Monday, June 30, 2025

spot_img

ಡಾ. ಎಚ್. ಎಸ್. ಶೆಟ್ಟರಿಗೆ ಅಭಿನಂದನೆ.

ಉಡುಪಿ : ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಸ್ಥಾಪಿಸಿ ತಮ್ಮ ಗಳಿಕೆಯ ದೊಡ್ಡ ಪಾಲನ್ನು ಶಿಕ್ಷಣ ಮತ್ತು ಸಮಾಜಕ್ಕೆ ದಾನ ಮಾಡುತ್ತಿರುವ ಮೈಸೂರು ಮರ್ಕಂಟೈಲ್ ಕಂಪನಿ ಲಿ.ನ ನಿರ್ದೇಶಕರಾದ ಡಾ. ಎಚ್. ಎಸ್. ಶೆಟ್ಟಿಯವರನ್ನು ಯು. ವಿಶ್ವನಾಥ ಶೆಣೈ ತಮ್ಮ ಮನೆಯಲ್ಲಿ ಅಭಿನಂದಿಸಿದರು. ಸೋದೆ ವಾದಿರಾಜ ಮಠದ ಶ್ರೀ
ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರ ಪಾದಪೂಜೆ ನೆರವೇರಿಸಿ ನಂತರ ನಡೆದ ಸಭಾಕಾರ್ಯಕ್ರಮದಲ್ಲಿ ಸ್ವಾಮೀಜಿಯವರಿಂದ ಶಾಲು ಸ್ಮರಣಿಕೆ ನೀಡಿ ಅಭಿನಂದಿಸಿದರು.
ಸ್ವಾಮೀಜಿಯವರು ದಾನಿ ವಿಶ್ವನಾಥ ಶೆಣೈಯವರು ಮಹಾದಾನಿ ಡಾ. ಎಚ್. ಎಸ್. ಶೆಟ್ಟರನ್ನು ಸಮ್ಮಾನಿಸುವ ವಿಶಿಷ್ಟ ಕಾರ್ಯಕ್ರಮ ಇದು. ಈರ್ವರಿಂದಲೂ ಇನ್ನೂ ಹೆಚ್ಚು ಸಮಾಜ ಸೇವಾ ಕಾರ್ಯ ನಡೆಯುವಂತೆ ಭಗವಂತ ಅನುಗ್ರಹಿಸಲಿ ಎಂದು ಆಶೀರ್ವದಿಸಿದರು. ಡಾ. ಎಚ್. ಎಸ್. ಶೆಟ್ಟಿಯವರು ತನ್ನ ಬದುಕಿನಲ್ಲಿ ನಡೆದ ಘಟನೆಗಳನ್ನು ಅವಲೋಕಿಸುತ್ತಾ ನಾಸ್ತಿಕನಾಗಿದ್ದ ತಾನು ಆಸ್ತಿಕನಾಗುವಲ್ಲಿ ಕಾರಣವಾದ ಸಂಗತಿ ವಿವರಿಸಿದರು. ಯು. ವಿಶ್ವನಾಥ ಶೆಣೈ ಸ್ವಾಗತಿಸಿದರು. ಶ್ರೀಮತಿ ಪ್ರಭಾವತಿ ವಿ. ಶೆಣೈಯವರು ಉಪಸ್ಥಿತರಿದ್ದರು. ಸಮಾರಂಭದಲ್ಲಿ ಮುರಲಿ ಕಡೆಕಾರ್ ಸಮ್ಮಾನಿತರನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿದರು.
ಎಚ್. ಪಿ. ರವಿರಾಜ್ ವಂದಿಸಿದರು.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles