ಗಂಗೊಳ್ಳಿ : ದೈವ ನರ್ತಕ ಕೀರ್ತಿಶೇಷ ಶ್ರೀ ದೇವಯ್ಯ ಖಾರ್ವಿ, ಗಂಗೊಳ್ಳಿ ಇವರ 51 ನೇ ವರ್ಷದ ಸಂಸ್ಮರಣಾರ್ಥ ಶ್ರೀ ಚಕ್ರೇಶ್ವರೀ ದೇವಸ್ಥಾನದಲ್ಲಿ “ಋಗ್-ಋಜು ಸಂಹಿತಾ” ಯಾಗ, “ಶ್ರೀ ಬಾಲ ತ್ರಿಪುರ ಸುಂದರಿ ಲಕ್ಷತ್ರಯಂ ಸ್ವಾಹಾಕಾರ” ಯಾಗ ಮತ್ತು “ಶ್ರೀ ಲಲಿತೋಪಾಖ್ಯಾನಂ ಪಾರಾಯಣ ಸಪ್ತಾಹ” ನಡೆಯಿತು.

ಈ ಪ್ರಯುಕ್ತ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಬನ್ನಾಡಿ ಯ ಉಪ್ಲಾಡಿ ಶ್ರೀ ಗೋಪಾಲಕೃಷ್ಣ ದೇವಸ್ಥಾನ ದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾಗಿ, ಕುಂದಾಪುರ ವಕೀಲರ ಸಂಘದಲ್ಲಿ ಎರಡು ಬಾರಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಲಯನ್ಸ್ ಪ್ರಾಂತ್ಯಾಧ್ಯಕ್ಷರೂ ಆದ ನ್ಯಾಯವಾದಿ ಶ್ರೀಯುತ ಬನ್ನಾಡಿ ಸೋಮನಾಥ ಹೆಗ್ಡೆ ಯವರನ್ನು ಅವರ ಸುಧೀರ್ಘ ಧಾರ್ಮಿಕ, ಸಾಮಾಜಿಕ ಮತ್ತು ನ್ಯಾಯಾಂಗ ಕ್ಷೇತ್ರದಲ್ಲಿ ಸಲ್ಲಿಸಿದ ಗಣನೀಯ ಸೇವೆಯನ್ನು ಗುರುತಿಸಿ ಸಕಲ ಗೌರವಾದರಗಳೊಂದಿಗೆ “ಶ್ರೀ ಚಕ್ರೇಶ್ವರೀ ಸೇವಾರತ್ನ ಪ್ರಶಸ್ತಿ” ಯನ್ನು ನೀಡಿ ಗೌರವಿಸಲಾಯಿತು.

ಈ ಸಂದರ್ಭ ಕರ್ನಾಟಕ ರಾಜ್ಯ ಸರಕಾರದ ಮಾನ್ಯ ಮುಜರಾಯಿ ಮತ್ತು ಸಾರಿಗೆ ಸಚಿವರಾದ ಶ್ರೀ ರಾಮ ಲಿಂಗಾ ರೆಡ್ಡಿ, ಹಿಮಾಲಯದ ಹಿಮವದ್ ಶ್ರೀ ಕೇದಾರನಾಥ ಜ್ಯೋತಿರ್ಲಿಂಗ ದೇವಾಲಯದ ಪ್ರಧಾನ ಅರ್ಚಕರಾದ ಶ್ರೀ ವಾಗೀಶ್ ಲಿಂಗ ಶಿವಾಚಾರ್ಯರು, ಪುತ್ತೂರು ಸಂಪ್ಯದ ಕುಕ್ಕಾಡಿ ತಂತ್ರಿ ಶ್ರೀ ಪ್ರೀತಂ ಪುತ್ತೂರಾಯರು, ನ್ಯೂಸ್ ಫಸ್ಟ್ ಟಿ ವಿ ಚಾನಲ್ ನ ಮಾಲಕ ರವಿ ಕುಮಾರ್, ಶ್ರೀ ದೇವಯ್ಯ ಪ್ರತಿಷ್ಠಾನ (ರಿ) ಅಧ್ಯಕ್ಷ ವಿನಾಯಕ್ ಗಂಗೊಳ್ಳಿ, ಗಂಗೊಳ್ಳಿಯ ಶ್ರೀ ಚಕ್ರೇಶ್ವರೀ ದೇವಸ್ಥಾನ ದ ಆಡಳಿತ ಮಂಡಳಿಯ ಅಧ್ಯಕ್ಷ ರಾಮದಾಸ್ ಖಾರ್ವಿ ಹಾಗೂ ಸದಸ್ಯರು ಉಪಸ್ಥಿತರಿದ್ದರು.