ಕುಂದಾಪುರ : ಕುಂದಾಪುರದ ಹೃದಯ ಭಾಗದಲ್ಲಿರುವ ಫ್ಲೈ ಓವರ್ ತಳಭಾಗ ಸುಂದರಿಕರಣವನ್ನು ನಿರ್ಮಿಸಿದ ಲಯನ್ಸ್ ಇಂಟರ್ ನ್ಯಾಶನಲ್ ಲಯನ್ಸ್ ಕ್ಲಬ್ ಕುಂದಾಪುರ ವಲಯ 2,Vl ಲಯನ್ಸ್ ಜಿಲ್ಲೆ 317C ಕುಂದಾಪುರ ಶಾಸ್ತ್ರಿ ಸರ್ಕಲ್ ಎದುರು ಭಾಗದ ಫ್ಲೈ ಓವರ್ ತಳಭಾಗ ಸುಂದರಿಕರಣ ಹಸ್ತಾಂತರ ಕಾರ್ಯಕ್ರಮವನ್ನ ಕುಂದಾಪುರ ವಿಧಾನಸಭಾ ಕ್ಷೇತ್ರ ಶಾಸಕರಾದ ಎ. ಕಿರಣ್ ಕುಮಾರ್ ಕೊಡ್ಗಿಯವರು ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ಫ್ಲೈ ಓವರ್ ನಿರ್ಮಾಣಗೊಂಡ ಬಳಿಕ ಅದರ ತಳಬಾಗವು ಸಮರ್ಪಕ ವ್ಯವಸ್ಥೆ ಇಲ್ಲದೆ ಪಾಳು ಬಿದ್ದಿದ್ದು ಇದು ಕುಂದಾಪುರದ ಹೃದಯ ಭಾಗದ ಕೇಂದ್ರವಾಗಿದ್ದು ಬೇರೆ ಬೇರೆ ಕಡೆಯಿಂದ ಹಳ್ಳಿಯ ಜನರು ಬರುತ್ತಿದ್ದು ಮಳೆಗಾಲದಲ್ಲಿ ಸಂಪೂರ್ಣ ನೀರು ನಿಂತು ಕೊಳಕಾಗುವ ಪರಿಸ್ಥಿತಿ ಇದ್ದಿದ್ದು. ಇದನ್ನು ಗಮನಿಸಿದ ಲಯನ್ಸ್ ಇಂಟರ್ ನ್ಯಾಶನಲ್ ಲಯನ್ಸ್ ಕ್ಲಬ್ ಕುಂದಾಪುರ ಅವರು ಕೇಳಿಕೊಂಡಾಗ ಇದು NHI ಗೆ ಸಂಬಂಧಪಟ್ಟರುವುದರಿಂದ ಅವರಿಗೆ ಮನವಿ ಸಲ್ಲಿಸಿ, ಒಪ್ಪಿಗೆ ಪಡೆದು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಂಡ ನಂತರದ ದಿನದಲ್ಲಿ ಮೊದಲು ಇದರ ಎದುರು ಭಾಗದ ಫ್ಲೈ ಓವರ್ ತಳಭಾಗ ಸುಂದರಿಕರಣವನ್ನ ನಿರ್ಮಿಸಿ ಹಸ್ತಾಂತರಿಸಿದ್ದು,ಇದೀಗ ಉಳಿದಿರುವ ಫ್ಲೈ ಓವರ್ ತಳಭಾಗ ಸುಂದರಿಕರಣವನ್ನು ನಿರ್ಮಿಸಿ ಕೊಟ್ಟಿದ್ದು ಇವರ ಕಾರ್ಯವೈಕರಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಲಯನ್ಸ್ ರಾಧಾಕೃಷ್ಣ ಇವರು ಪ್ರಾಸ್ತಾವಿಕ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಲಯನ್ಸ್ ಅಧ್ಯಕ್ಷರಾದ ಪ್ರಜ್ಞೇಶ್ ಪ್ರಭು ವಹಿಸಿದರು. ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಕುಂದಾಪುರ ಪುರಸಭಾ ಅಧ್ಯಕ್ಷ
ಮೋಹನ್ ದಾಸ್ ಶೆಣೈ, ಲಯನ್ಸ್ ಜಿಲ್ಲಾ ಗವರ್ನರ್ ಮಹಮ್ಮದ್ ಹನೀಫ್, ಪ್ರಕಾಶ್ ಟಿ ಸೋನ್ಸ್, ಜಯಕರ ಶೆಟ್ಟಿ, ರಾಜೀವ ಕೋಟ್ಯಾನ್, ಲಯನ್ಸ್ ಕೋಶಾಧಿಕಾರಿ ಡಾ. ಜಯರಾಮ್ ನಂಬಿಯಾರ್ ಹಾಗೂ ಲಯನ್ಸ್ ಕ್ಲಬ್ ಕುಂದಾಪುರ ಇದರ ಸರ್ವ ಸದಸ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನ ದಿನಕರ್ ಆರ್ ಶೆಟ್ಟಿ, ನಿರೂಪಿಸಿದರು. ಲಯನ್ಸ್ ಕಾರ್ಯದರ್ಶಿ ಡಾ. ರವೀಂದ್ರ ವಂದನಾರ್ಪಣೆಗೈದರು.