ಉಡುಪಿ : ಕಳೆದ ನಾಲ್ಕು ದಿನಗಳ ಹಿಂದೆ ವಿಶು ಶೆಟ್ಟಿ ದುಃಖಿತ ಮಹಿಳೆಯೊಬ್ಬರನ್ನು ರಕ್ಷಿಸಿ, ಸಖಿ ಸೆಂಟರಿಗೆ ದಾಖಲಿಸಿದ್ದು, ಇದೀಗ ಮಹಿಳೆಯ ಮಕ್ಕಳು ಪತ್ತೆಯಾಗಿದ್ದು ಮಕ್ಕಳಿಗೆ ಹಸ್ತಾಂತರಿಸಲಾಗಿದೆ. ರಕ್ಷಣಾ ಸಮಯ ಮಹಿಳೆ ತನ್ನ ಹೆಸರು ಗಂಗಮ್ಮ, ತಿಪಟೂರಿನವರು ಎಂದು ಸುಳ್ಳು ಮಾಹಿತಿ ನೀಡಿದ್ದು, ಮಹಿಳೆ ಮೂಲತಃ ಶಿವಮೊಗ್ಗದವರಾಗಿದ್ದು ಯಾವುದೋ ಕಾರಣಕ್ಕೆ ಮನನೊಂದು ಮನೆ ಬಿಟ್ಟು ಉಡುಪಿಗೆ ಬಂದು ಅಸಹಾಯಕರಾಗಿದ್ದರು. ಸಖಿ ಸೆಂಟರಿನ ಸಿಬ್ಬಂದಿಗಳು ಮಹಿಳೆ ನೀಡಿದ ಮಾಹಿತಿ ಸರಿ ಇಲ್ಲದಿದ್ದರೂ ಮಕ್ಕಳನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಈ ದಿನ ಮಹಿಳೆಯ ಮಕ್ಕಳು ಉಡುಪಿ ಸಖಿ ಸೆಂಟರಿಗೆ ಬಂದು ಕಾನೂನು ಪ್ರಕ್ರಿಯೆ ಮುಗಿಸಿ ತಾಯಿಯನ್ನು ಕರೆದುಕೊಂಡು ಹೋಗಿದ್ದಾರೆ.