ಕೋಟ: ರಸ್ತೆಯಲ್ಲಿ ಸಿಕ್ಕ ವ್ಯಕ್ತಿ ಇರುವವರಿಗೆ ಲಿಫ್ಟ್ ನೀಡಿ ಅಪಘಾತದಿಂದ ಬೈಕ್ ಸವಾರ ಮೃತಪಟ್ಟ ಘಟನೆ ಚೇಂಪಿಯಲ್ಲಿ ನಡೆದಿದೆ. ಸ್ಕೂಟಿ ಸವಾರ ಅನಂತ ಹೆಗ್ಡೆ ಮೃತಪಟ್ಟ ದುರ್ವೈವಿ. ಸಾಲಿಗ್ರಾಮ ಸಮೀಪದ ರಾಷ್ಟ್ರೀಯ ಹೆದ್ದಾರಿ 66 ಕೆಂಪಿ ವಿಶ್ವಕರ್ಮ ಸಭಾಭವನ ಮುಂಭಾಗದಲ್ಲಿ ಅಪಘಾತ ನಡೆದಿದ್ದು, ಬ್ರಹ್ಮಾವರದಿಂದ ಕುಂದಾಪುರದತ್ತ ತೆರಳುತ್ತಿದ್ದ ರಿಕ್ಷಾ ಚಾಲಕ ವಿರುದ್ಧ ದಿಕ್ಕಿನಲ್ಲಿ ಬರುತ್ತಿದ್ದ ಸ್ಕೂಟಿಯನ್ನು ಗಮನಿಸಿ ತಪ್ಪಿಸಲು ಯತ್ನಿಸಿದ್ದಾನೆ. ಈ ಸಂದರ್ಭ ರಿಕ್ಷಾ ಬಲಭಾಗಕ್ಕೆ ಹೊರಳಿ ಡಿವೈಡರ್ ಹತ್ತಿ ನಿಂತಿದೆ. ಇತ್ತ ಎದುರುಗಡೆಯಿಂದ ರಿಕ್ಷಾ ಗಮನಿಸಿದ ಹಿಂಭಾಗದಲ್ಲಿ ಕುಳಿತ ಸ್ಕೂಟಿ ಸಹಸವಾರ ವಿಶ್ವನಾಥ ಒಮ್ಮಿಂದೊಮ್ಮೆಲೆ ಸ್ಕೂಟಿಯಿಂದ ಪಕ್ಕಕ್ಕೆ ನೆಗೆದ ಪರಿಣಾಮ ಬ್ಯಾಲೆನ್ಸ್ ಕಳೆದುಕೊಂಡ ಅನಂತ ಹೆಗ್ಡೆ, ರಾಷ್ಟ್ರೀಯ ಹೆದ್ದಾರಿಯ ಮೇಲೆ ಬಿದ್ದು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಸಹಸವಾರ ವಿಶ್ವನಾಥ, ಕೆಲವೇ ಮೀಟರ್ ಗಳ ಹಿಂದೆ ಅಷ್ಟೇ ಸ್ಕೂಟಿ ಚಾಲಕ ಅನಂತ ಹೆಗಡೆಯವರ ಬಳಿ ಲಿಫ್ಟ್ ಪಡೆದಿದ್ದ ಎನ್ನಲಾಗಿದ್ದು, ಭಯಗೊಂಡು ಸ್ಕೂಟಿಯಿಂದ ಜಂಪ್ ಮಾಡಿರುವುದಾಗಿ ತಿಳಿಸಿದ್ದಾರೆ. ಸದ್ಯ ಈ ಅಪಘಾತದಿಂದಾಗಿ ದ್ವಿಚಕ್ರ ವಾಹನದಲ್ಲಿ ಲಿಫ್ಟ್ ನೀಡುವುದು ಎಷ್ಟು ಅಪಾಯಕಾರಿ ಎನ್ನುವ ಕುರಿತು ಸಾರ್ವಜನಿಕರು ಬೇಸರ ಹೊರಹಾಕಿದ್ದಾರೆ. ಇಂದು ಅನಂತ ಹೆಗಡೆ ಅತ್ಯಂತ ಸೌಮ್ಯ ಸ್ವಭಾವದ ವ್ಯಕ್ತಿಯಾಗಿದ್ದು ತಾನು ಮತ್ತು ತನ್ನ ಕೆಲಸ ಬಗ್ಗೆ ಹೆಚ್ಚಾಗಿ ಗಮನ ಕೊಡುತ್ತಿದ್ದ ವ್ಯಕ್ತಿಗೆ ಈ ರೀತಿ ನಿರ್ಮಾಣ ಒದಗಿರುವುದು ಸಾರ್ವಜನಿಕ ವಲಯದಲ್ಲಿ ಬೇಸರ ಮೂಡಿಸಿದೆ. ಈ ಕುರಿತು ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
