ಉಡುಪಿ : ನಿನ್ನೆ ಆಗಿರೋದು ಯಾರ ಫಂಕ್ಷನ್ನು? ಅದೇನು ನನ್ನ ಕಾರ್ಯಕ್ರಮನಾ? ಫಿಲಂ ಇಂಡಸ್ಟ್ರಿ ಸತ್ತು ಹೋಯಿತು, ಥಿಯೇಟರಗಳು ಮುಚ್ಚಿಹೋಯಿತು ಅಂತಾರೆ. ನಮ್ಮ ಊಟ ಹೋಯಿತು ಅಂತ ಮಾತಾಡ್ತಾರೆ. ಅಂತರಾಷ್ಟ್ರೀಯ ಚಲನ ಚಿತ್ರೋತ್ಸವ ಯಾರಿಗೋಸ್ಕರ ಮಾಡೋದು? ಎಂದು ಸಿನಿಮಾ ರಂಗಕ್ಕೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಉಡುಪಿಯಲ್ಲಿ ಮತ್ತೊಮ್ಮೆ ಎಚ್ಚರಿಕೆ ನೀಡಿದ್ದಾರೆ.

ನಿನ್ನೆ ಬೆಂಗಳೂರು ವಿಧಾನಸೌಧದ ಗ್ರಾಂಡ್ ಸ್ಟೆಪ್ಸ್ ನಲ್ಲಿ ಆಯೋಜಿಸಲಾದ 16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನ ಚಲನಚಿತ್ರೋತ್ಸವದಲ್ಲಿ ಬಹುತೇಕ ಸಿನಿ ರಂಗದ ಕಲಾವಿದರು ಭಾಗವಹಿಸದೆ ಇರುವುದರ ಬಗ್ಗೆ ಉಡುಪಿಯಲ್ಲಿ ಅಕ್ರೋಶ ಹೊರ ಹಾಕಿದ ಡಿಕೆಶಿ, ಇಂಡಸ್ಟ್ರಿ ಅಂತ ಹೇಳಿದರೆ ಕ್ಯಾಮರಾ ಮೆನ್, ಸ್ಕ್ರಿಪ್ಟ್ ರೈಟರ್, ನಟರು, ನಿರ್ದೇಶಕರು ಎಲ್ಲರೂ ಬರಬೇಕು. ಅವರ ಹಬ್ಬದಲ್ಲಿ ಅವರೇ ಇಲ್ಲ ಅಂದರೆ ಹೇಗೆ? ಎಂದು ಪ್ರಶ್ನಿಸಿದ್ದಾರೆ.ಆರ್. ಅಶೋಕ್ ಬೇಕಾದ್ರೆ ತಲೆ ಕೆಳಗೆ ಮಾಡಿಕೊಳ್ಳಲಿ, ನಾವು ಐಟಿ ಬಿಟಿ, ಇನ್ವೆಸ್ಟರ್ಸ್ ಮೀಟ್ ಮಾಡುತ್ತೇವೆ.ಅವರನ್ನು ಕಾಂಗ್ರೆಸ್ ಕಾರ್ಯಕರ್ತರು ಅನ್ನೋಕೆ ಆಗುತ್ತಾ? ಎಂದಿದ್ದಾರೆ. ಈವೇಳೆ ಬಿಜೆಪಿ ನಾಯಕರನ್ನು ಟೀಕಿಸಿದ ಡಿಕೆಶಿ,ಗೃಹಲಕ್ಷ್ಮಿ ಗ್ರಹ ಜ್ಯೋತಿ ಕಾಂಗ್ರೆಸ್ ನವರಿಗೆ ಮಾತ್ರ ಕೊಡ್ತಾ ಇದ್ದೇವಾ?ಬಿಜೆಪಿ ಕಾರ್ಯಕರ್ತರು ಯಾರು ಗ್ಯಾರಂಟಿ ಯೋಜನೆ ತೆಗೆದುಕೊಳ್ಳಬೇಡಿ ಎಂದು ಕರೆ ಕೊಟ್ಟುಬಿಡ್ಲಿ..ಕಾಂಗ್ರೆಸ್ ಕೊಟ್ಟ ಕಾರ್ಯಕ್ರಮ ನೀವ್ಯಾರು ತಗೋಳಬೇಡಿ ಅಂತ ಹೇಳಿ ನೋಡ್ಲಿ… ಎಲ್ಲಾ ಪಕ್ಷದವರು ಸೌಲಭ್ಯಗಳನ್ನು ಎಂಜಾಯ್ ಮಾಡ್ತಾ ಇದ್ದಾರೆ. ಜನರು ಕರೆಕ್ಟ್ ಆಗಿ ಇದ್ದಾರೆ, ಆದರೆ ನಾಯಕರಿಗೆ ನಮಗೆ ಅವಕಾಶ ಸಿಕ್ಕಿಲ್ಲ ಅನ್ನುವ ಹೊಟ್ಟೆ ಉರಿ ಎಂದು ವ್ಮಂಗ್ಯವಾಡಿದರು.
ಸಿನಿಮಾ ರಂಗದವರು ಏನು ಬೇಕಾದರೂ ಮಾತನಾಡಿಕೊಳ್ಳಲಿ, ನನಗೆ ಗೊತ್ತಿರುವ ಸತ್ಯ ಹೇಳಿದ್ದೇನೆ. ಅವರು ಬೇಕಿದ್ದರೆ ಪ್ರತಿಭಟನೆ ಮಾಡಲಿ ಹೋರಾಟ ಮಾಡಲಿ ಎಂದರು. ನಮ್ಮ ನೀರು, ನಮ್ಮ ಹಕ್ಕಿನ ಹೋರಾಟಕ್ಕೆ ಅವರು ಬಂದಿಲ್ಲ. ನೆಲ ಜಲದ ವಿಚಾರದಲ್ಲಿ ಪಕ್ಷಾತೀತವಾಗಿ ನಾವು ಹೋರಾಟ ಮಾಡಿದ್ದೇವೆ. ಮೇಕೆದಾಟು ಯಾತ್ರೆ ಮಾಡುವಾಗ ಯಾರು ಬರಲಿಲ್ಲ. ಕೇಳಿದ್ರೆ ನೆಲ ಜಲದ ವಿಚಾರದಲ್ಲಿ ಹೋರಾಟ ಮಾಡುತ್ತೇವೆ ಎನ್ನುತ್ತಾರೆ. ಆದ್ರೆ ಯಾರೂ ಬರಲ್ಲ. ಪ್ರೇಮ್, ದುನಿಯಾ ವಿಜಿ , ಸಾಧುಕೋಕಿಲ ಬಂದು ಕೇಸು ಹಾಕಿಸಿಕೊಂಡರು. ಬಿಜೆಪಿಯವರು ಅವರ ಮೇಲೆ ಕೇಸು ಹಾಕಿದರು ಎಂದು ಡಿಕೆಶಿ ಅಕ್ರೋಶ ಹೊರ ಹಾಕಿದರು.