Sunday, June 29, 2025

spot_img

ಪಕ್ಷದಲ್ಲಿ ನಿರಂತರ ತೊಡಗಿಸಿ ಕೊಂಡಾಗ ಮಾತ್ರ ಪಕ್ಷ ಸಂಘಟನೆ ಸಾಧ್ಯ : ಸತೀಶ್ ಜಾರಕಿಹೋಳಿ

ಉಡುಪಿ : ಚುನಾವಣೆ ಬಂದಾಗ ಮಾತ್ರ ತೊಡಗಿಸಿಕೊಳ್ಳದೆ ನಿರಂತರ ಪಕ್ಷದಲ್ಲಿ ತೊಡಗಿಸಿಕೊಂಡಾಗ ಮಾತ್ರ ಪಕ್ಷವು ಬಲಿಷ್ಠ ವಾಗುವುದುˌ ಜಿಲ್ಲೆಯ ಸಮಸ್ಯೆಗಳ ಅರಿವು ನನಗಿದೆˌ ಆದಷ್ಟು ಬೇಗ ಅದರ ಪರಿಹಾರಕ್ಕಾಗಿ ಪ್ರಯತ್ನ ಪಡುತ್ತೇನೆ ಎಂದು ರಾಜ್ಯ ಸರಕಾರದ ಲೋಕಪಯೋಗಿ ಸಚಿವರಾದ ಸನ್ಮಾನ್ಯ ಸತೀಶ್ ಜಾರಕಿಹೋಳಿ ಹೇಳಿದರು.

ಅವರು ಉಡುಪಿ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ನಡೆದ ಜಿಲ್ಲಾ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಮಾತನಾಡುತ್ತಾ, ಸರಕಾರದ ಕೆಲವು ಅನುದಾನಗಳು ಸ್ಥಳೀಯ ಶಾಸಕರ ಮಾರ್ಗದರ್ಶನದಲ್ಲಿ ನಡೆವುದರಿಂದ ಅವಿಭಾಜಿತ ಜಿಲ್ಲೆಯಲ್ಲಿ ಪಕ್ಷದ ಶಾಸಕರ ಕೊರತೆಯಿಂದ ಕಾರ್ಯಕರ್ತರಿಗೆ ತೊಂದರೆಯಾಗಿರುವುದು ತಮ್ಮ ಗಮನಕ್ಕೆ ಬಂದಿದೆ. ಜಿಲ್ಲೆಯಿಂದ ಓರ್ವ ಎಮ್.ಎಲ್. ಸಿ ಆಗಿ ಆಯ್ಕೆಯಾದರೆ ನಿಮ್ಮ ಸಮಸ್ಯೆ ಪರಿಹಾರ ಕಾಣುವುದು. ಆದರೆ ಅದಕ್ಕೆ ನಿಮ್ಮಲ್ಲಿ ಇಚ್ಛಾಶಕ್ತಿ ಇರಬೇಕಾಗಿದೆˌ ಶೀಘ್ರ ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಚುನಾವಣೆಗಳು ಬರುವುದರಿಂದ ಮೀಸಲಾತಿಯನ್ನು ಗಮನಿಸಿ ಸಮರ್ಥ ಅಭ್ಯರ್ಥಿಗಳನ್ನು ಆಯ್ಕೆಮಾಡಬೇಕಾಗಿದೆ. ಚುನಾವಣೆಯಲ್ಲಿ ವಿರೋಧಪಕ್ಷದ ಅಭ್ಯರ್ಥಿಗಳ ಬಲ ಹಾಗೂ ಬಲಹೀನತೆಯನ್ನು ಪರಿಗಣಿಸಿ ಕಾರ್ಯಯೋಜನೆ ರೂಪಿಸಬೇಕಾಗಿದೆ ಎಂದರು.


ಮಾಜಿ ಸಚಿವರು ಕೆಪಿಸಿಸಿ ಪ್ರಚಾರ ಸಮಿತಿಯ ಅಧ್ಯಕ್ಷರಾದ ಶ್ರೀಯುತ ವಿನಯ ಕುಮಾರ್ ಸೊರಕೆ ಅವರು ಮಾತನಾಡುತ್ತಾ, ಶೀಘ್ರದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ನಡೆಯುವುದರಿಂದ ಮೀಸಲಾತಿಯನ್ನು ನಿಗದಿಪಡಿಸಿಸಲಾಗಿದೆಯೋ ಎಂದು ಪರಿಶೀಲಿಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕಾಗಿದೆ ˌ ಬಿಜೆಪಿಯವರು ಎಲ್ಲಾ ನಿರ್ಧಾರವನ್ನು ರಾಜಕೀಯವಾಗಿ ತೆಗೆದುಕೊಳ್ಳುತ್ತಾರೆ, ಧಾರ್ಮಿಕ ಭಾವನೆ ಸೃಷ್ಟಿ ಮಾಡಿಕೊಂಡು ಅದರಿಂದ ಲಾಭ ಪಡೆಯುವ ಹುನ್ನಾರ ಬಿಜೆಪಿಯಿಂದ ನಿರಂತರ ನಡೆಯುತ್ತಿದೆ ˌ ಎಲ್ಲರೂ ಒಗ್ಗಟ್ಟಾಗಿ ಕಾರ್ಯನಿರ್ವಹಿಸಿದರೆ ಪಕ್ಷದ ಹಿಂದಿನ ವೈಭವ ಮರಿಕಳಿಸುವುದು ನಿಶ್ಚಯ ಎಂದರು. ಮಾಜಿ ಸಂಸದರಾದ ಜಯಪ್ರಕಾಶ್ ಹೆಗ್ಡೆಯವರು ಮಾತನಾಡಿ ಪಕ್ಷದ ಬೆಳವಣಿಗೆಗೆ ಕೋರ್ ಕಮಿಟಿಗಳನ್ನು ರಚಿಸಿˌ ಜವಾಬ್ದಾರಿಗಳನ್ನು ಹಂಚುವುದು ಮುಖ್ಯˌ ಗ್ಯಾರೆಂಟಿ ಯೋಜನೆಗಳು ಅನುಷ್ಠಾನವಾಗಿದೆಯೇ ಎಂದು ಪರಿಶೀಲಿಸಲು ಸಮಿತಿಗಳು ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ವಿವಿಧ ಕ್ಷೇತ್ರಗಳಲ್ಲಿ ಸಭೆ ನಡೆಸಬೇಕಾಗಿದೆˌ ಇದರಿಂದ ಯೋಜನೆಯ ವಂಚಿತರನ್ನು ಗುರುತಿಸಿದಂತಾಗುವುದು ಎಂದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಅಶೋಕ್ ಕುಮಾರ್ ಕೊಡವೂರು ಸ್ವಾಗತಿಸಿ ಪ್ರಸ್ತಾವನೆ ಮಾಡಿದರು ಲೋಕೋಪಯೋಗಿ ಹಾಗೂ ಕಂದಾಯ ಇಲಾಖೆಯಲ್ಲಿನ ಸಮಸ್ಯೆಗಳ ಬಗ್ಗೆ KPCC ಉಪಾಧ್ಯಕ್ಷರಾದ ಎಮ್. ಎ.ಗಪೂರ್ ಮುಖಂಡರಾದ ಭುಜಂಗ ಶೆಟ್ಟಿˌ ನೀರೆ ಕೃಷ್ಣಶೆಟ್ಟಿˌ ಮುನಿಯಾಲ್ ಉದಯಕುಮಾರ್ ಶೆಟ್ಟಿ ˌ
ಪ್ರಸಾದ್ ರಾಜ್ ಕಾಂಚನ್ˌ ರಮೇಶ್ ಕಾಂಚನ್ˌ ಕಿರಣ್ ಹೆಗ್ಡೆˌ ಸುರೇಶ್ ಶೆಟ್ಟಿ ಬನ್ನಂಜೆˌ ಮಹಾಬಲ ಕುಂದರ್ˌ ಪ್ರಖ್ಯಾತ ಶೆಟ್ಟಿˌ ಇಸ್ಮಾಯಿಲ್ ಅತ್ರಾಡಿ ˌ ಡಾ. ಸುನಿತಾ ಶೆಟ್ಟಿ ಮಾತನಾಡಿದರು. ಇತ್ತೀಚಿಗೆ ನಿಧನರಾದ ಪಕ್ಷದ ಮುಖಂಡರಿಗೆ ಸತೀಶ್ ಕೊಡವೂರು ನುಡಿ ನಮನ ಸಲ್ಲಿಸಿದರು. ವಕ್ತಾರ ಭಾಸ್ಕರ ರಾವ್ ಕಿದಿಯೂರು ಹಾಗೂ ಸಹಕಾರಿ ಕಾಂಗ್ರೆಸ್ ಅಧ್ಯಕ್ಷರಾದ ಅಣ್ಣಯ್ಯ ಸೇರಿಗಾರ್ ಕಾರ್ಯಕ್ರಮ ನಿರ್ವಹಿಸಿದರುˌ
ಸಮಾರಂಭದಲ್ಲಿ ನಗರ ಪ್ರಾಧಿಕಾರದ ಅಧ್ಯಕ್ಷರಾದ ದಿನಕರ್ ಹೇರೂರುˌ ವೆರೋನಿಕಾ ಕರ್ನೆಲಿಯೋ,
ರಾಜ ಪೂಜಾರಿˌ ಹರೀಶ್ ಕಿಣಿˌ ಬಿ ನರಸಿಂಹಮೂರ್ತಿˌ ಮಲ್ಯಾಡಿ ಶಿವರಾಂ ಶೆಟ್ಟಿˌ ದಿನೇಶ್ ಪುತ್ರನ್ˌ ನವೀನ್ ಚಂದ್ರ ಸುವರ್ಣˌ ಪ್ರದೀಪ್ ಕುಮಾರ್ ಶೆಟ್ಟಿ, ಶುಭದ್ ರಾವ್ˌ ಗೋಪಿನಾಥ್ ಭಟ್ˌ ಸಂತೋಷ್ ಕುಲಾಲ್ˌ ದಿನೇಶ್ ಹೆಗ್ಡೆ ಮುಳವಳ್ಳಿˌ ಜ್ಯೋತಿ ಹೆಬ್ಬಾರ್ˌ ಮೀನಾಕ್ಷಿ ಮಾಧವ ಬನ್ನಂಜೆˌ ಸರ್ಫುದ್ದೀನ್ ಶೇಖ್ˌ ಜಯಕುಮಾರ್ ಕಿಶೋರ್ ಕುಮಾರ್ ಎರ್ಮಾಳ್ˌ ಆನಂದ ಪೂಜಾರಿˌ ಮಹಮ್ಮದ್ˌ ಸಂಧ್ಯಾ ತಿಲಕ್ ರಾಜ್ˌ ಅಬೀಬ್ ಆಲಿˌ ದಿವಾಕರ್ ಕುಂದರ್ˌ ಲಕ್ಷಣ ಪೂಜಾರಿˌ ಶೇಖ್ ವಹಿದ್ˌ ಸುರೇಂದ್ರ ಆಚಾರ್ಯ, ಸಂಜಯ ಆಚಾರ್ಯ ಮತ್ತಿತರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles