ಉಡುಪಿ : ಮಣಿಪಾಲದ ಪರ್ಕಳದಲ್ಲಿ ಆರ್. ಮನೋಹರ್ ಅವರು ಆವಿಷ್ಕರಿಸಿದ ದೂರದರ್ಶಕದಲ್ಲಿ ಸುಮಾರು ಕಣ್ಣ ದೂರ ದೃಷ್ಟಿ ನೂರ ಎಪ್ಪತ್ತು ಪಟ್ಟು ಎಕ್ಸ್ ಹೆಚ್ಚುವರಿಯಾಗಿ ಪೂರ್ಣಚಂದ್ರ ದರ್ಶನವಾಗಿದ್ದು, ರಕ್ತ ಚಂದನ ಬಣ್ಣದಲ್ಲಿ ಚಂದ್ರ ಗೋಚರಿಸಿದ್ದಾನೆ.

ಮಳೆ ಮೋಡ ಹಿನ್ನಲೆಯಲ್ಲಿ ಚಂದ್ರ ಗ್ರಹಣ ದರ್ಶನಕ್ಕೆ ಕೊಂಚ ಸಮಸ್ಯೆಯಾದರೂ ಕೂಡ ರಾತ್ರಿ 10:15 ರಿಂದ ಆರಂಭಗೊಂಡು ಹನ್ನೊಂದು ಮೂವತ್ತರ ತನಕ ಸೆರೆಹಿಡಿದ ಚಂದ್ರ ಗ್ರಹಣದ ವಿವಿಧ ದೃಶ್ಯ ಸೆರೆ ಹಿಡಿಯಲು ಸಾಧ್ಯವಾಯಿತು.

ಈ ಸಂದರ್ಭದಲ್ಲಿ ಆರ್ ಮನೋಹರ್, ಪರ್ಕಳದ ಮೋಹನದಾಸ್ ನಾಯಕ್, ಗಣೇಶ್ ರಾಜ್ ಸರಳ ಬೆಟ್ಟು, ಆದರ್ಶ್ ಶೆಟ್ಟಿಗಾರ್, ಸ್ವರಾಜ್ ಶೆಟ್ಟಿ, ಜಯಂತ್ ಜೋಗಿ, ಸುರೇಶ ಆಚಾರ್ಯ, ಅಭಿಷೇಕ್ ನಾಯ್ಕ್, ರಾಜ್ ಪ್ರಸಾದ್, ದೇವಿಪ್ರಸಾದ್ ಎನ್ ಆಚಾರ್ಯ, ಚೇತನ್ ಕುಡ್ವ, ರಾಜೇಶ್ ಪ್ರಭು, ಜೈದೀಪ್ ನಾಯಕ್, ದೇವರಾಜ್ ನಾಯಕ್, ಸುಧೀರ್ ಶೆಟ್ಟಿ, ಪ್ರವೀಣ್, ರಕ್ಷಯ್, ಕುಟ್ಟಿ, ಸಂವಾರ್ಥ, ಸ್ಥಳೀಯರು, ಮಣಿಪಾಲ ವಿದ್ಯಾರ್ಥಿಗಳು ಮೊದಲಾದವರು ದೂರದರ್ಶಕದ ಮೂಲಕ ವೀಕ್ಷಿಸಿ ಖಗ್ರಾಸ ಚಂದ್ರ ಗ್ರಹಣದ ವೇಳೆ ರಕ್ತ ಚಂದನ ಬಣ್ಣದ ಚಂದ್ರನನ್ನ ನೋಡಿ ಕಣ್ ತುಂಬಿಕೊಂಡರು.



