ಕೊರಟಗೆರೆ:
ಡಾ.ಶಿವಕುಮಾರ ಮಹಾಸ್ವಾಮಿಗಳು ದೇಶ ಕಂಡಂತ ಸಂತರಲ್ಲಿ ಶ್ರೇಷ್ಠ ಸ್ಥಾನದಲ್ಲಿದ್ದು, ಶೈಕ್ಷಣಿಕವಾಗಿ ಹಾಗೂ ಧಾರ್ಮಿಕವಾಗಿ ಸಮಾಜಕ್ಕೆ ತನ್ನದೇ ಆದಂತಹ ಕೊಡುಗೆ ನೀಡಿದ್ದಾರೆ ಎಂದು ಬೆಳ್ಳಾವಿಯ ಖಾರದ ಮಠದ ಶ್ರೀ ವೀರಬಸವಸ್ವಾಮೀಜಿ ತಿಳಿಸಿದರು.
ಕೊರಟಗೆರೆ ತಾಲೂಕು ಶ್ರೀ ವೀರಶೈವ ಲಿಂಗಾಯಿತ ಸೇವಾ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ತ್ರಿವಿಧ ದಾಸೋಹಿ ಡಾ.ಶಿವಕುಮಾರ ಮಹಾಸ್ವಾ ಮಿಯರವರ 6 ವರ್ಷದ ಪುಣ್ಯ ಸ್ಮರಣೆ ಮತ್ತು ದಾಸೋಹ ಕಾರ್ಯಕ್ರಮದಲ್ಲಿ ಮಾತನಾಡಿ, ಡಾ.ಶಿವಕುಮಾರ ಮಹಾಸ್ವಾಮಿ ಗಳು ಅನ್ನ ಅಕ್ಷರ, ಹಾಗೂ ಜ್ಞಾನದ ದಾಸೋಹ ಗಳನ್ನು ಕರ್ನಾಟಕ ರಾಜ್ಯಕ್ಕೆನೀಡಿದ ಮಹಾತ್ಮರಾಗಿದ್ದಾರೆ .
ರಾಜ್ಯದಲ್ಲಿ ಈ ದಿನವನ್ನು ದಾಸೋಹದ ದಿನ ವನ್ನಾಗಿ ಆಚರಿಸಿದ್ದಾರೆ. ನಮ್ಮಗಳ ಸೌಭಾಗ್ಯ ಏನಂ ದರೆ ನಮ್ಮ ಜೀವಿತಾವಧಿ ಯಲ್ಲಿ 144 ವರ್ಷಗಳ ಪ್ರಯಾಗ್ರಾಜ್ ನ 8ಕೋಟಿ ಜನರ ಬೃಹತ್ ಕುಂಭಮೇಳ ನೋಡುತ್ತಿರುವುದು ಮತ್ತು ಮಹಾನ್ ಸಂತ ಡಾ.ಶಿವಕುಮಾರ ಮಹಾ ಸ್ವಾಮಿ ಗಳ ಭಾರದ ಹೆಜ್ಜೆಯ ಗುರುತುಗಳನ್ನು ಕಂಡಿರು ವುದು ಅವರ ಪುಣ್ಯಸ್ಥರಣೆಯನ್ನು ದಾಸೋಹ ದಿನವನ್ನಾಗಿ ಆಚರಿಸುವುದಾಗಿದೆ ಎಂದರು.
ತಹಶೀಲ್ದಾರ್ ಮಂಜುನಾಥ್ ಮಾತನಾಡಿ, ಡಾ. ಶ್ರೀ ಶಿವಕುಮಾರ ಮಹಾಸ್ವಾಮಿಗಳು ರಾಜ್ಯ ಮತ್ತು ಹೊರ ರಾಜ್ಯ ದಿಂದ ಬಂದಂತಹ ಲಕ್ಷಾಂತರ ಬಡ ಮಕ್ಕಳಿಗೆ ಅನ್ನ ಅಶ್ರಯ, ಅಕ್ಷರ ನೀಡಿ ಸುಸಂಸ್ಕೃತ ಸಮಾಜ ನಿರ್ಮಾಣಕ್ಕೆ ಬುನಾದಿಯಾಗಿದ್ದಾರೆ ಅವರು ಮಾಡುತ್ತಿರುವೆ ಈ ಸೇವೆಗೆ ವಿಶ್ವದಾದ್ಯಂತ ಮೆಚ್ಚುಗೆ ಗಳಿಸಿದ್ದು ನಮ್ಮ ಧರ್ಮ ಹಾಗೂ ಸಂಸ್ಕೃತಿಗೆ ವಿಶ್ವದಲ್ಲೆಡೆ ಗೌರವ ದೊರೆತಿದೆ ಇಂದು ಅವರ ಪುಣ್ಯ ಸ್ಮರಣೆಯನ್ನು ಎಲ್ಲರೂ ಭಕ್ತಿಯಿಂದ ಆಚರಿಸುತ್ತಿದ್ದೇವೆ ಎಂದರು .
ಟ್ರಸ್ಟ್ ಅಧ್ಯಕ್ಷ ಸಿದ್ದಮಲ್ಲಪ್ಪ ಮಾತನಾಡಿ, ಡಾ.ಶಿವಕುಮಾರ ಮಹಾಸ್ವಾಮಿಗಳು ಯಾವುದೇ ಒಂದು ಜಾತಿ ಮತಕ್ಕೆ ಸೀಮಿತವಾದವರಲ್ಲ ಸರ್ವ ಜನಾಂಗದ ಶಾಂತಿ ಮತ್ತು ಬದುಕಿಗೆ ದುಡಿದ ಮಹಾತ್ಮರು ಇವರ ಪುಣ್ಯಸ್ಥರಣೆ ದಿನವನ್ನು ರಾಷ್ಟ್ರೀಯ ದಾಸೋಹ ದಿನಾಚರಣೆಯನ್ನಾಗಿ ಆಚರಿಸಲು ಭಾರತ ಸರ್ಕಾರ ಆದೇಶ ಹೊರಡಿಸಬೇಕು ಹಾಗೂ ಇಂತಹ ಮಹಾನ್ ಚೇತನಕ್ಕೆ ಭಾರತ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ತಾಪಂ ಇ.ಓ.ಅಪೂರ್ವ ಟ್ರಸ್ಟ್ನ ಉಪಾಧ್ಯಕ್ಷ ಹುಚ್ಚಣ್ಣ ಕಾರ್ಯದರ್ಶಿ ನಾಗರಾಜು, ಖಜಾಂಚಿ ಮಂಜುನಾಥ್, ಜಿಲ್ಲಾ ಮಹಿಳಾ ಅಧ್ಯಕ್ಷೆ ಮಮತ, ತಾ.ಅಧ್ಯಕ್ಷೆ ವೇದಾಂಬ, ನಿರ್ದೇಶಕರುಗಳಾದ ಮಧು ಸೂದನ್, ಲಿಂಗರಾಜು, ಶಿವಕುಮಾರ್, ಮಂಜಣ್ಣ ನಟರಾಜು, ಸಿದ್ದಗಂಗಯ್ಯ, ಮುಕ್ಕಣ್ಣ ಮಲ್ಲಣ್ಣ ಮುಖಂಡರುಗಳಾದ ಕಾಮರಾಜು, ರಂಗಣ್ಣ ಸೇರಿದಂತೆ ಇತರರು ಹಾಜರಾಗಿದ್ದರು