ಬ್ರಹ್ಮಾವರ : ಬ್ರಹ್ಮಾವರ ತಾಲೂಕು ಶ್ರೀ ಜ್ಞಾನಶಕ್ತಿ ಸ್ಥಾನಿಕ ಬ್ರಾಹ್ಮಣ ಸಭಾ (ರಿ) , ಡಾ. ಎ.ಎಲ್ ರಾವ್ , ನೇತ್ರ ತಜ್ಞರು , ಮಿತ್ರ ಆಸ್ಪತ್ರೆ ಉಡುಪಿ ಮತ್ತು ಐ ಆಪ್ಟಿಕಲ್ಸ್ ಉಡುಪಿ ಮಣಿಪಾಲ ಇವರ ಆಶ್ರಯದಲ್ಲಿ ಕಣ್ಣಿನ ತಪಾಸಣಾ ಶಿಬಿರ ವನ್ನು ಶ್ರೀ ಜ್ಞಾನಶಕ್ತಿ ಸ್ಥಾನಿಕ ಬ್ರಾಹ್ಮಣ ಸಭಾ (ರಿ) ಬ್ರಹ್ಮಾವರ ಇದರ ಕೇಂದ್ರ ಕಛೇರಿಯಾದ ಓಂ ಶ್ರೀ ಚೌಳಿಕೆರೆ ಬಾರ್ಕೂರು ಇಲ್ಲಿ ನೆರವೇರಿತು.

ಶಿಬಿರವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಲಾಯಿತು. ಡಾ. ಎ.ಎಲ್ ರಾವ್ ಇವರು ನೇತ್ರದ ಕಾಳಜಿಯ ಮಹತ್ವದ ಬಗ್ಗೆ ಮಾಹಿತಿ ನೀಡಿದರು. ಐ ಆಪ್ಟಿಕಲ್ಸ್ ನ ಗಜಾನನ ನಾಯಕ್ ಮತ್ತು ಸಿಬ್ಬಂದಿ ವರ್ಗದವರು ಸಹಕರಿಸಿದರು. ಸಂಘದ ಅಧ್ಯಕ್ಷರಾದ ಶ್ರೀಯುತ ಶಂಭುಶಂಕರರಾವ್ ಅಧ್ಯಕ್ಷತೆ ವಹಿಸಿದ್ದರು. ಸಂಘದ ಸಂಚಾಲಕರಾದ ಉದಯ ಬಾರ್ಕೂರು, ಖಜಾಂಚಿಯಾದ ನೀಲಕಂಠ ರಾವ್ ಹವರಾಲು , ಯುವ ವೇದಿಕೆಯ ಅಧ್ಯಕ್ಷರಾದ ರಾಮಚಂದ್ರ ರಾವ್ ಹೆರಂಜೆ ಉಪಸ್ಥಿತರಿದ್ದರು.
ಕುಮಾರಿ ನಮನಾ ಬಿ.ಕೆ ಪ್ರಾರ್ಥಿಸಿದರು. ಸಂಘದ ಕಾರ್ಯದರ್ಶಿ ಶ್ರೀಮತಿ ಸವಿತಾ ಎರ್ಮಾಳ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.