ಕಾಪು: ಜನವಸತಿ ಇರದ ಬೆಟ್ಟ ಪ್ರದೇಶದಲ್ಲಿ ಅಳವಡಿಸಲಾಗಿದ್ದ ಶಿಲುಬೆಯನ್ನು ಧ್ವಂಸ ಮಾಡಿದ ಘಟನೆ ಕಾಪುವಿನಲ್ಲಿ ನಡೆದಿದೆ. ಕಾಪು ತಾಲೂಕಿನ ಕಟ್ಟಿಂಗೇರಿ ಗ್ರಾಮದ ಕುದುರೆ ಮಲೆ ಎಂಬಲ್ಲಿ ಈ ಘಟನೆ ನಡೆದಿದೆ.

ಫೆಬ್ರವರಿ 19ರಂದು ಕುಟುಂಬ ಒಂದಕ್ಕೆ ಸೇರಿದ ಪೂಜಾ ಸ್ಥಳದಲ್ಲಿದ್ದ ಶಿಲುಬೆ ದ್ವಂಸವಾಗಿರುವ ಕುರಿತು ಶಿರ್ವ ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಗಿತ್ತು. ಸಮುದಾಯದ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ದೂರು ದಾಖಲಾಗಿದ್ದು ಕಟ್ಟಿಂಗೇರಿ ಫ್ಲಾವಿನ್ ಎಂಬುವರು ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
