ಉಡುಪಿ : ರೆಡಿಯೋ ಕಾಲರ್ ಅಳವಡಿಸಲಾಗಿದ್ದ ಕಾಡಾನೆಯೊಂದು ಜಿಲ್ಲೆಯ ಸಿದ್ಧಾಫುರ ಹೊಸಂಗಡಿ ಭಾಗದಲ್ಕಿ ಜನರಿಗೆ ಆತಂಕ ತಂದಿಟ್ಟಿದೆ. ಭದ್ರಾ ರಿಸರ್ವ್ ನಿನ್ನ ತಪ್ಪಿಸಿಕೊಂಡಿದ್ದ ಈ ಕಾಡಾನೆ ಎರಡು ಜಿಲ್ಲೆಗಳನ್ನು ದಾಟಿ ಸದ್ಯ ಉಡುಪಿಗೆ ಕಾಲಿಟ್ಟಿದೆ. ಮಂಗಳವಾರದಂದು ಸಂಜೆ ವೇಳೆ ಬಾಳೆ ಬರೇ ಘಾಟಿಯಲ್ಲಿ ಆತಂಕ ಸೃಷ್ಟಿಸಿದ ಆನೆ ಇಂದು ಹೊಸಂಗಡಿ ಮೂಲಕ ಸಾಗಿ ಸಿದ್ಧಾಪುರ ಮೂಡಿಸಿದೆ. ಕಾಡಾನೆಯ ಆತಂಕದ ಹಿನ್ನೆಲೆಯಲ್ಲಿ ಇಂದು ಹೊಸಂಗಡಿ ಮತ್ತು ಸಿದ್ದಾಪುರದ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.

ನಿನ್ನೆ ಬಾಳೆ ಬರೆ ಘಾಟಿಯ ಶ್ರೀ ಚಂಡಿಕಾಂಬ ದೇವಸ್ಥಾನದ ಕೆಳಭಾಗದ ಕಾಡು ಪ್ರದೇಶದ ಮೂಲಕ ತೆರಳಿದ ಕಾಡಾನೆ ಬಾಳೆಬರೇ ಘಾಟಿಯ ಮೂಲಕ ಹೊಸಂಗಡಿ ಸಿದ್ದಾಪುರ ತಲುಪಿದೆ. ಕಳೆದ ತಿಂಗಳು ಈ ಕಾಡಾನೆಯನ್ನ ಹಾಸನದಿಂದ ರೇಡಿಯೋ ಕಾಲರ್ ಅಳವಡಿಸಿ ಭದ್ರಾ ಅರಣ್ಯ ವಲಯಕ್ಕೆ ಸ್ಥಳಾಂತರಿಸಲಾಗಿತ್ತು. ಅಲ್ಲಿಂದ ತಪ್ಪಿಸಿಕೊಂಡಿದ್ದ ಆನೆ ಒಂಟಿಯಾಗಿ ತಿರುಗುತ್ತ ಕಳೆದ ಎರಡು ದಿನಗಳಿಂದ ತೀರ್ಥಹಳ್ಳಿ ಮೊದಲಾದ ಪ್ರದೇಶದಲ್ಲಿ ಸಂಚಾರ ನಡೆಸಿ ಸ್ಥಳೀಯರನ್ನ ಬೆಚ್ಚಿಬಿಳಿಸಿತ್ತು. ಮಂಗಳವಾರ ಸಂಜೆ ದಿಢೀರ್ ಎನ್ನುವಂತೆ ಬಾಳೆಬರೆ ಘಾಟಿಯಲ್ಲಿ ಕಾಡಾನೆ ಪತ್ತೆಯಾಗುವ ಮೂಲಕ ವಾಹನ ಸವಾರರನ್ನು ಚಕಿತಗೊಳಿಸಿತ್ತು.

ಇಂದು ಮುಂಜಾನೆಯಿಂದ ಒಂಟಿ ಕಾಡಾನೆ ಸಿದ್ದಾಪುರ ವನ್ಯಜೀವಿ ವಲಯ ವ್ಯಾಪ್ತಿಯಲ್ಲಿ ಸಂಚರಿಸುತ್ತಾ ಅರಣ್ಯ ಅಧಿಕಾರಿಗಳಿಗೆ ಸಿಗದೇ ಕಾಡಿನಲ್ಲಿ ಮರೆಯಾಗಿತ್ತು. ಕಾಡನೀಯ ಕುತ್ತಿಗೆಗೆ ಅಳವಡಿಸಲಾಗಿದ್ದ ರೇಡಿಯೋ ಕಾಲರ್ ಮೂಲಕ ಆನೆ ಇರುವ ನಿಖರ ಸ್ಥಳವನ್ನು ಪತ್ತೆ ಹಚ್ಚಿ ಮತ್ತೆ ಅದನ್ನು ಮೂಲ ಸ್ಥಳಕ್ಕೆ ರವಾನಿಸುವ ಯೋಜನೆ ಅರಣ್ಯ ಮತ್ತು ವನ್ಯಜೀವಿ ಅಧಿಕಾರಿಗಳದ್ದು. ಈಗಾಗಲೇ ದಿಕ್ಕು ತಪ್ಪಿದಂತೆ ವರ್ತಿಸುತ್ತಿದ್ದ ಆನೆ ಸ್ಥಳೀಯರಿಗೆ ಯಾವುದೇ ಹಾನಿ ಮಾಡದಂತೆ ಕಾಪಾಡುವ ಉದ್ದೇಶಕ್ಕೆ ಆದಷ್ಟು ಮುಂಜಾಗ್ರತ ಕ್ರಮಗಳನ್ನು ವಹಿಸಿ ಆನೆಯನ್ನು ಹಿಂದೆ ಕಳಿಸುವ ಕೆಲಸಕ್ಕೆ ಅಧಿಕಾರಿಗಳು ಮುಂದಾಗಿದ್ದಾರೆ. ಇಂದು ಮಧ್ಯಾಹ್ನದ ವೇಳೆ ಗೆ ಹೊಸ ಅಂಗಡಿ ಹೆಣ್ಣಾ ಬೈಲು ಪ್ರದೇಶದಲ್ಲಿ ಕಾಡು ಆನೆ ಇರುವುದನ್ನು ರೇಡಿಯೋ ಕಾಲರ್ ಮತ್ತು ಡ್ರೋನ್ ಮೂಲಕ ಪತ್ತೆ ಹಚ್ಚಿದ ಅಧಿಕಾರಿಗಳು ಜನವಸತಿ ಪ್ರದೇಶದತ್ತ ಕಾಡಾನೆ ನುಗ್ಗದಂತೆ ಮುಂಜಾಗ್ರತ ಕ್ರಮಗಳನ್ನು ವಹಿಸಿದ್ದರು. ಸ್ಥಳೀಯವಾಗಿ ಯಾವುದೇ ವ್ಯಕ್ತಿಗೆ ಕಾಡಾನೆ ಕಂಡುಬದ್ದಲ್ಲಿ ತಕ್ಷಣ ಇಲಾಖೆಯ ಗಮನಕ್ಕೆ ತಂದು ಅದರ ಚಲನವಲನದ ಬಗ್ಗೆ ಮಾಹಿತಿ ನೀಡುವಂತೆ ಇಲಾಖೆ ಮನವಿ ಮಾಡಿಕೊಂಡಿದೆ.

ಇನ್ನು ಇಂದು ಮುಂಜಾನೆ ಕಾಡಾನೆಯ ಭೀತಿಯಿಂದ ಸಿದ್ದಾಪುರ ಹೊಸ ಅಂಗಡಿ ಪರಿಸರದ ಬಹುತೇಕ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಸಿದ್ದಾಪುರದ ಪೇಟೆಯಲ್ಲಿ ಹಲವು ವರ್ಷಗಳಿಂದ ಬುಧವಾರದಂದು ನಡೆಯುವ ವಾರದ ಸಂತೆಗೂ ಕೂಡ ಸ್ಥಳೀಯಾಡಳಿತ ಬಂತ್ ಮಾಡುವ ಮೂಲಕ ಜನರನ್ನ ಎಚ್ಚರಿಸುವ ಕೆಲಸ ಮಾಡಿದೆ.
ಜಿಲ್ಲೆಗೆ ಮೊದಲ ಬಾರಿಗೆ ಎನ್ನುವಂತೆ ಕಾಡಾನೆಯನ್ನ ಪತ್ತೆ ಹಚ್ಚಿ ಅದನ್ನ ಮರಳಿ ಮೂಲ ಸ್ಥಾನಕ್ಕೆ ತಲುಪಿಸುವ ನಿಟ್ಟಿನಲ್ಲಿ ಗಮನಹರಿಸುತ್ತಿದೆ. ರೇಡಿಯೋ ಕಾಲರ್ ಸಿಗ್ನಲ್ ಮಾಹಿತಿ ಆಧಾರದ ಮೇಲೆ ಕಾಡಾನೆ ರಾತ್ರಿಗೆ ವೇಳೆಯಲ್ಲಿ ಸಂಚಾರ ಮಾಡುತ್ತಿರುವುದು ಸಾರ್ವಜನಿಕರ ಭಯಕ್ಕೆ ಕಾರಣವಾಗಿದ್ದು, ಅರಣ್ಯ ಮತ್ತು ವನ್ಯಜೀವ ಇಲಾಖೆಯವರು ಯಾವುದೇ ಅನಾಹುತ ನಡೆಯದಂತೆ ಸಾಕಷ್ಟು ಮುಂಜಾಗ್ರತ ಕ್ರಮಗಳನ್ನು ವಹಿಸಿದ್ದಾರೆ. ಗುರುವಾರ ಸಂಜೆಯೊಳಗೆ ಕಾಡಾನೆಯನ್ನ ಮರಳಿ ಮೂಲ ಸ್ಥಾನಕ್ಕೆ ತಲುಪಿಸುವ ನಿಟ್ಟಿನಲ್ಲಿ ಇಲಾಖೆ ಕಾರ್ಯವುವಾಗಿದ್ದು ಸ್ಥಳೀಯರು ಈ ನಿಟ್ಟಿನಲ್ಲಿ ಇಲಾಖೆಗೆ ಸಹಕಾರ ನೀಡುತ್ತಿದ್ದಾರೆ.