ಮುಂಬಯಿ: ದೇಶಾದ್ಯಂತ ಅನೇಕ ರಾಜ್ಯಗಳಲ್ಲಿ ಬಾಂಗ್ಲಾದೇಶದ ನುಸುಳುಕೋರರ ಸಂಖ್ಯೆ ಭಯಾನಕವಾಗಿ ಹೆಚ್ಚಾಗುತ್ತಿದೆ. ಇದರಿಂದ ರಾಜ್ಯದ ಸುರಕ್ಷೆತೆಗೆ ದೊಡ್ಡ ಅಪಾಯ ನಿರ್ಮಾಣವಾಗಿದ್ದು ಸಾಮಾಜಿಕ ಅಸ್ಥಿರತೆ, ಅಪರಾಧಗಳಲ್ಲಿ ಹೆಚ್ಚಳ, ನಿರುದ್ಯೋಗ ಸಮಸ್ಯೆ, ಹಾಗೂ ಸುಳ್ಳು ದಾಖಲೆಗಳನ್ನು ಪಡೆದು ವಾಸಿಸುವವರ ದೊಡ್ಡ ಜಾಲವೇ ರಾಜ್ಯಗಳಲ್ಲಿ ಸಕ್ರಿಯವಾಗಿರುವುದು ಕಂಡುಬರುತ್ತಿದೆ. ಈ ಹಿನ್ನೆಲೆಯಲ್ಲಿ ಸಂಪೂರ್ಣ ದೇಶದಲ್ಲಿ ಪಶ್ಚಿಮ ಬಂಗಾಳ, ಅಸ್ಸಾಂ ನಂತಹ ಸ್ಥಿತಿ ನಿರ್ಮಾಣವಾಗುವ ಮೊದಲು ಕೇಂದ್ರ ಮತ್ತು ರಾಜ್ಯ ಸರಕಾರಗಳು ದೇಶದಲ್ಲಿನ ಬಾಂಗ್ಲಾದೇಶಿ ನೂಸುಳುಕೋರರ ಶೋಧ ಅಭಿಯಾನ ನಡೆಸಿ ಎಲ್ಲಾ ಬಾಂಗ್ಲಾದೇಶಿ ನುಸುಳುಕೋರರನ್ನು ಹುಡುಕಿ ಮತ್ತು ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ ಅವರನ್ನು ದೇಶದಿಂದ ಹೊರಗಟ್ಟಬೇಕೆಂದು ಹಿಂದೂ ಜನಜಾಗೃತಿ ಸಮಿತಿಯ ವಕ್ತಾರ ಸತೀಶ್ ಕೋಚರೆಕರ ಇವರು ಆಗ್ರಹಿಸಿದ್ದಾರೆ.

ಅವರು ಮುಂಬಯಿ ಮರಾಠಿ ಪತ್ರಕರ್ತರ ಸಂಘದಲ್ಲಿ ಫೆಬ್ರುವರಿ 3 ರಂದು ಆಯೋಜಿಸಿರುವ ಪತ್ರಕರ್ತರ ಸಭೆಯಲ್ಲಿ ಮಾತನಾಡುತ್ತಿದ್ದರು. ಈ ಅಭಿಯಾನದ ನಿಮಿತ್ತ ಜನಜಾಗೃತಿಗಾಗಿ ಸಂಪೂರ್ಣ ದೇಶದಲ್ಲಿ ಪ್ರತಿಭಟನೆಗಳು, ಮೋರ್ಚಾಗಳು , ಸಹಿ ಅಭಿಯಾನ, ಪೊಲೀಸರಲ್ಲಿ ದೂರುಗಳು ದಾಖಲಿಸುವುದು ಹೀಗೆ ಆಯೋಜನೆ ಕೂಡ ನಾವು ಮಾಡುವವರಿದ್ದೇವೆ ಎಂದು ಕೋಚರೇಕರ ಇವರು ಹೇಳಿದರು. ಈ ಸಮಯದಲ್ಲಿ ಸನಾತನ ಸಂಸ್ಥೆಯ ವಕ್ತಾರರಾದ ಅಭಯ ವರ್ತಕ, ಮುಂಬಯಿ ಉಚ್ಚ ನ್ಯಾಯಾಲಯದ ನ್ಯಾಯವಾದಿ ರಾಹುಲ ಪಾಟಕರ ಇವರು ಕೂಡ ಉಪಸ್ಥಿತರಿದ್ದರು.
ಮುಂಬಯಿ ಉಚ್ಚ ನ್ಯಾಯಾಲಯದ ನ್ಯಾಯವಾದಿ ರಾಹುಲ ಪಾಟಕರ ಮಾತನಾಡುತ್ತಾ, ಬಾಂಗ್ಲಾದೇಶಿ ನುಸುಳುಕೋರರು ದೇಶದಲ್ಲಿನ ಉದ್ಯೋಗ ಕಸಿದುಕೊಳ್ಳುತ್ತಿದ್ದಾರೆ. ಮಹಾರಾಷ್ಟ್ರದಲ್ಲಿನ ಸಂಭಾಜಿ ನಗರ ಜಿಲ್ಲೆಯ ಸಿಲ್ಲೋಡದಲ್ಲಿ ಒಂದು ಲಕ್ಷಕ್ಕಿಂತಲೂ ಹೆಚ್ಚಿನ ಬಾಂಗ್ಲಾದೇಶಿ ನುಸುಳುಕೋರರಿಗೆ ನಕಲಿ ಪ್ರಮಾಣ ಪತ್ರ ಹಂಚುತ್ತಿರುವ ಅತ್ಯಂತ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ರತ್ನಗಿರಿ ಜಿಲ್ಲೆಯ ಚಿಪಳುನ್ ನಲ್ಲಿ 13 ಬಾಂಗ್ಲಾದೇಶಿ ನಾಗರಿಕರಲ್ಲಿ 3 ಜನರನ್ನು ಬಂಧಿಸಲಾಗಿದೆ; ಇದರಲ್ಲಿಯೂ ಸಹ ಪೊಲೀಸರು ಈ ಪ್ರಕರಣ ಸರಿಯಾಗಿ ಪರಿಶೀಲಿಸದ ಕಾರಣ ಬಾಂಗ್ಲಾದೇಶಿ ನುಸುಳುಕೋರರಿಗೆ ಜಾಮೀನು ಸಿಕ್ಕಿದೆ, ಇದು ಬಹಳ ಗಂಭೀರ ವಿಷಯವಾಗಿದೆ. ದೇಶದ ನ್ಯಾಯ ವ್ಯವಸ್ಥೆ ಬಾಂಗ್ಲಾದೇಶಿ ನುಸುಳುಕೋರರಿಗೆ ಜಾಮೀನು ನೀಡುವುದು ನ್ಯಾಯ ದೇವತೆಯ ಅವಮಾನವಾಗಿದೆ.
ಪ್ರಸ್ತುತ ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿದೆ. ನಾಳೆ ಇದೇ ಬಾಂಗ್ಲಾದೇಶಿ ನುಸುಳುಕೋರರು ಹೆಚ್ಚಾಗಿ ಭಾರತದಲ್ಲಿ ಚಿಕ್ಕ ಬಾಂಗ್ಲಾದೇಶ ನಿರ್ಮಿಸಿ ಅಲ್ಲಿಯ ಹಿಂದೂಗಳ ಮೇಲೆ ಹೀಗೆ ದೌರ್ಜನ್ಯ ನಡೆಸುವರು, ಈ ಪರಿಸ್ಥಿತಿ ಬರಬಾರದೆಂದರೆ, ಈ ಪ್ರಕರಣದಲ್ಲಿ ಸರಕಾರವು ಈಗಲೇ ಕಠಿಣ ಕ್ರಮ ಕೈಗೊಳ್ಳಬೇಕು, ಎಂದು ಹಿಂದೂ ಜನಜಾಗೃತಿ ಸಮಿತಿಯ ವಕ್ತಾರ ಕೋಚರೆಕರ ಹೇಳಿದರು.