Saturday, June 28, 2025

spot_img

ಬಿಜೆಪಿ ಶಾಸಕರು ಆತ್ಮಾವಲೋಕನ ಮಾಡಿಕೊಳ್ಳಿ…

ಬೆಂಗಳೂರು : ರಾಜ್ಯ ಬಜೆಟ್ ಕುರಿತಾಗಿ ಕರಾವಳಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡಲಾಗಿಲ್ಲ ಎನ್ನುವ ಕರಾವಳಿಯ ಬಿಜೆಪಿ ಶಾಸಕರು ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಅಗತ್ಯತೆ ಇದೆ ಎಂದು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಸದಸ್ಯರು, ಹಿರಿಯ ನ್ಯಾಯವಾದಿ ಅರುಣ್‌ ಕುಂದರ್‌ ಕಲ್ಗದ್ದೆ ಹೇಳಿದ್ದಾರೆ.

ರಾಜ್ಯ ಬಜೆಟ್‌ ಕುರಿತು ಬಿಜೆಪಿಗರ ಹೇಳಿಕೆ ಪ್ರತಿಕ್ರಿಯಿಸಿ, ಕಳೆದ ಕೆಲವು ಅವಧಿ ಯಿಂದ ಕರಾವಳಿಯಲ್ಲಿ ಅದರಲ್ಲೂ ಬಹು ಮುಖ್ಯವಾಗಿ ಉಡುಪಿ ಜಿಲ್ಲೆಯಲ್ಲಿ ಬಿಜೆಪಿ ಶಾಸಕರೇ ಆಯ್ಕೆಯಾಗಿ ಬರುತ್ತಿದ್ದಾರೆ. ಉಡುಪಿ ಜಿಲ್ಲೆಯ ಬೇಡಿಕೆಗಳು ಏನು ಸಮಸ್ಯೆಗಳು ಏನು ಎನ್ನುವುದು ಇಲ್ಲಿನ ಶಾಸಕರಿಗೆ ಸ್ಪಷ್ಟವಾಗಿ ತಿಳಿದಿದೆ. ಸರಕಾರಿ ವೈದ್ಯಕೀಯ ಕಾಲೇಜು ಉಡುಪಿ ಜಿಲ್ಲೆಗೆ ಬೇಕು ಎನ್ನುವ ಕೂಗು ಇಂದು ನಿನ್ನೆದಲ್ಲ, ಬ್ರಹ್ಮಾವರದ ಕೃಷಿ ಕಾಲೇಜಿನ ಬೇಡಿಕೆ ಇರಬಹುದು, ಮರುಳುಗಾರಿಕೆ ಕುರಿತಾಗಿರುವ ಗೊಂದಲ ನಿವಾರಣೆ ಇರಬಹುದು, ಮೀನುಗಾರರ ಸಮಸ್ಯೆ ಹೀಗೆ ಸಮಸ್ಯೆಗಳ ಸರಮಾಲೆ ಜಿಲ್ಲೆಯಲ್ಲಿದೆ‌. ಇಷ್ಟು ಅವಧಿಗಳಲ್ಲಿ ಆರಿಸಿ ಬಂದ ನೀವು ನಿಮ್ಮ ಸರಕಾರ ರಾಜ್ಯದಲ್ಲಿದ್ದಾಗ ಈ ಸಮಸ್ಯೆಗಳು ನಿಮಗೆ ಕಾಣಲಿಲ್ಲವೇ. ಕೇವಲ ಕೋಳಿ ಅಂಕವನ್ನು ಬೇಡಿಕೆ ಎನ್ನುವಂತೆ ಮುಂದಿಟ್ಟು ಸದನದಲ್ಲಿ ಶಾಸಕರುಗಳು ಮಾತನಾಡುತ್ತಾರೆ. ಹಾಸ್ಯ ಮಾಡುತ್ತಾರೆ. ಅಗತ್ಯ ಆಗಬೇಕಾದ ಸಮಸ್ಯೆಗಳ ನಿವಾರಣೆಯ ಕುರಿತು ಸದನದಲ್ಲಿ ಚರ್ಚೆ ನಡೆಸಿ ಯೋಜನೆ ಅನುಷ್ಠಾನ ಮಾಡುವಂತಹ ಆ ಸಮಯವನ್ನ ವಿನಿಯೋಗಿಸಬಹುದಿತ್ತು, ಆದರೆ ಅದನ್ನ ಬಿಟ್ಟು ಕಾಲಹರಣ ಮಾಡಿರುವುದು ಎಷ್ಟು ಸರಿ. ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದ ಮಂಗಳೂರಿನ ಅಶೋಕ್ ರೈ ವೈದ್ಯಕೀಯ ಕಾಲೇಜು ಬೇಕು ಎಂದು ಪಟ್ಟು ಹಿಡಿದು ಅದನ್ನು ಪಡೆಯುತ್ತಾರೆ. 3 4 ಅವಧಿಗೆಯಲ್ಲಿ ಅಧಿಕಾರ ಹಿಡಿದ ಜಿಲ್ಲೆಯ ಬಿಜೆಪಿ ಶಾಸಕರು ಯಾವುದಕ್ಕೆ ಪಟ್ಟು ಹಿಡಿದಿದ್ದೀರಿ. ಹಾಗಾಗಿ ಸಿದ್ದರಾಮಯ್ಯ ಸರಕಾರ ಮಾಡಿದ ಯೋಜನೆಗಳನ್ನ ದೂರುತ್ತಾ ಕಾಲಹರಣ ಮಾಡುವ ಬದಲು ಜಿಲ್ಲೆಯ ಮೂಲಭೂತ ಸಮಸ್ಯೆಗಳ ಬಗ್ಗೆ ಗಮನಹರಿಸಿ ಅದನ್ನ ಪರಿಹರಿಸುವ ನಿಟ್ಟಿನಲ್ಲಿ ಶಾಸಕರು ಪ್ರಯತ್ನಿಸಬೇಕಾದ ಅಗತ್ಯತೆ ಇದೆ ದೂರುತ್ತ ಕುಳಿತರೆ ಕಾಲ ಸರಿಯುತ್ತದೆ ಹೊರತು ಸಮಸ್ಯೆ ಪರಿಹಾರವಾಗುವುದಿಲ್ಲ

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles