ಉಡುಪಿ : ಕೆಲವು ದಿನಗಳ ಹಿಂದೆ ಕರಾವಳಿಯ ಸಾಮಾಜಕ ಜಾಲತಾಣದಲ್ಲಿ ಸೂಪರ್ ಸ್ಪೇಶಲ್ ಜರ್ಮನ್ ತಂತ್ರಜ್ಞಾನದ ಮತ್ಸ್ಯಗಂಧ ರೈಲಿನ ಸುದ್ದಿಯಾಗಿತ್ತು. ಪ್ರಯಾಣಿಕರ ಹಿತ ದೃಷ್ಟಿಯಿಂದ ಮತ್ಸ್ಯಗಂಧ ರೈಲು ಮೇಲ್ದರ್ಜೆಗೆ ಏರಿಸಲಾಗಿದೆ ಎಂದು ರಾಜಕೀಯ ನಾಯಕರು ಇದರ ಡಂಗುರ ಸಾರಿದ್ದರು. ಸದ್ಯ ಈ ಟ್ರೈನ್ ನಲ್ಲಿ ಪ್ರಯಾಣಿಸಿದ ಜಿಲ್ಲೆಯ ಪ್ರಯಾಣಿಕರೋರ್ವರು ಸೂಪರ್ ಸ್ಪೇಶನ್ ಜರ್ಮನ್ ತಂತ್ರಜ್ಞಾನದ ಮತ್ಸ್ಯಗಂಧ ರೈಲಿನಲ್ಲಿ ಪ್ರಯಾಣಿಸಿ ಫ್ಯಾಕ್ಟ್ ಚೆಕ್ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದಾರೆ.

ಮತ್ಸ್ಯಗಂಧ ಎಕ್ಸ್ಪ್ರೆಸ್ ನ ಟಾಯ್ಲೆಟ್ ನ ಹೊರಗಿನ ಸವೆದು ಹೋದ ಎರಡು ಬಾಗಿಲುಗಳು, ಅವ್ಯವಸ್ಥೆಯ ಆಗರವಾಗಿರುವ ಟಾಯ್ಲೆಟ್, ಟಾಯ್ಲೆಟ್ ಒಳಗೆ ನೀರಿಲ್ಲ, ಗಬ್ಬುನಾಥ ಬರುತ್ತಿದೆ, ಯಾವುದೋ 8- 10 ವರ್ಷ ಹಳೆಯ ಬೋಗಿಗಳನ್ನು ಮತ್ಸ್ಯಗಂಧ ರೈಲಿಗೆ ನೀಡಿರುತ್ತಾರೆ ಹಾಗೂ ಹೊಸ ಎಲ್ಎಚ್ಬಿ ಬೋಗಿಗಳನ್ನು ಕದ್ದಿದ್ದಾರೆ, ರಾಜಕೀಯ ನಾಯಕರನ್ನು ಮಂಗ ಮಾಡುವುದು ಯಾಕೆ ??? ಎಂದು ದೂರಿದ್ದಾರೆ…