ಉಡುಪಿ : ಪರ್ಕಳ ಪೇಟೆಯಲ್ಲಿರುವ ಕಾಂಗ್ರೆಸ್ ಕಚೇರಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜನುಮದಿನದ ಅಂಗವಾಗಿ ಅವರ ಕಟೌಟ್ ಗೆ ಕ್ಷೀರಾಭಿಷೇಕ ನಡೆಯಿತು. ಎಲ್ಐಸಿ ನಿವೃತ್ತ ಅಧಿಕಾರಿ ಉಡುಪಿಯ ಅನಂತ ಕೃಷ್ಣ ಕಾಮತ್, ಅವರು ಕಟೌಟ್ ಗೆ ಹಾಲೆರುವುದರ ಮೂಲಕ ಜನ್ಮದಿನ ಆಚರಣೆಗೆ ಚಾಲನೆ ನೀಡಿದರು. 78ರ ಹರಯದಲ್ಲಿಯೂ ಕೂಡ, ರಾಜ್ಯದ ಜನತೆಗೆ. ಪಂಚ ಗ್ಯಾರಂಟಿ ನೀಡಿ, ಯಶಸ್ವಿ ನಾಯಕರೆನ್ನಿಸಿದ ಸಿದ್ದರಾಮಯ್ಯ ಅವರ ಗುಣಗಾನ ಮಾಡಿದರು. ಸಿದ್ಧರಾಮಯ್ಯ ಅವರ ಹುಟ್ಟು ಹಬ್ಬದ ಹಿನ್ನಲೆಯಲ್ಲಿ ಪಾಯಸ ಮತ್ತು ಸಿಹಿ ತಿಂಡಿ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಪರ್ಕಳ ಕಾಂಗ್ರೆಸ್ ಅಧ್ಯಕ್ಷ ಮೋಹನ್ ದಾಸ್ ನಾಯಕ್ ಪರ್ಕಳ, ಗಣೇಶ್ ರಾಜ್ ಸರಳಬೆಟ್ಟು, ವೆಂಕಟೇಶ್ ಶೆಟ್ಟಿಗಾರ್, ಅಶೋಕ್ ಶೆಟ್ಟಿ ಬಡಗಬೆಟ್ಟು, ಸದಾನಂದ ಪೂಜಾರಿ ಪರ್ಕಳ, ಜಗನ್ನಾಥ ಹೆರ್ಗ, ದೇವೇಂದ್ರ ನಾಯ್ಕ ಪರ್ಕಳ, ಅಪ್ರಾಯ ನಾಯ್ಕ, ಸುಧೀರ್ ಶೆಟ್ಟಿ ಹಿರಿಯಡ್ಕ, ಸುರೇಂದ್ರ ಪ್ರಭು (ಕುಟ್ಟಿ), ಪ್ರಕಾಶ್ ನಾಯ್ಕ್, ಸುರೇಶ್ ನಾಯಕ್ ಮೂಡು ಬೆಳ್ಳೆ, ಉಷಾ ನಾಯ್ ಕ್ ಪರ್ಕಳ ಜೊತೆಗಿದ್ದರು.
