Wednesday, October 22, 2025

spot_img

ಎಕೆಎಂಎಸ್‌ ಬಸ್‌ ಮಾಲೀಕ ಸೈಫುದ್ದೀನ್‌ನನ್ನು ಹಾಡು ಹಗಲೆ ಕೊಚ್ಚಿ ಕೊಲೆ..!

ಉಡುಪಿ ; ಉಡುಪಿಯ ಎಕೆಎಂಎಸ್‌ ಹೆಸರಿನ ಬಸ್‌ ಮಾಲೀಕನನ್ನು ಹಾಡು ಹಗಲೆ ತಲವಾರಿನಿಂದ ಕೊಚ್ಚಿ ಕೊಲೆ ಮಾಡಿದ ಘಟನೆ ಕೊಡವೂರಿನ ಮನೆಯೊಂದರಲ್ಲಿ ನಡೆದಿದೆ. ಎಕೆಎಂಎಸ್ ಬಸ್ ಮಾಲೀಕ ಸೈಫುದ್ದೀನ್‌ ಕೊಲೆಯಾದಾತ.

ಮಣಿಪಾಲ ಸಮೀಪದ ಆತ್ರಾಡಿಯ ನಿವಾಸಿಯಾಗಿದ್ದ ಸೈಫುದ್ದೀನ್‌, ಉಡುಪಿಯ ಕೊಡುವೂರು ಸಾಲ್ಮರದಲ್ಲಿನ ಎರಡನೇ ಮನೆಯಲ್ಲಿ ಕೊಲೆಯಾಗಿದ್ದು, ಬೆಳಗಿನ ಜಾವ 10ರಿಂದ 11 ಗಂಟೆಯ ನಡುವೆ ದುಷ್ಕೃತ್ಯ ನಡೆದಿದೆ ಎನ್ನಲಾಗಿದೆ. ದೇಹದ ಹಲವೆಡೆ ಇರಿದ ಗಾಯಗಳಾಗಿದ್ದು, ಮೂವರು ದುಷ್ಕೃತ್ಯ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದ್ದು, ಮೂರು ಜನ ಆರೋಪಿಗಳು ಏಕಕಾಲದಲ್ಲಿ ಅಟ್ಯಾಕ್ ಮಾಡಿರುವ ರೀತಿಯಲ್ಲಿ ಕೊಲೆ ನಡೆದಿದೆ.

ಆರೋಪಿಗಳು ಎಕೆಎಂಎಸ್‌ ಖಾಸಗಿ ಬಸ್ ಸಂಸ್ಥೆಯಲ್ಲಿ ಉದ್ಯೋಗಿಗಳು ಎನ್ನಲಾಗಿದ್ದು, ಕೊಲೆಗೆ ಕಾರಣ ಮತ್ತು ಆರೋಪಿಗಳ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ. ಮಲ್ಪೆಯ ಮನೆಯಲ್ಲಿ ಒಬ್ಬರೇ ಇದ್ದಾಗ ತಲವಾರ ಮತ್ತು ಚಾಕು ವಿನಿಂದ ಅಟ್ಯಾಕ್ ನಡೆದಿದೆ, ಕೊಲೆಗೆ ಕಾರಣ ಹಿಂದಿನ ಕೊಲೆಗಳಿಗೆ ಪ್ರತಿಕಾರವೇ ಎನ್ನುವುದು ತನಿಖೆಯ ಬಳಿಕ ಹೊರ ಬರಲಿದೆ.

 ಸೈಫುದ್ದೀನ್‌ 18 ಕ್ರಿಮಿನಲ್ ಕೇಸುಗಳಿದ್ದು, ಹಿರಿಯಡ್ಕ ಠಾಣೆ ಮತ್ತು ಉಡುಪಿ ಠಾಣೆಯಲ್ಲಿ ರೌಡಿಶೀಟರ್ ಆಗಿದ್ದಾನೆ. ಇನ್ನು ಎರಡು ಕೊಲೆ ಪ್ರಕರಣದಲ್ಲಿ ಸೈಫುದ್ದೀನ್‌ ಆರೋಪಿಯಾಗಿದ್ದಾನೆ. ಮಲ್ಪೆ ಪೊಲೀಸ್‌ ರು ಕೊಡವೂರಿನ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತನಿಖೆ ಮುಂದುವರಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles