ಕೋಟ: ಪಂಚವರ್ಣ ಯುವಕ ಮಂಡಲ ಅಧೀನ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲ ಇವರ ನೇತ್ರತ್ವದಲ್ಲಿ ಗೀತಾನಂದ ಫೌಂಡೇಶನ್ ಮಣೂರು,ಸುವರ್ಣ ಎಂಟರ್ಪ್ರೈಸ್ ಬ್ರಹ್ಮಾವರ, ಸಮುದ್ಯತಾ ಗ್ರೂಪ್ಸ್ ಕೋಟ, ಅನ್ನಪೂರ್ಣ ನರ್ಸರಿ ಪೇತ್ರಿ, ಮಣೂರು ಫ್ರೆಂಡ್ಸ್, ಸ್ನೇಹಕೂಟ ಮಣೂರು, ಇವರುಗಳ ಸಹಯೋಗದಲ್ಲಿ ಹಂದಟ್ಟು ಮಹಿಳಾ ಬಳಗ ಕೋಟ,ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘ ಹಂದಟ್ಟು ಇವರ ಸಂಯೋಜನೆಯೊಂದಿಗೆ 257ನೇ ಭಾನುವಾರದ ಪರಿಸರ ಸ್ನೇಹಿ ಮೂರು ತಿಂಗಳ ಕಾಲ ನಡೆಯುವ ಹಸಿರು ಜೀವ ಅಭಿಯಾನದ ಪ್ರಯುಕ್ತ ಜೂನ್ 1ರಂದು ಹಂದಟ್ಟು ಪರಿಸರದಲ್ಲಿ ಮನೆಗೊಂದು ಗಿಡ ನಡುವ ಮೂಲಕ ಪ್ರಾರಂಭೋತ್ಸವ ನಡೆಯಿತು.

ಕೋಟದ ವಿವೇಕ ವಿದ್ಯಾ ಸಂಸ್ಥೆಯ ಪ್ರಾಂಶುಪಾಲ, ಪರಿಸರಪ್ರೇಮಿ ಕೆ.ಜಗದೀಶ ನಾವಡ ಹಾಗೂ ಪರಿಸರಪ್ರೇಮಿ, ಸುವರ್ಣ ಎಂಟರ್ಪ್ರೈಸ್ ಬ್ರಹ್ಮಾವರ ಇದರ ಮಾಲಿಕ ಮಧುಸೂಧನ ಹೇರೂರು ಚಾಲನೆ ನೀಡಿದರು. ಹಂದಟ್ಟು ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ಅಧ್ಯಕ್ಷೆ ಜಾನಕಿ ಹಂದೆ,ಕೋಟತಟ್ಟು ಗ್ರಾ.ಪಂ ಸದಸ್ಯ ಪ್ರಕಾಶ್ ಹಂದಟ್ಟು ಶುಭಹಾರೈಸಿದರು. ನಂತರ ಹಂದಟ್ಟು ರಸ್ತೆ ಹಾಗೂ ಪರಿಸರ ಮನೆಯ ವಠಾರದಲ್ಲಿ ಗಿಡ ನೆಡಲಾಯಿತು. ಮಣೂರು ಚಿತ್ತಾರಿ ಟ್ರಸ್ಟ್ ಉಪಹಾರದ ವ್ಯವಸ್ಥೆ ಕಲ್ಪಿಸಿದರು.