Friday, June 27, 2025

spot_img

ಚಿನ್ನ ಕಸಿಯಲು ಬಂದ ದುಷ್ಟಕರ್ಮಿಯಿಂದ ಮಹಿಳೆ ಮೇಲೆ ರಾಡಿನಿಂದ ಹಲ್ಲೆ : ಆಸ್ಪತ್ರೆಗೆ ದಾಖಲು

ಕುಣಿಗಲ್ :

     ದುಷ್ಕಕರ್ಮಿಯೋರ್ವನ್ನು ರೇಷ್ಮೆ ಇಲಾಖೆಗೆ ಕರ್ತವ್ಯಕ್ಕೆ ತೆರಳುತ್ತಿದ್ದ ಮಹಿಳೆ ಮೇಲೆ ಕಬ್ಬಿಣದ ರಾಡಿನಿಂದ ಹಲ್ಲೆ ನಡೆಸಿ, ಗಾಯಗೊಳಿಸಿ ಪರಾರಿಯಾಗಿರುವ ಘಟನೆ ತಾಲೂಕಿನ ಬಿಳಿದೇವಾಲಯ ರೇಷ್ಮೆ ಭಿತ್ತನೆ ಕೋಠಿಯಲ್ಲಿ ಮಂಗಳವಾರ ಹಾಡುಹಗಲೇ ನಡೆದಿದೆ,
ಕುಣಿಗಲ್ ಟೌನ್ ಕೆ.ಆರ್ ಎಸ್ ಅಗ್ರಹಾರ ವಾಸಿ ಶ್ವೇತಾ( 39) ರಾಡ್ ನಿಂದ ಹಲ್ಲೆಗೆ ಒಳಗಾದ ಮಹಿಳೆಯಾಗಿದ್ದಾಳೆ

    ಶ್ವೇತ ಬಿಳಿದೇವಾಲಯ ಗ್ರಾಮದ ರೇಷ್ಮೆ ಭಿತ್ತನೆ ಕೋಠಿಯಲ್ಲಿ ಹೊರಗುತ್ತಿಗೆ ನೌಕರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದು ಎಂದಿನಂತೆ ಬೆಳಗ್ಗೆ 8 ಗಂಟೆ ಸಮಯದಲ್ಲಿ ಕರ್ತವ್ಯಕ್ಕೆ ತೆರಳುತ್ತಿದ್ದ ವೇಳೆ ಕತ್ತಿನಲ್ಲಿ ಇದ್ದ ಚೈನ್ ಅನ್ನು ಕಿತ್ತುಕೊಳ್ಳಲು ಯತ್ನಿಸಿದ್ದಾರೆ ಇದಕ್ಕೆ ನಿರಾಕರಿಸಿದ ಶ್ವೇತ ಅವರ ಮೇಲೆ ರಾಡಿನಿಂದ ಹಲ್ಲೆ ನಡೆಸಿ, ಆರೋಪಿ ಪರಾರಿಯಾಗಿದ್ದಾನೆ,ಗಾಯಗೊಂಡ ಶ್ವೇತಾ ಸ್ವತಃ ಆಟೋದಲ್ಲಿ ಬಂದು ಸರ್ಕಾರಿ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ

Related Articles

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles