Monday, June 30, 2025

spot_img

ವಿದ್ಯಾರ್ಥಿಗಳು  ಆದರ್ಶ ವ್ಯಕ್ತಿತ್ವ ಹೊಂದಲು ಬೇಕು ಶಿಸ್ತು, ನಾಯಕತ್ವ ಗುಣ, ಸೇವಾಮನೋಭಾವ: ಹರೀಶ್ ಶೇರಿಗಾರ್

ಹಿರಿಯಡ್ಕ : ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯಲ್ಲಿ ಶಿಕ್ಷಣದ ಜೊತೆಗೆ ಪಠ್ಯೇತರ ಚಟುವಟಿಕೆಗಳ ಪಾತ್ರವು ಮುಖ್ಯ. ಉತ್ತಮ ಶಿಸ್ತು, ನಾಯಕತ್ವ ಗುಣ, ಸೇವಾಮನೋಭಾವ ಸಹಿತ ಆದರ್ಶ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಲು ಸಾಧ್ಯ ಎಂದು ಕೇಂದ್ರಸಂಘ ಕರ್ನಾಟಕ ರಾಜ್ಯ ದೇವಾಡಿಗರ ಸಂಘ ಮಂಗಳೂರು ಇದರ ಶತಮಾನೋತ್ಸವ ಸಮಿತಿಯ ಗೌರವಾಧ್ಯಕ್ಷರಾದ   ಶ್ರೀಯುತ ಹರೀಶ್ ಶೇರಿಗಾರ್ ಉದ್ಯಮಿ ದುಬೈ ಇವರು ಹೇಳಿದರು. ಹಿರಿಯಡ್ಕ ದೇವಾಡಿಗ ಉಪಸಂಘದಲ್ಲಿ ನಡೆದ ಗಣಹೋಮ, ಶ್ರೀ ಸತ್ಯನಾರಾಯಣ ಪೂಜೆ, ವಿದ್ಯಾರ್ಥಿ ವೇತನ, ಸನ್ಮಾನ ಹಾಗೂ ಪುಸ್ತಕ ವಿತರಣಾ ಕಾರ್ಯಕ್ರಮದಲ್ಲಿವಿದ್ಯಾರ್ಥಿಗಳನ್ನು ಉದ್ದೇಶಿಸಿ ಈ ಮಾತನ್ನಾಡಿದರು.

ಕೇಂದ್ರ ಸಂಘದ ಅಧ್ಯಕ್ಷ ಶ್ರೀಯುತ ಅಶೋಕ್ ಮೊಯ್ಲಿ ಇವರು ಉದ್ಘಾಟಿಸಿದ ಈ ಕಾರ್ಯಕ್ರಮದ ಮಹಾಪೋಷಕರಾಗಿ ಶ್ರೀಯುತ ಶ್ರೀಧರ ದೇವಾಡಿಗ ಉಪಸ್ಥಿತರಿದ್ದರು, ಉಪ ಸಂಘದ ಅಧ್ಯಕ್ಷ ರಾಜೇಂದ್ರ ಕುಮಾರ್ ದೇವಾಡಿಗ ಅಧ್ಯಕ್ಷತೆ ವಹಿಸಿದ್ದರು. ಡಾ. ಮಾಧವಿ ಎಸ್ ಭಂಡಾರಿ ಡಾ. ಪ್ರವೀಣ್ ಕುಮಾರ್, ಶ್ರೀ ಆಲೂರು ರಘುರಾಮ್ ದೇವಾಡಿಗ, ಶ್ರೀ ಅಶೋಕ್ ಶೇರಿಗಾರ್ ಹಿರಿಯಡ್ಕ, ಶ್ರೀ ಪ್ರಭಾಕರ್ ದೇವಾಡಿಗ, ಶ್ರೀ ಮೋಹನ್ ದಾಸ್ ಇವರುಗಳಿಗೆ ವಿವಿದ ಕ್ಷೇತ್ರಗಳಲ್ಲಿ ಸಲ್ಲಿಸಿದ ಸೇವೆಯನ್ನು ಗುರುತಿಸಿ ಸನ್ಮಾನಿಸಲಾಯಿತು. ಈ ಶಾಲಿನ ಅತಿಹೆಚ್ಚು ಅಂಕ ಗಳಿಸಿದ ಕೆ ಶ್ರೀನಿತ್ ಎಸ್ ಶೇರಿಗಾರ್ ಇವರಿಗೆ ಸನ್ಮಾನಿಸಿ ವಿದ್ಯಾರ್ಥಿ ವೇತನ ನೀಡಲಾಯಿತು. ಒಟ್ಟು 1 ಲಕ್ಷ 3 ಸಾವಿರ ಮೊತ್ತದ ಪುಸ್ತಕ ಹಾಗು ಸುಮಾರು 42000 ರೂ ವಿದ್ಯಾರ್ಥಿವೇತನ ವಿತರಿಸಲಾಯಿತು.
ಕುಮಾರಿ ಯಶಸ್ವಿನಿ ಹಿರಿಯಡ್ಕ ಇವರಿಂದ ಭರತನಾಟ್ಯ ಕಾರ್ಯಕ್ರಮವು ನಡೆಯಿತು. ಕೇಂದ್ರಸಂಘದಿಂದ ಕಾರ್ಯಕ್ರಮದಲ್ಲಿ ಶ್ರೀಯುತ ಕರುಣಾಕರ್ M H, ಶ್ರೀಮತಿ ವೀಣಾ ಗಣೇಶ್, ಶ್ರೀಮತಿ ಗೀತಾ ಕಲ್ಯಾಣಪುರ, ಶ್ರೀಯುತ ಬಾಬು ದೇವಾಡಿಗ, ಶ್ರೀಯುತ ಸುಧಾಕರ್ ಕುಮಾರ್ ದೇವಾಡಿಗ, ಶ್ರೀಯುತ ಸದಾನಂದ ಶೇರಿಗಾರ್ ಉಪಸ್ಥಿತರಿದ್ದರು.  
ಕುಮಾರಿ ಶತಾ ದೇವಾಡಿಗ ಪ್ರಾರ್ಥಿಸಿ, H ಗಣೇಶ್ ಸೇರಿಗಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ರಮೇಶ್ ಸೇರಿಗಾರ್ ವಂದಿಸಿ, ಶ್ರೀಮತಿ ಪೂರ್ಣಿಮಾ ದಿನೇಶ್ ಹಾಗೂ ಶತಾ ದೇವಾಡಿಗ ಕಾರ್ಯಕ್ರಮ ನಿರೂಪಿಸಿದರು. ರತ್ನಾಕರ ದೇವಾಡಿಗ, ಮಂಜುನಾಥ್ ಸೇರಿಗಾರ್ ಪೆರ್ಡೂರು, ವಿಶ್ವನಾಥ್ ಸೇರಿಗಾರ್ ಸಹಕರಿಸಿದರು.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles