Monday, June 30, 2025

spot_img

ಸಿಎಂ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ ಬಿಜೆಪಿ ನಾಯಕಿ ….!

ಬೆಳಗಾವಿ: 

   ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪತ್ರಕರ್ತರು, ನಟರು ಮತ್ತು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಸೇರಿದಂತೆ ಅನೇಕ ಮಹಿಳೆಯರೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಬಿಜೆಪಿ ನಾಯಕಿ ನಾಝಿಯಾ ಇಲಾಹಿ ಖಾನ್ ಆರೋಪಿಸಿದ್ದಾರೆ.

   ಭಾನುವಾರ ಬೆಳಗಾವಿ ಬಳಿಯ ಸುಳೇಭಾವಿಯಲ್ಲಿ ನಡೆದ ಹಿಂದೂ ಸಮಾವೇಶದಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ ನಾಝಿಯಾ, ಮಹಿಳೆಯರೊಂದಿಗೆ ಅನುಚಿತ ವರ್ತನೆಗಾಗಿ ಮುಖ್ಯಮಂತ್ರಿಯನ್ನು ಟಿವಿ ಚಾನೆಲ್‌ಗಳು ಆಗಾಗ್ಗೆ ಗುರಿಯಾಗಿಸಿಕೊಳ್ಳುತ್ತವೆ ಮತ್ತು ಅವರ ಅನುಚಿತ ವರ್ತನೆಯ ಘಟನೆಗಳ ಪಟ್ಟಿಯನ್ನು ಕೊಡುವುದಾಗಿ ಹೇಳಿದರು.

   ‘ನಾನು ಕಳೆದ 32 ವರ್ಷಗಳಿಂದ ಮುಸ್ಲಿಂ ಆಗಿದ್ದರೂ ಕುಂಭ ಮೇಳದಲ್ಲಿ ಪಾಲ್ಗೊಂಡು ಸನಾತನ ಮುಸ್ಲಿಂ’ ಆಗಲು ಗಂಗಾನದಿಯಲ್ಲಿ ಸ್ನಾನ ಮಾಡುವುದಾಗಿ ನಾಝಿಯಾ ಹೇಳಿದರು. ಕಳೆದ 54 ವರ್ಷಗಳಿಂದ ಹಿಂದೂಗಳು ನಿದ್ರೆಯಲ್ಲಿದ್ದಾರೆ. ದೇಶದಲ್ಲಿ ಹಿಂದೂಗಳನ್ನು ಜಾಗೃತಗೊಳಿಸಲು ಈಗ ಹಲವಾರು ಹಿಂದೂ ಸಮಾವೇಶಗಳನ್ನು ನಡೆಸಲಾಗುತ್ತಿದೆ. ನೂರಾರು ವರ್ಷಗಳ ತ್ಯಾಗಗಳು ರಾಮ ಮಂದಿರ ನಿರ್ಮಾಣದೊಂದಿಗೆ ಅಂತಿಮವಾಗಿ ಫಲ ನೀಡಿವೆ ಎಂದು ಅವರು ಪ್ರತಿಪಾದಿಸಿದರು. 

   ಹಸುಗಳ ಹತ್ಯೆ ನಿಲ್ಲಿಸಿ: ದೇಶದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಮತ್ತು ಗೋವುಗಳ ಹತ್ಯೆಯನ್ನು ಕೊನೆಗೊಳಿಸಬೇಕೆಂದು ಅವರು ಕರೆ ನೀಡಿದರು. ವಕ್ಫ್ ಮಂಡಳಿ ಭೂ ಮಾಫಿಯಾ ಎಂದು ಆರೋಪಿಸಿದ ನಾಝಿಯಾ, ಸಂವಿಧಾನದಲ್ಲಿ ವಕ್ಫ್ ಮಂಡಳಿಯ ಬಗ್ಗೆ ಯಾವುದೇ ಉಲ್ಲೇಖವಿಲ್ಲ. ಮುಸ್ಲಿಂ ಮಹಿಳೆಯರು ತಮ್ಮ ಗಂಡಂದಿರಿಗೆ ತಲಾಖ್ ನೀಡಿ, ಹಿಂದುತ್ವವನ್ನು ಸ್ವೀಕರಿಸಿ, ಮರುಮದುವೆಯಾಗುವಂತೆ ಅವರು ಮನವಿ ಮಾಡಿದರು.

Related Articles

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles