Saturday, June 28, 2025

spot_img

ಮತ್ತಾವು ಗ್ರಾಮದಲ್ಲಿಎರಡನೇ ಬಾರಿ ಪ್ರತ್ಯಕ್ಷವಾದ ಚಿರತೆ

ಕಾರ್ಕಳ : ಕಾರ್ಕಳ ತಾಲೂಕಿನ ಮತ್ತಾವು ಗ್ರಾಮದಲ್ಲಿ ಎರಡನೇ ಬಾರಿ ಪ್ರತ್ಯಕ್ಷ ಆದ ಚಿರತೆ ಮತ್ತಷ್ಟು ಆತಂಕವನ್ನ ಹೆಚ್ಚಿಸಿದೆ. ಈ ಹಿಂದೆ ಸಾಕು ಪ್ರಾಣಿಗಳನ್ನ ಹೊತ್ತೊಯ್ದಿದ್ದ ಚಿರತೆ ಈ ಬಾರಿ ಮತ್ತೊಮ್ಮೆ ಪ್ರತ್ಯೇಕ್ಷ ಆಗಿ ಬೀದಿ ನಾಯಿಯ ಮರಿಯನ್ನ ಹೊತ್ತೊಯ್ಯಲು ಮುಂದಾಗಿದೆ. ಕೂಡಲೇ ತಾಯಿ ಶ್ವಾನ ಚಿರತೆಯನ್ನ ಅಟ್ಟಾಡಿಸಿ ಓಡಿಸಿದೆ. ನಾಯಿ ಮರಿಯನ್ನೇ ಹೊತ್ತೊಯ್ಯಲು ಪ್ರಯತ್ನಿಸಿದ ಘಟನೆ ಸ್ಥಳೀಯ ನಿವಾಸಿಗಳಲ್ಲಿ ಮತ್ತೆ ಆತಂಕ ಹುಟ್ಟಿಸಿದೆ.
ಸ್ಥಳೀಯ ನಿವಾಸಿಯೊಬ್ಬರ ಮನೆಯ ಸಿಸಿಟಿವಿಯಲ್ಲಿ ಚಿರತೆ ದಾಳಿಯ ದೃಶ್ಯಾವಳಿ ಸೆರೆಯಾಗಿದೆ. ಚಿರತೆ ಓಡಾಡಿದ ಪ್ರದೇಶದಲ್ಲಿ ಶಾಲೆಗೆ ಹೋಗುವ ಬಹಳಷ್ಟು ಮಕ್ಕಳಿದ್ದು ಪೋಷಕರಲ್ಲಿ ಆತಂಕಕ್ಕೆ ಕಾರಣವಾಗಿದೆ. ಕೂಡಲೇ ಅರಣ್ಯಾಧಿಕಾರಿಗಳು ಚಿರತೆ ಸೆರೆಹಿಡಿದು ಗ್ರಾಮದಲ್ಲಿ ನೆಮ್ಮದಿಗೆ ಸಹಕರಿಸಿ ಅಂತ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles