Saturday, June 28, 2025

spot_img

ಮಾಹೆಯಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ

ಮಣಿಪಾಲ : ಮಣಿಪಾಲ ಅಕಾಡೆಮಿ ಆಫ್ಹೈಯರ್ ಎಜುಕೇಶನ್ (MAHE) ವತಿಯಿಂದ ಅಂತಾರಾಷ್ಟ್ರೀಯಮಹಿಳಾ ದಿನಾಚರಣೆ ಮಣಿಪಾಲದ ಕೆಎಂಸಿ ಗ್ರೀನ್ಸ್ ನಲ್ಲಿ ನಡೆಯಿತು. ಆಕ್ಸಿಲರೇಟಿಂಗ್ ಆಕ್ಷನ್ಎಂಬ ವಿಷಯದದಲ್ಲಿ ಹಮ್ಮಿಕೊಳ್ಳಲಾದ ಈ ಕಾರ್‍ಯಕ್ರಮದಲ್ಲಿ, ಮಹಿಳೆಯರ ಕೊಡುಗೆಗಳನ್ನು ಗೌರವಪೂರ್ವಕವಾಗಿಸ್ಮರಿಸುವುದರೊಂದಿಗೆ ಎಲ್ಲರನ್ನೂ ಒಳಗೊಳ್ಳುವ ಮತ್ತು ಸಮಾನತೆಯಸಮಾಜದ ಕಡೆಗೆ ಮುಂದುವರಿಯುವ ಪ್ರಯತ್ನಗಳನ್ನು ಇನ್ನಷ್ಟುವೇಗಗೊಳಿಸುವಂತೆ ಕರೆ ನೀಡಿಲಾಯಿತು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಜಿಇ ಹೆಲ್ತ್ ಕೇರ್ ಇದರ ಭಾರತ ಮತ್ತು ದಕ್ಷಿಣ ಏಷ್ಯಾ ನಿರ್ದೇಶಕರು ಮತ್ತು ಮುಖ್ಯಸ್ಥರಾದ ಹಾಗೂವ್ಯವಹಾರಗಳು ಮತ್ತು ನೀತಿಗಳು ವಿಭಾಗದ ಶ್ರೀಮತಿ ಶೋಭಾ ಮಿಶ್ರಾಘೋಷ್ ಅವರಿದ್ದರು. ಅವರೊಂದಿಗೆ ವೇದಿಕೆಯಲ್ಲಿ ಮಾಹೆ ಟ್ರಸ್ಟ್ ನ ಟ್ರಸ್ಟಿಗಳಾದ ಶ್ರೀಮತಿ ವಸಂತಿ ಆರ್ ಪೈ, ಮಾಹೆ ಸಹ ಕುಲಪತಿಗಳಾದ ಡಾ.ಎಚ್‌.ಎಸ್‌.ಬಲ್ಲಾಳ್, ಉಪಕುಲಪತಿಗಳಾದ ಲೆಫ್ಟಿನೆಂಟ್ಜನರಲ್ ಡಾ. ಎಂ.ಡಿ, ವೆಂಕಟೇಶ್, VSM (ನಿವೃತ್ತ), ಅಧ್ಯಕ್ಷರಾಗಿದ್ದಸಮಾಜ ಸೇವಕರಾದ ಶ್ರೀಮತಿ ಇಂದಿರಾ .ಎಸ್‌.ಬಲ್ಲಾಳ್, ಶಿಕ್ಷಣತಜ್ಞರಾದ ಶ್ರೀಮತಿ ಕುಸುಮಾ ವೆಂಕಟೇಶ್, ಸಮುದಾಯ ಸೇವೆಗಳಸಂಚಾಲಕರಾದ ಶ್ರೀಮತಿ ಮಂಜು ಶರ್ಮಾ, ಮಣಿಪಾಲವಿಶ್ವವಿದ್ಯಾಲಯ ಜೈಪುರದ ಅಧ್ಯಕ್ಷರಾದ ಡಾ.ಎನ್‌.ಎನ್.ಶರ್ಮಾ, ಸಿಕ್ಕಿಂ ಮಣಿಪಾಲ ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಏರ್ಮಾರ್ಷಲ್ ಡಾ.ಡಿ.ಸಿ. ಅಗರ್ವಾಲ್, ಮತ್ತು ಶ್ರೀಮತಿ ಅಲ್ಕಾಅಗರ್ವಾಲ್ ಅವರು ಉಪಸ್ಥಿತರಿದ್ದರು.

ಈ ಸಂದರ್ಭ ಮುಖ್ಯ ಅತಿಥಿಯಾಗಿದ್ದ ಜಿಇ ಹೆಲ್ತ್ ಕೇರ್ ಇದರ ಭಾರತಮತ್ತು ರಷ್ಯಾ ನಿರ್ದೇಶಕರು ಮತ್ತು ಮುಖ್ಯಸ್ಥರಾದ ಹಾಗೂವ್ಯವಹಾರಗಳು ಮತ್ತು ನೀತಿಗಳು ವಿಭಾಗದ ಶ್ರೀಮತಿ ಶೋಭಾ ಮಿಶ್ರಾಘೋಷ್ ಅವರು ಮಾತನಾಡಿ “ಮಣಿಪಾಲ್ ಅಕಾಡೆಮಿ ಆಫ್ಹೈಯರ್ ಎಜುಕೇಶನ್‌ನ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಕಾರ್ಯಕ್ರಮವನ್ನು ಶಿಕ್ಷಣದ ಮೂಲಕ ಮಹಿಳೆಯರಸಬಲೀಕರಣದೊಂದಿಗೆ ಆಚರಿಸುವುದು ಮಾತ್ರವಲ್ಲದೆ ಅವರಅಂತರ್ಗತ ಬೆಳವಣಿಗೆಯನ್ನು ಉತ್ತೇಜಿಸಿದೆ. ನಾವು ಮಹಿಳೆಯರಸಾಧನೆಗಳನ್ನು ಆಚರಿಸುವಾಗ, ಎದುರಾದ ಅಡೆತಡೆಗಳನ್ನುಮುರಿಯೋಣ ಮತ್ತು ಲಿಂಗಭೇದವಿಲ್ಲದೆ ಪ್ರತಿಯೊಬ್ಬರೂ ಅಭಿವೃದ್ಧಿಹೊಂದುವ ಭವಿಷ್ಯವನ್ನು ನಿರ್ಮಿಸೋಣ” ಎಂದರು.

ಮಾಹೆ ಸಹ ಕುಲಪತಿಗಳಾದ ಡಾ. ಎಚ್ ಎಸ್ ಬಲ್ಲಾಳ್, ಅವರುಮಾತನಾಡಿ, “ಮಾಹೆಯ ಈ ಕಾರ್‍ಯಕ್ರಮ ಮಹಿಳೆಯರ ಅರ್ಥಪೂರ್ಣಕೊಡುಗೆಗಳನ್ನು ಗುರುತಿಸುತ್ತದೆ ಮತ್ತು ಎಲ್ಲರನ್ನು ಒಳಗೊಳ್ಳುವಪರಿಸರದ ಪ್ರಾಮುಖ್ಯತೆಯನ್ನು ಉತ್ತೇಜಿಸುತ್ತದೆ, ಅಲ್ಲಿ ಸಮಾಜವುನಿಗದಿ ಪಡಿಸಿದ ಅನಗತ್ಯ ನಿರೀಕ್ಷೆಗಳನ್ನು ಮುರಿದು, ಮಹಿಳೆಯರನ್ನುಸುಸ್ಥಿರಗೊಳಿಸಿ ಗಡಿಯತ್ತ ತಳ್ಳಲು ಸಶಕ್ತರಾಗುವಂತೆ ಮಾಡುತ್ತದೆ” ಎಂದು ಹೇಳಿದರು.
ಮಾಹೆ ಉಪ ಕುಲಪತಿಗಳಾದ ಲೆಫ್ಟಿನೆಂಟ್ ಜನರಲ್ ಡಾಎಂ.ಡಿ.ವೆಂಕಟೇಶ್, VSM (ನಿವೃತ್ತ) ಅವರು ಮಾತನಾಡಿ, “ಮಾಹೆಯಈ ಕಾರ್‍ಯಕ್ರಮ ಪ್ರತಿಯೊಬ್ಬರಿಗೂ ಮಹಿಳೆಯರ ಸಂಪೂರ್ಣಸಾಮರ್ಥ್ಯವನ್ನು ತಿಳಿಸಿಕೊಡುವುದಲ್ಲಿ ಪರಿಣಾಮಕಾರಿಯಾಗಿದೆ. ಸಮಾನತೆ ಮತ್ತು ಸಬಲೀಕರಣವು ಜೊತೆಯಾಗಿ ಒಂದು ಸಮಾಜದಲ್ಲಿಹೇಗೆ ಸ್ಥಾಪಿಸಬಹುದು ಎಂಬುದನ್ನು ಎತ್ತಿ ತೋರಿಸುತ್ತದೆ” ಎಂದರು.

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಮಾಹೆವತಿಯಿಂದ ನಿವೃತ್ತ ಪ್ರಾಂಶುಪಾಲರಾದ ಎ.ಲಕ್ಷ್ಮೀಬಾಯಿ, ಕೃಷಿಕರುಹಾಗೂ ಸಮಾಜ ಸೇವಕಿ ಕುಸುಮಾ ಕಾಮತ್ ಅವರನ್ನುಸನ್ಮಾನಿಸಲಾಯಿತು.
ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ನಲ್ಲಿ ನಡೆದಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಸಮಾಜವನ್ನುಒಳಗೊಳ್ಳುವಂತೆ ಮಾಡುವುದು ಮತ್ತು ಮಹಿಳೆಯರು ತಮ್ಮಗುರಿಗಳನ್ನು ಸಾಧಿಸಲು ಸಬಲೀಕರಣ, ಉನ್ನತಿಯತ್ತಪ್ರೇರೇಪಿಸುವುದು ನಮ್ಮ ಜವಾಬ್ದಾರಿ ಎಂಬುದನ್ನು ನಮಗೆಕಲಿಸಿಕೊಟ್ಟಿದೆ.
ಕಾರ್‍ಯಕ್ರಮ ಮಹಿಳೆಯರಿಗೆ ವಿವಿಧ ಚಟುವಟಿಕೆಗಳು, ಆಟೋಟ, ಆಹಾರ ಮಳಿಗೆಗಳು, ಸಾಂಸ್ಕೃತಿಕ  ಕಾರ್‍ಯಕ್ರಮಗಳೊಂದಿಗೆರೋಮಾಂಚಕ ಮತ್ತು ಸ್ಮರಣೀಯವಾಗಿರುವಂತೆ ಮಾಡಿತು.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles