Saturday, June 28, 2025

spot_img

ಮಲ್ಪೆ‌ ಪ್ರಕರಣ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ತೀವ್ರ ಖಂಡನೆ..

ಉಡುಪಿ : ಮಲ್ಪೆ ಬಂದರಿನಲ್ಲಿ ಮೀನುಗಾರ ಮಹಿಳೆಯ ಮೇಲೆ ಕಳ್ಳತನದ ಆರೋಪ ಹೊರೆಸಿ ಆಕೆಯನ್ನು ಮರಕ್ಕೆ ಕಟ್ಟಿಹಾಕಿ ಸಾರ್ವಜನಿಕವಾಗಿ ಶಿಕ್ಷಿಸಿದ್ದು ಅತ್ಯಂತ ಖಂಡನಾರ್ಹ. ಈ ಘಟನೆಗೆ ಕಾರಣ ಆದವರನ್ನ ಬಂಧಿಸಿರುವ ಪೋಲೀಸ್ ಇಲಾಖೆ ಈ. ಸಂಬಂಧ ಸಮಗ್ರ ತನಿಖೆಯನ್ನು ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಉಡುಪಿ ಜಿಲ್ಲಾ ಸಮಿತಿಯು ಒತ್ತಾಯಿಸಿದೆ.

ಮಹಿಳೆ ಎಂಬ ಕಾರಣಕ್ಕೆ ಸಾರ್ವಜನಿಕವಾಗಿ ಹಲ್ಲೆ ಮಾಡುವ, ಬೆತ್ತಲೆಗೊಳಿಸುವ, ಆ ಹೆಸರಿನಲ್ಲಿ ಮೈ ಮುಟ್ಟುವ ಲೈಂಗಿಕ ಕಿರುಕುಳ ನೀಡುವ ಪ್ರಕರಣಗಳು ರಾಜ್ಯವ್ಯಾಪಿ ಹೆಚ್ಚುತ್ತಿರುವುದು ಅತ್ಯಂತ ಕಳವಳಕಾರಿ ವಿದ್ಯಮಾನವಾಗಿದೆ..ಕಾನೂನನ್ನು ಕೈ ಗೆತ್ತಿಕೊಳ್ಳುವ ಪ್ರವೃತ್ತಿಗಳು ಹೆಚ್ಚುತ್ತಿವೆ.ಈ ಘಟನೆಗಳನ್ನು ಗಂಭೀರವಾಗಿ ಪರಿಗಣಿಸದಿದ್ದಲ್ಲಿ ಮತ್ತಷ್ಡು ಅರಾಜಕತೆ ಹೆಚ್ಚಾಗುತ್ತದೆ. ಈ ಪ್ರಕರಣ ಕುರಿತಂತೆ ಮಹಿಳಾ ಪರವೆಂದು ಬೊಬ್ಬಿಡುವ ಸ್ಥಳಿಯ ಶಾಸಕರಾಗಲಿ , ಸಂಸದರಾಗಲಿ ಮಾತನಾಡದಿರುವುದು ಅವರ ದುಡಿಯುವ ಜನರ, ಬಡವರ, ಮಹಿಳೆಯರ ಕುರಿತ ನಿಷ್ಕಾಳಜಿಯನ್ನು ತೋರುತ್ತದೆ. ಈ ಹಿನ್ನಲೆಯಲ್ಲಿ ಈ ಪ್ರಕರಣ ಕುರಿತಂತೆ ಸಮಗ್ರ ತನಿಖೆಯಾಗಬೇಕು.ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮವನ್ನು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಉಡುಪಿ ಜಿಲ್ಲಾ ಸಮಿತಿಯು ಒತ್ತಾಯಿಸುತ್ತದೆ.ಮತ್ತು ಇಂಥಹ ಪ್ರಕರಣಗಳು ಮರುಕಳಿಸದಂತೆ ಜನಜಾಗೃತಿಯನ್ನು ಮೂಡಿಸಬೇಕೆಂದು ಮನವಿ ಮಾಡುತ್ತೇವೆ ಎಂದಿದ್ದಾರೆ.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles