Saturday, June 28, 2025

spot_img

ಮಜೂರಿನ ಈ ಅಶಕ್ತ ಕುಟುಂಬಕ್ಕೆ ಬೇಕಿದೆ ಸಮಾಜದ ನೆರವು

ಉಡುಪಿ : ಸೆಂಟ್ರಿಂಗ್ ಕೆಲಸ ಮಾಡಿಕೊಂಡು ಕುಟುಂಬವನ್ನು ಪೋಷಿಸುತ್ತಿದ್ದ ಕಾಪು ಮಜೂರು ನಿವಾಸಿ ಜಗದೀಶ ಆಚಾರ್ಯ ಅವರು ರಕ್ತ ಸಂಬಂಧಿ ಕಾಯಿಲೆಗೆ ತುತ್ತಾಗಿ ಕೆಲಸ ಮಾಡಲಾಗದೆ ಅಸಹಾಯಕ ಸ್ಥಿತಿಯಲ್ಲಿದ್ದಾರೆ. ಇವರ ದುಡಿತವನ್ನೇ ನಂಬಿಕೊಂಡಿರುವ ಕುಟುಂಬ (ಪತ್ನಿ, ಇಬ್ಬರು ಮಕ್ಕಳು,ತಾಯಿ ಹಾಗೂ ಮಾನಸಿಕ ಅಸ್ವಸ್ಥತೆ ಹೊಂದಿರುವ ತಂಗಿ ) ಕಂಗಾಲಾಗಿದ್ದು, ಸಮಾಜದ ಸಹೃದಯರ ನೆರವನ್ನು ಎದುರು ನೋಡುತ್ತಿದ್ದಾರೆ. ಇದೀಗ ವೈದ್ಯರು ರೋಗಿಗೆ ಸೆಂಟ್ರಿಂಗ್ ಕೆಲಸ ಮಾಡುವಂತಿಲ್ಲ. ಔಷಧಿ ಜೊತೆಗೆ ದೀರ್ಘ ಕಾಲದ ವಿಶ್ರಾಂತಿ ಪಡೆಯುವಂತೆ ಸೂಚಿಸಿರುವುದು ಕುಟುಂಬವನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿದೆ. ಬೇರೆ ಯಾವುದಾದರೂ ಸ್ವಂತ ಉದ್ಯೋಗ ನಡೆಸಲು ಈ ಕುಟುಂಬಕ್ಕೆ ಆರ್ಥಿಕ ಅಡಚಣೆಯಿಂದ ಸಾಧ್ಯವಾಗುತ್ತಿಲ್ಲ. ಹೀಗಾಗಿ ಸಮಾಜದ ನೆರವನ್ನು ಯಾಚಿಸುತ್ತಿದ್ದಾರೆ.

ಕುಟುಂಬದ ನೋವಿಗೆ ಸ್ಪಂದಿಸಿದ ಸಮಾಜ ಸೇವಕ ವಿಶು ಶೆಟ್ಟಿ ಹಾಗೂ ಇನ್ನೊರ್ವ ದಾನಿ ಅವರು ಕಳೆದ ಮೂರು ತಿಂಗಳಲ್ಲಿ ಕುಟುಂಬದ ದಿನ ಖರ್ಚು ಹಾಗೂ ಔಷಧಿಗೆ ರೂ.50,000/- ನೀಡಿ ಸಹಕರಿಸಿದ್ದಾರೆ. ಅಲ್ಲದೆ ಅಜ್ಜರಕಾಡಿನ ದಾನಿ ಆಶಾ ಅಡ್ಯಂತಾಯ ಅವರು ಕುಟುಂಬದ ಸಂಕಷ್ಟಕ್ಕೆ ಸ್ಪಂದಿಸಿ ರೂ.30,000/- ನೀಡಿ ಮಾನವೀಯತೆ ಮೆರೆದಿದ್ದಾರೆ. ಈ ಕುಟುಂಬಕ್ಕೆ ನೆರವು ನೀಡಲು ಬಯಸುವವರು ಜಗದೀಶ್ ಆಚಾರ್ಯ, ಕೆನರಾ ಬ್ಯಾಂಕ್ ಕಾಪು, ಸೇವಿಂಗ್ಸ್ ಅಕೌಂಟ್ ನಂ. 01252210019183, ಐಎಫ್‌ಸಿ ಕೋಡ್ CNRB0010125 ನ್ನು ಸಂಪರ್ಕಿಸಬಹುದು. ಫೋನೆಪೇ ಮೂಲಕ ಸಹಕರಿಸುವವರು ಜಗದೀಶ್ ಆಚಾರ್ ಅವರ ಫೋನ್ ನಂಬರ್ 6361467241 ಗೆ ಕಳುಹಿಸಬಹುದು ಎಂದು ವಿಶು ಶೆಟ್ಟಿ ಮನವಿ ಮಾಡಿದ್ದಾರೆ.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles