Saturday, June 28, 2025

spot_img

ಕೆಎಂಸಿ ಆಸ್ಪತ್ರೆಯ ಸಹಯೋಗದಲ್ಲಿ ಉಚಿತ ಸಂಧಿವಾತ, ಮೂಳೆ ಸಾಂದ್ರತೆ ಮತ್ತು ಮಹಿಳೆಯರ ಆರೋಗ್ಯ ಮಾಹಿತಿ ತಪಾಸನೆ , ಸಲಹೆ, ಹಾಗೂ ಚಿಕಿತ್ಸೆ ಶಿಬಿರ

ಉಡುಪಿ: ಇಲ್ಲಿನ ಕುಂಜಿಬೆಟ್ಟಿನ ಸುನಾಗ್ ಅರ್ಥೋಕೇರ್ ಮತ್ತು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಸಾರ್ವಜನಿಕ ಆರೋಗ್ಯ ಮಾಹಿತಿ ಕಾರ್ಯಕ್ರಮಡಿ ಸುನಾಗ್ ಸುಸ್ಥಿರ ಆರೋಗ್ಯ ಕಾರ್ಯಕ್ರಮದಡಿ ಮಣಿಪಾಲ ಕೆಎಂಸಿ ಆಸ್ಪತ್ರೆಯ ಸಹಯೋಗದಲ್ಲಿ ಉಚಿತ ಸಂಧಿವಾತ, ಮೂಳೆ ಸಾಂದ್ರತೆ ಮತ್ತು ಮಹಿಳೆಯರ ಆರೋಗ್ಯ ಮಾಹಿತಿ ತಪಾಸನೆ , ಸಲಹೆ, ಹಾಗೂ ಚಿಕಿತ್ಸೆ ಶಿಬಿರ ಫೆ.12ರಂದು ಬೆಳಗ್ಗೆ 9 ರಿಂದ ಸಂಜೆ 6 ಗಂಟೆಯವರೆಗೆ ಕುಂಜಿಬೆಟ್ಟು ಶಾರದ ಕಲ್ಯಾಣ ಮಂಟಪದ ಜ್ಞಾನ ಮಂದಿರದಲ್ಲಿ ನಡೆಯಲಿದೆ.

ಈ ಬಗ್ಗೆ ಆಸ್ಪತ್ರೆಯ ಸಂಸ್ಥಾಪಕ ಡಾ. ನರೇಂದ್ರ ಕುಮಾರ್ ಎಚ್ಎಸ್. ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಅಂದು ಬೆಳಗ್ಗೆ 11 ಗಂಟೆಗೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಉಡುಪಿ ನಗರಸಭೆಯ ಉಪಾಧ್ಯಕ್ಷೆ ರಜಿನಿ ಹೆಬ್ಬಾರ್, ಹಿರಿಯ ಸ್ತ್ರೀರೋಗ ತಜ್ಞೆ ಡಾ. ಸುಲೋಚನಾ ಹೊಳ್ಳ, ಹಿರಿಯ ಶಸ್ತ್ರ ಚಿಕಿತ್ಸಕ ಕ್ಯಾ. ಡಾ. ಹೇಮಚಂದ್ರ ಹೊಳ್ಳ , ಹಿರಿಯ ಸ್ತ್ರೀ ರೋಗ ತಜ್ಞೆ ಡಾ.ವಿಜಯ ವೈ .ಬಿ., ಮಣಿಪಾಲ ಕೆಎಂಸಿಯ ಸ್ತ್ರೀರೋಗ ತಜ್ಞೆ ಡಾ. ಶ್ಯಾಮಲಾ ಜಿ. ಭಾಗವಹಿಸಲಿದ್ದಾರೆ .ಅಧ್ಯಕ್ಷತೆಯನ್ನು ಡಾ. ನರೇಂದ್ರ ಕುಮಾರ್ ಎಚ್.ಎಸ್. ಭಾಗವಹಿಸುವರು.

ಈ ಸಂದರ್ಭದಲ್ಲಿ  ಹಿರಿಯ ಸ್ತ್ರೀರೋಗ ತಜ್ಞ ಡಾ. ಸುಲೋಚನ ಹೊಳ್ಳ ಹಾಗೂ ಹಿರಿಯ ಶಸ್ತ್ರಚಿಕಿತ್ಸಕ ಕ್ಯಾ.ಡಾ. ಹೇಮಚಂದ್ರ ಅವರಿಗೆ ಸನ್ಮಾನ ನಡೆಯಲಿದೆ. ಶಿಬಿರಕ್ಕೆ ಆಗಮಿಸುವ ಸಾರ್ವಜನಿಕರಿಗೆ  ಆದ್ಯತೆಯ ಮೇರೆಗೆ ಉಚಿತವಾಗಿ ಮೂಳೆ ಸಾಂದ್ರತೆ ಪರೀಕ್ಷೆ , ಗರ್ಭಕಂಠ ತಪಾಸಣೆ, ಸ್ತನ ರೋಗ ತಪಾಸಣೆ , ಸಕ್ಕರೆ ಹಾಗೂ ಹಿಮೋಗ್ಲೋಬಿನ್ ರಕ್ತ ಪರೀಕ್ಷೆ ಹಾಗೂ ತಜ್ಞ ವೈದ್ಯರಿಂದ ಸಲಹೆ ಮತ್ತು ಚಿಕಿತ್ಸೆಯನ್ನು ನೀಡಲಾಗುತ್ತದೆ ಎಂದು ಅವರು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಹಿರಿಯ ಸ್ತ್ರೀ ರೋಗ ತಜ್ಞೆ ಡಾ. ವಿಜಯ ವೈ.ಬಿ, ಆಸ್ಪತ್ರೆಯ ಡಾ.ವೀಣಾ ನರೇಂದ್ರ ಎಚ್. ಹಾಗೂ ಆಸ್ಪತ್ರೆ ವ್ಯವಸ್ಥಾಪಕಿ ಶೋಭಾ ಉಪಸ್ಥಿತರಿದ್ದರು

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles