ಬೈಂದೂರು : ಸರ್ಕಾರದ ಜನವಿರೋಧಿ ನೆಡೆ ವಿರೋದಿಸಿ ಜಡ್ಕಲ್ ಗ್ರಾಮ ಪಂಚಾಯಿತಿ ವಠಾರದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಕರ್ನಾಟಕದ ಜನರನ್ನು ಗ್ಯಾರಂಟಿ ಹೆಸರಲ್ಲಿ ಮೂರ್ಖರನ್ನಾಗಿಸಿ ಕಾಂಗ್ರೆಸ್ ಅಧಿಕಾರಕ್ಕೆ ಬಂತು. ಅಧಿಕಾರಕ್ಕೆ ಬಂದ ಮೊದಲ ದಿನದಿಂದಲೇ ಜನರಿಗೆ ಪ್ರತಿಯೊಂದು ಕ್ಷೇತ್ರದಲ್ಲೂ ಬೆಲೆ ಏರಿಕೆಯ ಬರೆ ಎಳೆಯಲು ಸುರು ಮಾಡಿತ್ತು ಹಾಲಿನ ದರ ಪೆಟ್ರೋಲ್ ಡಿಸೇಲ್ ದರ ಕೇಂದ್ರದಲ್ಲಿ ಸ್ಥಿರ ಇದ್ದರೂ ರಾಜ್ಯದ ತೆರಿಗೆ 2.50 ರೂ ಏರಿಸಿತು.

ವಿದ್ಯುತ್ ದರ ವಿಪರೀತ ಏರಿಕೇ, ಪ್ರತಿಯೊಂದು ನೋಂದಣಿ ಶುಲ್ಕ ಮೂರು ಪಟ್ಟು ಏರಿಸಿತು. 2000ರೂ ಒಂದು ಕಡೆ ಕೊಟ್ಟು 10000ಸಾವಿರ ರೂ ಇನ್ನೊಂದು ಕಡೆ ಕಿತ್ತುಕೊಳ್ಳುತ್ತಿದೆ. ಒಂದು ವರ್ಷದಿಂದ ಭೂ ಪರಿವರ್ತನೆ ಆಗುತ್ತಿಲ್ಲ, 9/11 ಸಂಶ್ಯೆಗಳು ಬಗೆಹರಿಯುತ್ತಿಲ್ಲ, ಅಕ್ರಮ ಸಕ್ರಮ ಅರ್ಜಿಗಳು ಯಾವುದೇ ನಿರ್ದಿಷ್ಟ ಕಾರಣ ಇಲ್ಲದೆ ತಿರಸ್ಕಾರ, ರಾಜ್ಯ ಸರ್ಕಾರ ತನ್ನ ಆಪ್ತ ಸಮುದಾಯವನ್ನು ತ್ರಪ್ತಿ ಪಡಿಸುವಲ್ಲಿ ಮಗ್ನವಾಗಿದೆ. ಪಂಚಾಯತ್ ಕಾಮಗಾರಿ, ವಸತಿಯೋಜನೆ ಮನೆ ಹಂಚಿಕೆಯಲ್ಲಿ ಮುಸ್ಲಿಮರಿಗೆ ಮೀಸಲಾತಿ ನೀಡಿ ತನ್ನ ತುಷ್ಟೀಕರಣದ ಇನ್ನೊಂದು ಹೆಜ್ಜೆ ಇಟ್ಟಿದೆ. ನಿಮಗೆಲ್ಲ ತಿಳಿದಿರುವಂತೆ ಕರಾವಳಿ ಮುಸ್ಲಿಂ ಭಯೋತ್ಪಾದಕರು ಸಂಖ್ಯೆ ಹೆಚ್ಚುತ್ತಿದೆ. ನಮ್ಮ ಹಲವಾರು ಕಾರ್ಯಕರ್ತರ ಜೀವ ಬಲಿ ತೆಗೆದು ಕೊಂಡಿದ್ದಾರೆ.

ಆದರೂ ಸರ್ಕಾರ ಪೊಲೀಸ್ ವ್ಯವಸ್ಥೆ ದುರ್ಬಳಕೆ ಮಾಡಿಕೊಂಡು. ನಮ್ಮ ಕಾರ್ಯಕರ್ತರನ್ನು ಟಾರ್ಗೆಟ್ ಮಾಡಿ. ಮಧ್ಯ ರಾತ್ರಿ ಅವರ ಮನೆಗೆ ಹೋಗಿ ಜಿಪಿಎಸ್ ಫೋಟೋ ತೆಗೆದು ಅವರಿಗೆ ಮಾನಸಿಕ ಹಿಂಸೆ ಕೊಡುತ್ತಿದೆ. ಸರ್ಕಾರದ ಈ ನೆಡೆ ವಿರೋದಿಸಿ ಜಡ್ಕಲ್ ಗ್ರಾಮ ಪಂಚಾಯಿತಿ ವಠಾರದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನೆಡೆಸಿ ಪಿಡಿಒ ಮತ್ತು ಅಧ್ಯಕ್ಷರ ಮೂಲಕ ರಾಜ್ಯ ಪಾಲರಿಗೆ ಮನವಿ ಸಲ್ಲಿಸಲಾಯಿತು.