Thursday, March 5, 2026

spot_img

ಮಣಿಪಾಲದಲ್ಲಿ ಮಹಿಳಾ ಉದ್ಯಮಿಗಳ ‘ಶಕ್ತಿಪಥ’ ಕಾರ್ಯಾಗಾರ

ಉಡುಪಿ : ಟಿ.ಎ. ಪೈ ಮ್ಯಾನೇಜ್ಮೆಂಟ್ ಇನ್ಸ್ಟಿಟ್ಯೂಟ್ (ಟ್ಯಾಪ್ಮಿ) ಹಳೆ ವಿದ್ಯಾರ್ಥಿ ಸಂಘ, ಟಿಎಪಿಎಂಐ ಮಣಿಪಾಲ ಹಾಗೂ ಸೆಸ್ಕೋ ಸೋಲಾರ್ ಲೈಟ್ ಪ್ರೈವೇಟ್ ಲಿಮಿಟೆಡ್, ಬೆಂಗಳೂರು ಇವರ ಸಹಯೋಗದಲ್ಲಿ ‘ಶಕ್ತಿಪಥ’ ಎಂಬ ಮಹಿಳಾ ಉದ್ಯಮಿಗಳ ಕಾರ್ಯಾಗಾರ ಟಿಎಪಿಎಂಐ ಕ್ಯಾಂಪಸ್‌ನಲ್ಲಿ ನಡೆಯಿತು. ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಉಡುಪಿ ನಿರ್ಮಿತಿ ಕೇಂದ್ರದ ನಿರ್ದೇಶಕ ಅರುಣ್ ಕುಮಾರ್, ಸ್ಥಳೀಯ ಜೀವನೋಪಾಯ ಹಾಗೂ ಸಮುದಾಯ ಆಧಾರಿತ ಉದ್ಯಮಗಳನ್ನು ಬಲಪಡಿಸುವಲ್ಲಿ ತಳಮಟ್ಟದ ಸಂಸ್ಥೆಗಳು ಮತ್ತು ಮೂಲಸೌಕರ್ಯ ಬೆಂಬಲದ ಅಗತ್ಯತೆಯನ್ನು ವಿವರಿಸಿದರು. ಶಾಶ್ವತ ಆರ್ಥಿಕ ಚಟುವಟಿಕೆಗಳನ್ನು ಸಾಧ್ಯವಾಗಿಸಲು ಸಮನ್ವಯಿತ ಮತ್ತು ವ್ಯವಸ್ಥಿತ ಬೆಂಬಲ ವ್ಯವಸ್ಥೆಗಳ ಮಹತ್ವವನ್ನು ಅವರು ಒತ್ತಿ ಹೇಳಿದರು.

ಡಿಸೈನರ್ ಹಾಗೂ ಉದ್ಯಮಿದುಹಾಲಸಾ ಕಿಣಿ ಮಹಿಳಾ ಉದ್ಯಮಶೀಲತೆ ಮತ್ತು ನಾಯಕತ್ವದ ಕುರಿತು ಮಾತನಾಡಿದರು. ಕಾರ್ಯಾಗಾರದ ಅಧ್ಯಕ್ಷತೆಯನ್ನು ಟ್ಯಾಪ್ಮಿ ನಿರ್ದೇಶಕ ಹಾಗೂ ಆಡಳಿತ ಡೀನ್ ಡಾ. ದುರ್ಗಾಪ್ರಸಾದ್ ವಹಿಸಿದ್ದರು. ಟ್ಯಾಪ್ಮಿ ಯ ರಾ. ಪದ್ಮಾವತಿ ಶೆಣೈ ಮಾತನಾಡಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಅಭಿವೃದ್ಧಿಯಲ್ಲಿ ಶಾಶ್ವತತೆ ಅವಿಭಾಜ್ಯ ಅಂಗವಾಗಿರಬೇಕು ಎಂದು ಹೇಳಿದರು. ಜವಾಬ್ದಾರಿಯುತ ಸಂಪನ್ಮೂಲ ಬಳಕೆ, ದೀರ್ಘಕಾಲೀನ ಚಿಂತನೆ ಹಾಗೂ ಶಾಶ್ವತ ಪದ್ಧತಿಗಳ ಮೂಲಕ ಸ್ಥಿರ ಉದ್ಯಮಗಳನ್ನು ನಿರ್ಮಿಸುವ ಅಗತ್ಯವನ್ನು ವಿವರಿಸಿದರು.

ಸಕ್ಕೋ ಸಂಸ್ಥೆಯ ಉಪ ಮಹಾಪ್ರಬಂಧಕ ಗುರುಪ್ರಕಾಶ್ ಶೆಟ್ಟಿ ಸ್ವಾಗತ ಹಾಗೂ ಪ್ರಾಸ್ತಾವಿಕ ಭಾಷಣ ಮಾಡಿದರು. ಸೂಕ್ತ ತಂತ್ರಜ್ಞಾನ, ಸಂಸ್ಥಾತ್ಮಕ ಬೆಂಬಲ ಮತ್ತು ಪರಿಸರ ಸ್ನೇಹಿ ವಿಧಾನಗಳ ಮೂಲಕ ಮಹಿಳಾ ನೇತೃತ್ವದ ಜೀವನೋಪಾಯಗಳನ್ನು ಉತ್ತೇಜಿಸುವ ಅಗತ್ಯವನ್ನು ಅವರು ವಿವರಿಸಿದರು. ಶುದ್ಧ ಇಂಧನ ಪರಿಹಾರಗಳು ಮಹಿಳಾ ಉದ್ಯಮಿಗಳ ಉತ್ಪಾದಕತೆ ಹಾಗೂ ಆತ್ಮವಿಶ್ವಾಸವನ್ನು ಹೆಚ್ಚಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎಂದು ಹೇಳಿದರು. ಕಾರ್ಯಾಗಾರದಲ್ಲಿ ಉಡುಪಿ, ಕುಂದಾಪುರ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳ ಸುಮಾರು 50 ಮಹಿಳಾ ಉದ್ಯಮಿಗಳು ಭಾಗವಹಿಸಿದ್ದರು. ಸೆಯ್ಯೋ ಸಂಸ್ಥೆಯ ಸಹನಾ ಕಾರ್ಯಕ್ರಮ ನಿರೂಪಿಸಿದರು.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles