ಅನ್ನೋ ಪ್ರಶ್ನೆ ಮೂಡಿದೆ. ಇತ್ತಿಚೇಗಷ್ಟೆ ಉಡುಪಿ ನಗರದಲ್ಲಿ ಒಂದು ಸರಿಕಾರಿ ಕ್ವಾಟರ್ಸ್ ಕಳ್ಳತನವಾಗಿತ್ತು ಸದ್ಯ ಇದರ ಬೆನ್ನಲ್ಲೆ ಮೆಸ್ಕಾಂ ಸಿಬ್ಬಂದಿಗಳ ಕ್ವಾಟ್ರಸ್ ಗೆ ಕನ್ನ ಹಾಕಿದೆ ಕಳ್ಳರ ತಂಡ.

ಉಡುಪಿಯ ಕುಂಜಿಬೆಟ್ಟು ನಲ್ಲಿರುವ ಮೆಸ್ಕಾಂ ಸಿಬ್ಬಂದಿ ವಸತಿಗೃಹದಲ್ಲಿರುವಮೂರು ಕುಟುಂಬದ ಮನೆಗಳಲ್ಲಿ ಕಳ್ಳತನ ನಡೆದಿದೆ. ಗಣೇಶ್ ಮತ್ತು ಮುರುಗೇಶ್ ಎಂಬ ಮೆಸ್ಕಾಂ ಸಿಬ್ಬಂದಿ ಮನೆಯಲ್ಲಿ ಕಳ್ಳತನ ನಡೆದಿದ್ದು, ಬೀಗ ಹಾಕಿದ ಮನೆಗಳನ್ನು ಟಾರ್ಗೆಟ್ ಮಾಡಿ ಕಳ್ಳರ ಗ್ಯಾಂಗ್ ಕಳ್ಳತನ ನಡೆಸುತ್ತಿದೆ.

ಇನ್ನೂ ಹರೇ ರಾಮ ವಸತಿ ಸಮುಚ್ಚಯದ ಮೆಸ್ಕಾಂ ಸಿಬ್ಬಂದಿ ಮನೆಯಲ್ಲಿ ಕಳ್ಳತನ ನಡೆದಿದ್ದು, ಕೊಂಕಣ ರೈಲ್ವೆ ಜೂನಿಯರ್ ಎಂಜಿನಿಯರ್ ಮನೀಶ್ ಮನೆಗೆ ಕಳ್ಳರು ನುಗ್ಗಿ ಮೂರು ವಾಚ್, ಬೆಳ್ಳಿ ನಾಣ್ಯ ಒಟ್ಟು ಸುಮಾರು 15 ಸಾವಿರ ಬೆಲೆ ಬಾಳುವ ವಸ್ತುಗಳನ್ನು ಕಳ್ಳತನ ಮಾಡಿ ಪರಾರಿಯಾಗಿದ್ದಾರೆ.
