ಉಡುಪಿ : ಕಳೆದ ಎರಡು ತಿಂಗಳ ಹಿಂದೆ ತನ್ನ ಕುಟುಂಬ ಹಾಗೂ ಊರಿನ ಪರಿಸರದಲ್ಲಿ ಮಾನಸಿಕ ಅಸ್ವಸ್ತನಾಗಿ ತೊಂದರೆ ಕೊಡುತ್ತಿದ್ದ ವ್ಯಕ್ತಿಯನ್ನು ವಿಶು ಶೆಟ್ಟಿ ರಕ್ಷಿಸಿ ಮಣಿಪಾಲ ಕೆಎಂಸಿಯಲ್ಲಿ ಚಿಕಿತ್ಸೆ ಕೊಡಿಸಿ, ಕೆ ಎಂ ಸಿ ಯ ಅಂಗ ಸಂಸ್ಥೆ ಮಾನಸಿಕ ಅಸ್ವಸ್ಥರ ಪುನಶ್ಚೇತನ ಕೇಂದ್ರ ಹೊಂಬೆಳಕಿಗೆ ದಾಖಲಿಸಿದ್ದು ಇದೀಗ ವ್ಯಕ್ತಿ ಸಹಜಸ್ಥಿತಿಗೆ ಬಂದಿದ್ದು ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ.
ಮಲ್ಪೆ ಠಾಣಾ ವ್ಯಾಪ್ತಿಯ ಸುರೇಶ್ (ಹೆಸರು ಬದಲಿಸಲಾಗಿದೆ) ಮಾನಸಿಕ ಅಸ್ವಸ್ಥ ಮನೆ ಮಂದಿಗೆ ಬದುಕಲು ಬಿಡದೆ, ನೆರೆಹೊರೆ ಸಾರ್ವಜನಿಕರಲ್ಲಿ ಮಹಿಳೆಯರಲ್ಲಿ ಭಯದ ವಾತಾವರಣ, ಹಲ್ಲೆ ನಡೆಸಿದ್ದು ಈ ಬಗ್ಗೆ ಸಾರ್ವಜನಿಕರ ವಿನಂತಿಗೆ ಸ್ಪಂದಿಸಿದ ವಿಶು ಶೆಟ್ಟಿ ವ್ಯಕ್ತಿಗೆ ಕೆಎಂಸಿಯಲ್ಲಿ ಮೊದಲು ಚಿಕಿತ್ಸೆ ಕೊಡಿಸಿ ದೀರ್ಘಕಾಲದ ಚಿಕಿತ್ಸೆ ಹಾಗೂ ಸಮಾಲೋಚನೆ ಹಾಗೂ ನೆಲೆಗಾಗಿ ಕೆ ಎಂ ಸಿ ಯ ಅಂಗ ಸಂಸ್ಥೆ ಹೊಂಬೆಳಕು ಕೇಂದ್ರಕ್ಕೆ ದಾಖಲಿಸುವಂತೆ ಮುಖ್ಯಸ್ಥರನ್ನು ವಿಶು ಶೆಟ್ಟಿ ವಿನಂತಿಸಿದರು. ವಿನಂತಿಗೆ ಸ್ಪಂದಿಸಿದ ಮುಖ್ಯಸ್ಥರು ದಾಖಲಿಸಿಕೊಂಡು ಎರಡು ತಿಂಗಳ ಉಚಿತ ಚಿಕಿತ್ಸೆ ಹಾಗೂ ನೆಲೆ ನೀಡಿ ರೋಗಿಯನ್ನು ಸಾಮಾನ್ಯ ವ್ಯಕ್ತಿಯ ಹಾಗೆ ಪರಿವರ್ತಿಸಿ ಕುಟುಂಬಕ್ಕೆ ಹಸ್ತಾಂತರಿಸಿದ್ದಾರೆ. ಜೊತೆಗೆ ಆತನಿಗೆ ದೀರ್ಘಕಾಲದ ಚಿಕಿತ್ಸೆ ಬೇಕಾಗಿರುವುದರಿಂದ ಔಷಧಿ ಪ್ರತಿ ತಿಂಗಳು ಉಚಿತವಾಗಿ ರೋಗಿಯ ಮನೆಗೆ ಬಂದು ನೀಡುವುದಾಗಿ ಹೊಂಬೆಳಕು ಸಂಸ್ಥೆಯವರು ಭರವಸೆ ನೀಡಿದ್ದಾರೆ. ವಿಶು ಶೆಟ್ಟಿ ಹೊಂಬೆಳಕು ಸಂಸ್ಥೆಯವರು ನೀಡಿದ ಸೇವೆಗೆ ಕೃತಜ್ಞತೆ ಸಲ್ಲಿಸಿದ್ದಾರೆ.