Monday, June 30, 2025

spot_img

“ಕಣ್ಣೀರ ಕಣಿವೆ” ಕೃತಿ ಬಿಡುಗಡೆ

ಉಡುಪಿ : ಡಾ. ರಾಹುಲ್ ಮೆಗೆಝಿನ್ ಎಂಬ ಕಾಶ್ಮೀರಿ ಪಂಡಿತರು ಬರೆದ “ಆ್ಯಂಡ್ ದಿ ವ್ಯಾಲಿ ರಿಮೈನ್ಡ್ ಸೈಲೆಂಟ್” ಪುಸ್ತಕವನ್ನು ಕನ್ನಡಕ್ಕೆ ಲೇಖಕ ಉದಯ್ ಕುಮಾರ್ ಹಬ್ಬು ಅನುವಾದಿಸಿದ್ದಾರೆ. ಕನ್ನಡ ಅನುವಾದ ಕೃತಿ “ಕಣ್ಣೀರ ಕಣಿವೆ” ಕಾಶ್ಮೀರಿ ನೆಲೆದಲ್ಲಿ ನೆಲೆ ಕಳೆದುಕೊಂಡವರ ಕಥೆ” ಕೃತಿಯನ್ನು ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥರು ಮಂಗಳವಾರ ರಾಜಾಂಗಣದಲ್ಲಿ ಬಿಡುಗಡೆಗೊಳಿಸಿದರು. 

ಬಳಿಕ ಆರ್ಶೀವಚನ ನೀಡಿದ ಅವರು, ಲೇಖಕ ಡಾ.ರಾಹುಲ್ ಮೆಗೆಝಿನ್ ಸ್ವತಃ ಅನುಭವಿಸಿದ, ಪ್ರತ್ಯಕ್ಷ ಕಂಡಿರುವ, ಕಾಶ್ಮೀರಿ ಮುಸ್ಲಿಂ ಭಯೋತ್ಪಾದಕರು ಹಿಂದುಗಳ ಮೇಲೆ ನಡೆಸಿದ ಬರ್ಬರ ಜನಾಂಗೀಯ ಹತ್ಯೆಯನ್ನು, ಅತ್ಯಾಚಾರಗಳನ್ನು ಪುಸ್ತಕದಲ್ಲಿ ಚಿತ್ರಿಸಿದ್ದಾರೆ. ಇಂತಹ ಸಂಗತಿಗಳನ್ನು ಮಾಧ್ಯಮದವರು ಹೇಳುವುದು ತುಂಬಾ ಕಡಿಮೆ. ಈ ಕಾಶ್ಮೀರಿ ಪಂಡಿತರಿಗೆ ನ್ಯಾಯ ಸಿಗಬೇಕಿದೆ. ಈ ಪುಸ್ತಕವನ್ನು ಎಲ್ಲರೂ ಓದಬೇಕು ಎಂದು ಕರೆ ಕೊಟ್ಟರು. 

ವೇದಿಕೆಯಲ್ಲಿ ಕಿರಿಯ ಶ್ರೀ ಸುಶೀಂದ್ರತೀರ್ಥರು, ಅಯೋಧ್ಯ ಪ್ರಕಾಶನದ ರೋಹಿತ ಚಕ್ರತೀರ್ಥ, ಮೂಲಕೃತಿಯ ಲೇಖಕ ಡಾ.ರಾಹುಲ್ ಮೆಗೆಝಿನ್, ಅವರ ತಂದೆ ಡಾ ಮನಮೋಹನ್ ಕಿಶನ್ ಮೆಗೆಝಿನ್ ಉಪಸ್ಥಿತರಿದ್ದರು. ಅನುವಾದಕ ಉದಯ ಕುಮಾರ ಹಬ್ಬು  ಪುಸ್ತಕವನ್ನು ಪರಿಚಯಿಸಿದರು‌. ಡಾ.ಚಿನ್ಮಯಿ ಪೆಡ್ಡಿಸೆಟ್ಟಿ ಪ್ರಾರ್ಥಿಸಿದರು. ಡಾ.ಕುಶಾಂತ.ಪಿ ಸ್ವಾಗತಿಸಿ, ಡಾ.ಮನೀಷ್.ಆರ್.ಶೆಟ್ಟಿ ವಂದಿಸಿದರು. ಮೇಘನಾ ಭಟ್ ನಿರೂಪಿಸಿದರು. 

19ಯುಡುಪಿ ಪುಸ್ತಕ ಬಿಡುಗಡೆ

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles