ಕೊರಟಗೆರ :-
ಶಾಲಾ ಮಕ್ಕಳನ್ನು ಸರಕು ಸಾಗಾಣೆ ವಾಹನದಲ್ಲಿ ವನಮಹೋತ್ಸವಕ್ಕೆ ಕರೆದುಕೊಂಡು ಹೋಗುವಾಗ ಅಪಘಾತವಾಗಿ ಸುಮಾರು 16 ಮಕ್ಕಳಿಗೆ ಗಾಯಗಳಾಗಿ 4 ಮಕ್ಕಳಿಗೆ ತೀರ್ವ ಗಾಯಗಳಾದ ಘಟನೆ ನಡೆದಿದೆ.
ಕೊರಟಗೆರೆ ತಾಲ್ಲೂಕಿನ ಹೊಳವನಹಳ್ಳಿ ಹೋಬಳಿ ಕ್ಯಾಮೇನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಚಿಂಪುಗಾನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 5, 6, 7 ನೇ ತರಗತಿಯ ಮಕ್ಕಳನ್ನು ವನಮಹೋತ್ಸವಕ್ಕೆ ದೊಡ್ಡಸಾಗ್ಗೆರೆ ಗ್ರಾಮದ ಹತ್ತಿರದ ಅರಣ್ಯಕ್ಕೆ ಕರೆದೊಯ್ಯಲಾಗುತೊತಿದ್ದ ಸಂದರ್ಭದಲ್ಲಿ ಈ ದುರ್ಘಟನೆ ಜರುಗಿದೆ,
ಟಾಟಾ ಎಸಿ ಗಾಡಿಯಲ್ಲಿ ಸುಮಾರು 99 ಮಕ್ಕಳನ್ನು 33 ಹುಡುಗರ ತಂಡಗಳನ್ನಾಗಿ ಮಾಡಿ ಒಂದೇ ಸರಕು ಸಾಗಾಣಿಕೆಯ ( ಟಾಟಾ ಏಸ್) ವಾಹನದಲ್ಲಿ ಟ್ರಿಪ್ ಪ್ರಕಾರ ಕೊಂಡೊಯ್ಯುತ್ತಿತ್ತು. ವಾಹನವು 2 ಬಾರಿ ಮಕ್ಕಳನ್ನು ವನಮಹೋತ್ಸವ ಸ್ಥಳಕ್ಕೆ ಬಿಟ್ಟು 3ನೇ ಬಾರಿ ಮಕ್ಕಳನ್ನು ಕರೆದುಕೊಂಡು ಹೋಗುವಾಗ ದೊಡ್ಡಸಾಗ್ಗೆರೆ ಗ್ರಾಮದ ಬಳಿ ವಾಹನವು ಅಪಘಾತಕ್ಕೆ ಈಡಾಗಿದೆ ಎನ್ನಲಾಗಿದೆ.
ಈ ಘಟನೆಗೆ ಮುಖ್ಯ ಕಾರಣ ಶಿಕ್ಷಕ ಎನ್ನಲಾಗುತ್ತಿದ್ದು ಶಿಕ್ಷಕರೇ ಅಷ್ಟು ವಿದ್ಯಾರ್ಥಿಗಳನ್ನ ತಾನೇ ಟಾಟಾ ಎಸಿಯಲ್ಲಿ ಕೂರಿಸಿಕೊಂಡು ವಾಹನ ಸವಾರಿ ಮಾಡಿಕೊಂಡು ಹೋಗುತ್ತಿದ್ದ ಎನ್ನಲಾಗಿದ್ದು, ಅಪಘಾತ ನೆಡೆದ ಕ್ರಾಸ್ ನಲ್ಲಿ ಅತಿ ವೇಗವಾಗಿ ಆ ಜಾಗರೂಕತೆಯಿಂದ ಓಡಿಸಿಕೊಂಡು ಬಂದ ಚಾಲಕನಾಗಿದ್ದ ಶಿಕ್ಷಕರಿಗೆ ವಾಹನ ಹತೋಟಿಗೆ ಬಾರದೆ ಪಲ್ಟಿ ಒಡೆದ ಹಿನ್ನೆಲೆಯಲ್ಲಿ ಈ ದುರ್ಘಟನೆ ಜರುಗಿದೆ ಎನ್ನಲಾಗಿದೆ.
ಈ ಸಂದರ್ಭದಲ್ಲಿ ವಿಚಾರ ತಿಳಿದ ತಕ್ಷಣ ಕೋಳಾಲ ಪೋಲೀಸ್ ಠಾಣೆಯ ಸಬ್ಇನ್ಸ್ಸ್ಪೆಕ್ಟರ್ ಯೋಗೀಶ್ ಸ್ಥಳಕ್ಕೆ ಧಾವಿಸಿ ಸುಮಾರು 15 ಮಕ್ಕಳನ್ನು ದೊಡ್ಡಸಾಗ್ಗೆರೆ ಸರ್ಕಾರಿ ಆಸ್ಪತ್ರೆ ಯಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಿ ಉಳಿದ 4 ಮಕ್ಕಳು ತೀರ್ವವಾಗಿ ಗಾಯಗೊಂಡ ಹಿನ್ನೆಲೆಯಲ್ಲಿ ಸ್ಥಳಕ್ಕೆ ತುರ್ತು ವಾಹನ ಸಮಯಕ್ಕೆ ಬಾರದ ಹಿನ್ನೆಲೆಯಲ್ಲಿ 4 ಮಕ್ಕಳನ್ನು ತಮ್ಮ ಕಾರಿನಲ್ಲಿ ತೀತಾ ಗ್ರಾಮದವರೆಗೂ ಕರೆದುಕೊಂಡು ಬಂದು ನಂತರ ಅಲ್ಲಿ ತುರ್ತು ವಾಹನದಲ್ಲಿ ಮಕ್ಕಳನ್ನು ಕಳುಹಿಸಿ ಕೊಟ್ಟಿದ್ದಾರೆ.
ತೀರ್ವವಾಗಿ ಗಾಯಗೊಂಡ ವಿದ್ಯಾರ್ಥಿಗಳಾದ ಹೇಮಂತ್ (10 ವರ್ಷ), ಜಿತೇಂದ್ರ ಕುಮಾರ್ (13 ವರ್ಷ), ಮಿಥುನ್ (10 ವರ್ಷ) ಪ್ರಭಾಸ್ (10 ವರ್ಷ) ಕೊರಟಗೆರೆ ಸಾರ್ವಜನಿಕ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗೆ ತುಮಕೂರು ಆಸ್ಪತ್ರೆಗೆ ಕಳುಹಿಸಿಕೊಡಲಾಗಿದೆ.
ಶಿಕ್ಷಕನೇ ಚಾಲಕನಾಗಿ ಕಾರ್ಯ ನಿರ್ವಹಣೆ
ಈ ಘಟನೆಗೆ ಮುಖ್ಯ ಕಾರಣ ಶಾಲೆಯ ಇಂಗ್ಲೀಷ್ ಶಿಕ್ಷಕ ಅನಂತ ರಾಮು ಸರಕು ಸಾಗಾಣೆ ವಾಹನವನ್ನು ಚಾಲನೆ ಮಾಡಿರುವುದಾಗಿ ತಿಳಿದು ಬಂದಿದ್ದು ವಾಹನವೂ ಸಹ ಈತನಿಗೆ ಸಂಭಂದಿಸಿರುವುದಾಗಿ ಹೇಳಲಾಗುತ್ತದೆ.
ನಿಯಮ ಪಾಲಿಸದ ಶಿಕ್ಷಣ ಇಲಾಖೆ –
ಶಾಲಾ ಮಕ್ಕಳನ್ನು ಸರಕು ಸಾಗಾಣೆ ವಾಹನದಲ್ಲಿ ತುಂಬುವ ನಿಯಮವಿಲ್ಲದಿದ್ದರು ಹಣ ಉಳಿಸುವ ದೆಸೆಯಲ್ಲಿ ಶಾಲೆಗಳಲ್ಲಿ ಈ ನಿಯಮ ಬಾಹಿರ ಘಟನೆಗಳು ನಡೆಯುತ್ತದೆ. ಈ ಘಟನೆಯಲ್ಲಿ ಸುಮಾರು 99 ಮಕ್ಕಳನ್ನು ಒಂದೇ ವಾಹನದಲ್ಲಿ ಪ್ರಯಾಣಮಾಡಲು ಒಪ್ಪಿಸಿದರ ಹಿನ್ನೆಲೆಯಲ್ಲಿ ಚಾಲಕನ ಆತುರಕ್ಕೆ ಈ ಘಟನೆ ನಡೆದಿರುವುದಾಗಿ ಸ್ಥಳೀಯರು ಆರೋಪಿಸಿದರೆ.