ಮಣಿಪಾಲ : ಕುಂದಾಪುರದ ಭಂಡಾರ್ಕರ್ಸ್ ಕಾಲೇಜಿನ ಜೀವಶಾಸ್ತ್ರದ ಪ್ರಾಧ್ಯಾಪಕರಾಗಿ, ಅಕಾಡೆಮಿ ಆಫ್ ಜನರಲ್ ಎಜುಕೇಶನ್ನ ಆಡಳಿತಾಧಿಕಾರಿಯಾಗಿ ದೀರ್ಘ ಕಾಲ ಸೇವೆಸಲ್ಲಿಸಿದ ನಾಡಿನ ಶ್ರೇಷ್ಠ ಶಿಕ್ಷಣ ತಜ್ಞರಾದ ಡಾ . ಎಚ್. ಶಾಂತರಾಮ್ ಅವರು ಮುಂದೆ ಹೈದರಬಾದ್ನಲ್ಲಿರುವ ತನ್ನ ಪುತ್ರಿಯೊಂದಿಗೆ ನೆಲೆಸಲು ಹೊರಟಿರುವ ಸಂದರ್ಭದಲ್ಲಿ ಯಕ್ಷಗಾನ ಕಲಾರಂಗದ ತಂಡವು ಇಂದು ಮಣಿಪಾಲದಲ್ಲಿರುವ ಅವರ ಮನೆಗೆ ತೆರಳಿ ಅಭಿನಂದಿಸಿತು.

ಸಂಸ್ಥೆಯ ಮಹಾಪೋಷಕ ಸದಸ್ಯರಾಗಿದ್ದ ಇವರು ರಂಗಭೂಮಿಯೂ ಸೇರಿದಂತೆ ಉಡುಪಿಯ ಹಲವು ಸಾಂಸ್ಕೃತಿಕ ಸಂಘಟನೆಗಳ ವರಿಷ್ಠರಾಗಿ, ಮಾರ್ಗದರ್ಶಕರಾಗಿ ಅಮೂಲ್ಯ ಕೊಡುಗೆ ನೀಡಿರುವುದನ್ನು ಈ ಸಂದರ್ಭದಲ್ಲಿ ಸ್ಮರಿಸಿಕೊಳ್ಳಲಾಯಿತು. ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್, ಉಪಾಧ್ಯಕ್ಷ ಎಸ್. ವಿ. ಭಟ್, ಸದಸ್ಯರುಗಳಾದ ಯು. ವಿಶ್ವನಾಥ ಶೆಣೈ, ಯು. ಎಸ್. ರಾಜಗೋಪಾಲ ಆಚಾರ್ಯ, ನಾರಾಯಣ ಎಂ. ಹೆಗಡೆ, ಭುವನಪ್ರಸಾದ ಹೆಗ್ಡೆ ಉಪಸ್ಥಿತರಿದ್ದರು.