ಉಡುಪಿ : ಸಾಗರ ಬಂಟರ ಸಂಘದ ಆಶಾ ಪ್ರಕಾಶ್ ಶೆಟ್ಟಿ ಬಂಟರ ಭವನ ಸಾಗರ ಕಟ್ಟಡ ನಿರ್ಮಾಣ ಅಂತಿಮ ಹಂತದಲ್ಲಿದ್ದು ಅಕ್ಟೋಬರ್ ಅಥವಾ ನವೆಂಬರ್ ತಿಂಗಳಿನಲ್ಲಿ ಲೋಕಾರ್ಪಣೆ ಗೊಳ್ಳುತ್ತಿದೆ. ಕಟ್ಟಡ ಸಹಾಯಾರ್ಥ ಪ್ರಯುಕ್ತ ಇಂದು ಮಂಗಳೂರಿನಲ್ಲಿ ಯಲ್ಲಿ ಬಂಟರ ಸಮುದಾಯದ ನಾಯಕ, ಕರುನಾಡ ಕಣ್ಮಣಿ, ಮಹಾದಾನಿ ಡಾ. ಪ್ರಕಾಶ್ ಶೆಟ್ಟಿ ಅವರನ್ನು ಸಾಗರ ಬಂಟರ ಸಂಘದ ಅಧ್ಯಕ್ಷರಾದ ಸುಧೀರ್ ಶೆಟ್ಟಿ ಹಕ್ಲಾಡಿ,ಮಾಜಿ ಅಧ್ಯಕ್ಷರಾದ ರವಿರಾಜ್ ಶೆಟ್ಟಿ ಮುಂಗರವಳ್ಳಿ,ಉಪಾಧ್ಯಕ್ಷ ರಾದ ರಘುಪತಿ ಶೆಟ್ಟಿ, ಸಹ ಕಾರ್ಯದರ್ಶಿ ಪ್ರಕಾಶ್ ಶೆಟ್ಟಿ,ನಿರ್ದೇಶಕರಾದ ಸದಾನಂದ ಶೆಟ್ಟಿ, ಶ್ರೀಧರ್ ಶೆಟ್ಟಿ,ನಾಗರಾಜ್ ಶೆಟ್ಟಿ, ಸತೀಶ್ ಶೆಟ್ಟಿ, ಶ್ರೀನಿವಾಸ್ ಶೆಟ್ಟಿ,ಆನಂದ್ ಶೆಟ್ಟಿ ಭೇಟಿ ಮಾಡಳು ತೆರಳಿದ್ದರು.
ಈ ಸಂಧರ್ಭದಲ್ಲಿ ಸಂಘದವರು ಡಾ. ಪ್ರಕಾಶ್ ಶೆಟ್ಟಿ ದೂರವಾಣಿಯಲ್ಲಿ ಸಂಪರ್ಕಿಸಿದಾಗ, ಅವರು 25 ಲಕ್ಷ ದೇಣಿಗೆಯನ್ನು (ಮೊದಲು 25 ಲಕ್ಷ ) ತತ್ ಕ್ಷಣ ನೀಡಿ, ಸಾಗರ ಬಂಟರ ಅಭಿವೃದ್ಧಿಗಾಗಿ ಎಲ್ಲರೂ ಸೇರಿ ಶ್ರಮಿಸೋಣ. ಕಟ್ಟಡದ ಕೆಲಸ ಮುಗಿಸಿ ಸಮಾಜದ ಅಭಿವೃದ್ಧಿಗಾಗಿ ಶ್ರಮಿಸಿ, ಹಿಂದುಳಿದ ಬಂಟರ ಶೈಕ್ಷಣಿಕ ಹಾಗೂ ಆರ್ಥಿಕ ಪ್ರಗತಿ ಆಗಬೇಕು ಎಲ್ಲರೂ ಒಟ್ಟಾಗಿ ಶ್ರಮಿಸೋಣ ಎಂದದ್ದಾರೆ.