ಉಡುಪಿ: ಎಚ್ಆರ್ಎಸ್ ಮಹಿಳಾ ವಿಭಾಗದ ಸ್ವಯಂಸೇವಕರು ಹೂಡೆಯ ಗುಜ್ಜರ್ ಬೆಟ್ಟುವಿನಲ್ಲಿ ಸ್ವಚ್ಚತಾ ಕಾರ್ಯಕ್ರಮವನ್ನು ನಡೆಸಿದರು. ಈ ಬಗ್ಗೆ ಪ್ರತಿಕ್ರಿಯಿಸಿದ ತಂಡದ ಪ್ರಮುಖರಾದ ಕುಲ್ಸೂಮ್ ಅಬೂಬಕ್ಕರ್, ಇತ್ತೀಚೆಗೆ ಹಾಸನ ಮನ್ಸೂರಾದಲ್ಲಿ ನಡೆದ ಎರಡು ದಿವಸಗಳ ರಾಜ್ಯ ಸ್ವಯಂಸೇವಕರ ಸಮ್ಮೇಳನದಲ್ಲಿ ಭಾಗವಹಿಸಿ ಪ್ರೇರಣೆ ಪಡೆದಿದ್ದು, ಅದರಂತೆ ರಸ್ತೆ ಬದಿಗಳಲ್ಲಿ ಹರಡಿದ್ದ ಕಸವನ್ನು ಹೆಕ್ಕಿ ತೆಗೆದು ಶುಚಿಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ
ಈ ಸಂದರ್ಭದಲ್ಲಿ ಸ್ಥಳೀಯ ಗ್ರಾಪಂ ಪಂಚಾಯತ್ ಮುಖಂಡರು ಮತ್ತು ಎಸ್ಎಲ್ಆರ್ಎಂ ಘಟಕದವರು ಸ್ಥಳಕ್ಕೆ ಆಗಮಿಸಿದರು. ಇನ್ನು ಮುಂದೆ ಕಸವನ್ನು ರಸ್ತೆಬದಿ ಎಸೆಯುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಅದಕ್ಕಾಗಿ ಸಿ.ಸಿ.ಕ್ಯಾಮರವನ್ನು ಅಳವಡಿಸಲಾಗುವುದು ಎಂದು ಅವರು ತಿಳಿಸಿದರು. ಈ ವೇಳೆ ಗ್ರಾಪಂ ಸದಸ್ಯೆ ಜಮೀಲ, ಸದೀದ ಮೊದಲಾದವರು ಉಪಸ್ಥಿತರಿದ್ದರು