Sunday, June 29, 2025

spot_img

ಎಟಿಎಂ ಕಳ್ಳತನಕ್ಕೆ ಯತ್ನ…!

ಉಡುಪಿ : ಉಡುಪಿ ನಗರದಲ್ಲಿ ಎಟಿಎಂ ಕಳ್ಳತನಕ್ಕೆ ಪ್ರಯತ್ನಿಸಿ ವಿಫಲಗೊಂಡು ವಾಪಾಸ್ಸಾದ ಘಟನೆ ನಡೆದಿದೆ. ಉದ್ಯಾವರದಲ್ಲಿರುವ ಕೆನರಾ ಬ್ಯಾಂಕ್‌ ಎಟಿಎಂ ಶಾಖೆಯಲ್ಲಿ ಈ ಘಟನೆ ನಡೆದಿದೆ. ಮೂವರು ಮುಸುಕುಧಾರಿಗಳು ಕಳೆದ ತಡರಾತ್ರಿ 2 ಗಂಟೆ ಸುಮಾರಿಗೆ ಬ್ಯಾಂಕ್‌ ಎಟಿಎಂ ಶಾಖೆಯ ಒಳಗೆ ನುಗ್ಗಿ ಎಟಿಎಂ ಮೆಶೀನ್‌ ಒಡೆಯಲು ಪ್ರಯತ್ನಿಸಿದ್ದಾರೆ. ಈ ವೇಳೆ ಸೇಫ್ಟಿ ಸೈರಲ್‌ ಮೊಳಗಿದ ಹಿನ್ನಲೆಯಲ್ಲಿ ಕಳ್ಳರು ಸ್ಥಳದಿಂದ ಪರಾರಿಯಾಗಿದ್ದಾರೆ.

ಘಟನೆ ಕುರಿತು ಮಾಹಿತಿ ಹೊರ ಬರುತ್ತಿದಂತೆ ಉಡುಪಿ ಪೊಲೀಸ್‌ ರು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದ್ದಾರೆ. ಘಟನಾಸ್ಥಳಕ್ಕೆ ಹಿರಿಯ ಪೊಲೀಸ್‌ ಅಧಿಕಾರಿಗಳು ಕೂಡ ಆಗಮಿಸಿ ಘಟನೆ ಕುರಿತು ಮಾಹಿತಿ ಪಡೆದಿದ್ದಾರೆ. ಸದ್ಯ ಪ್ರಕರಣ ಕೈಗೆತ್ತಿ ಕೊಂಡಿರುವ ಪೊಲೀಸ್‌ ತನಿಖೆ ಮುಂದುವರಿಸಿದ್ದು ಶೀಘ್ರದಲ್ಲಿ ಆರೋಪಿಗಳ ಪತ್ತೆ ನಡೆಸಲು ವಿಚಾರಣೆ ಮುಂದುವರಿಸಿದ್ದಾರೆ. ಸ್ಥಳಕ್ಕೆ ಬೆರಳಚ್ಚು ತಜ್ಞರು ಆಗಮಿಸಿ ಮಾಹಿತಿ ಕಳೆ ಹಾಕಿದ್ದು, ಪೊಲೀಸ್‌ ರು ಸುತ್ತಮುತ್ತಲಿನ ಠಾಣಾಗಳಿಗೂ ಸಂದೇಶ ರವಾನಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles