ಉಡುಪಿ : ದಕ್ಷಿಣ ಭಾರತದ ಶಕ್ತಿ ಪೀಠಗಳಲ್ಲಿ ಒಂದಾಗಿರುವ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಕೊಲ್ಲೂರು ಶ್ರೀಮೂಕಾಂಬಿಕಾ ದೇವಿಗೆ ಇಂದು ಸುಮಾರು 1 ಕೆಜಿ ತೂಕದ ರತ್ನ ಖಚಿತ ಚಿನ್ನದ ಮುಖವಾಡ ಸಮರ್ಪಣೆ ನಡೆಯಿತು.

ತುಮಕೂರು ಜಿಲ್ಲೆ ಶಿರಾದ ದಾನಿಗಳಾದ ಆಯುರ್ವೇದ ವೈದ್ಯ ಡಾ. ಕೆ. ಲಕ್ಷ್ಮೀನಾರಾಯಣ ಅವರು ದೇವಿಗೆ ಮುಖ ಸಮರ್ಪಣೆ ಮಾಡಿದರು. ವಾದ್ಯ ಘೋಷಗಳ ಜೊತೆ ಮೆರವಣಿಗೆಯ ಮೂಲಕ ಮುಖವಾಡವನ್ನು ದೇವಳಕ್ಕೆ ತಂದು ದೇವಿಗೆ ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ದೇಗುಲದ ವತಿಯಿಂದ ಆಯುರ್ವೇದ ವೈದ್ಯ ಡಾ. ಕೆ. ಲಕ್ಷ್ಮೀನಾರಾಯಣ ಕುಟುಂಬವನ್ನು ಗೌರವಿಸಲಾಯ್ತು. ವ್ಯವಸ್ತಾಪನ ಸಮಿತಿ ಅಧ್ಯಕ್ಷ ಕೆ. ಬಾಬು ಹೆಗ್ಡೆ, ಕಾರ್ಯನಿರ್ವಾಹಕ ಅಧಿಕಾರಿ ಪ್ರಶಾಂತ್ ಕುಮಾರ್ ಶೆಟ್ಟಿ, ಸಮಿತಿ ಸದಸ್ಯರಾದ ರಘುರಾಮ್ ದೇವಾಡಿಗ, ಮಹಾಲಿಂಗ ನಾಯ್ಕ್ ಶ್ರೀಮತಿ ಸುಧಾ, ದೇವಳದ ಅರ್ಚಕರರಾದ ಶ್ರೀ ಸುಬ್ರಮಣ್ಯ ಅಡಿಗ, ಕ್ಷೇತ್ರ ಪುರೋಹಿತರಾದ ಶ್ರೀ ಕೆ ನರಸಿಂಹ ಭಟ್ ಹಾಗೂ ಅರ್ಚಕರು ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
