Saturday, June 28, 2025

spot_img

ಭೂತಾರಾಧನೆಯ ಒಳಗಿನ ಕಲೆ ರಂಗಕ್ಕೆ ಬರಲಿ: ಅರವಿಂದ ಮಾಲಗತ್ತಿ

ಉಡುಪಿ: ಭೂತಾರಾಧನೆಯ ಒಳಗೆ ಕಲೆ ಇದೆ. ಅದನ್ನು ಹೆಕ್ಕಿ ತೆಗೆದು ರಂಗಕ್ಕೆ ತರುವ ಕೆಲಸ ಆಗಬೇಕು ಎಂದು ಸೃಜನಶೀಲ ಸಾಹಿತಿ ಅರವಿಂದ ಮಾಲಗತ್ತಿ ತಿಳಿಸಿದರು. ಅವರು ಅಜ್ಜರಕಾಡು ಭುಜಂಗ ಪಾರ್ಕ್ ಬಯಲು ಮಂದಿರದಲ್ಲಿ ಸುಮನಸಾ ಕೊಡವೂರು ಸಾಂಸ್ಕøತಿಕ ಸಂಘಟನೆಯ 13ನೇ ವರ್ಷದ ರಂಗಹಬ್ಬವನ್ನು ಉದ್ಘಾಟಿಸಿ ಮಾತನಾಡಿ, ಅಮೃತ ಸೋಮೇಶ್ವರ ಅವರು ಭೂತಾರಾಧನೆಯ ಪಾಡ್ದನಗಳನ್ನು ಇಟ್ಟುಕೊಂಡು ರಂಗಪ್ರಯೋಗ ನಡೆಸಿದ್ದರು. ಅಂಥ ಪ್ರಯೋಗಗಳನ್ನು ಆಧುನಿಕ ರಂಗಭೂಮಿಯಲ್ಲಿ ಹೆಚ್ಚಿಗೆ ಆಗಿಲ್ಲ ಎಂದು ಹೇಳಿದರು. ಇದು ಜೇನು ಗೂಡಿಗೆ ಕೈ ಹಾಕುವ ಕೆಲಸ ಎಂದು ಗೊತ್ತು. ಏನೋ ಮಾಡಲು ಹೋಗಿ ಏನೋ ಆಗುವ ಕಾರ್ಯ. ಸಂಪ್ರದಾಯಸ್ಥರು ಕೂಡ ಇದಕ್ಕೆ ಪ್ರೋತ್ಸಾಹವನ್ನು ನೀಡಬೇಕು. ಆಗ ಭೂತಾರಾಧನೆ ನಮ್ಮ ನಾಡಿನ, ನಮ್ಮ ದೇಶದ ಗಡಿ ದಾಟಿ ಬೆಳೆಯಲು ಸಾಧ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಎಲ್ಲಿ ಮನುಷ್ಯತ್ವ ಇದೆಯೋ ಅಲ್ಲಿ ಕಲಾವಿದರು ಇರುತ್ತಾರೆ. ಎಲ್ಲಿ ಸೇವೆ, ತ್ಯಾಗದ ಭಾವ ಇರುವಲ್ಲಿ ಕಲಾವಿದರು ಇರುತ್ತಾರೆ. ಅದಕ್ಕೆ ಸುಮನಸಾ ಸಂಸ್ಥೆಯೇ ಸಾಕ್ಷಿ. ಒಂದು ಮನೆಗೆ ಬೆಂಕಿ ಬಿದ್ದಾಗ ಅಲ್ಲಿ ಮನೆ ನಿರ್ಮಿಸಿ ಕೊಡಲು ಸೇರಿದವರು ಕಟ್ಟಿದ ಸಂಸ್ಥೆ ಇದು ಎಂದು ವಿವರಿಸಿದರು. ಭಾರತೀಯ ಆಧುನಿಕ ರಂಗಭೂಮಿ ಎಂದರೆ ಉತ್ತರ ಭಾರತದ ಕಡೆಗೆ ನೋಡಲಾಗುತ್ತಿತ್ತು. ಬಿ.ವಿ. ಕಾರಂತ, ಗಿರೀಶ್ ಕಾರ್ನಾಡ್ ಮುಂತಾದವರ ಪ್ರಯೋಗ, ಕುವೆಂಪು, ತೇಜಸ್ವಿ ಮುಂತಾದವರ ಬರಹಗಳು ರಂಗಭೂಮಿಗೆ ಬಂದಿರುವುದರಿಂದ ಅನೇಕ ಪ್ರಯೋಗಗಳಾಗುತ್ತಿರುವುದರಿಂದ ಈಗ ಕರ್ನಾಟಕದ ಕಡೆಗೆ ತಿರುಗಿ ನೋಡುವಂತಾಗಿದೆ. ಮೈಸೂರು ಮತ್ತು ಅವಿಭಜಿತ ದಕ್ಷಿಣ ಕನ್ನಡವು ಆಧುನಿಕ ರಂಗಭೂಮಿಯ ರಾಜಧಾನಿಯಾಗಿದೆ ಎಂದರು. ಸರ್ಕಾರದ ಅನುದಾನದಲ್ಲಿ ನಡೆಯುವ ರಂಗಭೂಮಿಗೆ ಹವ್ಯಾಸಿ ರಂಗ ಸಂಸ್ಥೆಗಳು ಆರೋಗ್ಯಕರ ಸ್ಪರ್ಧೆಯನ್ನು ನಿರಂತರ ಒಡ್ಡುತ್ತಾ ಇರಬೇಕು. ಆಗ ಹವ್ಯಾಸಿ ರಂಗಭೂಮಿ ಅಷ್ಟೇ ಅಲ್ಲ, ಸರ್ಕಾರಿ ರಂಗಸಂಸ್ಥೆಗಳೂ ಬೆಳೆಯಲು ಸಾಧ್ಯ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಯಶ್ಪಾಲ್ ಸುವರ್ಣ ಮಾತನಾಡಿ, ‘ಪ್ರತಿವಾರ ಕಾರ್ಯಕ್ರಮಗಳಾಗಬೇಕು ಎಂಬ ಕನಸು ಹೊತ್ತು ವಿ.ಎಸ್. ಆಚಾರ್ಯ ಅವರು ಅಜ್ಜರಕಾಡು ಭುಜಂಗಪಾರ್ಕ್ ಬಯಲು ರಂಗಮಂದಿರ ಕಟ್ಟಿದ್ದರು. ಆದರೆ, ಸುಮನಸಾ ಮಾತ್ರ ವರ್ಷಕ್ಕೊಮ್ಮೆ ಬಳಸಿಕೊಳ್ಳುತ್ತಿದ್ದಾರೆ. ಉಳಿದವರು ಬಳಸಿಕೊಳ್ಳುತ್ತಿಲ್ಲ” ಎಂದು ಬೇಸರ ವ್ಯಕ್ತಪಡಿಸಿದರು.

ಗೀತಂ ಗಿರೀಶ್ ಅವರಿಗೆ ರಂಗಸನ್ಮಾನ ನೀಡಿ ಗೌರವಿಸಲಾಯಿತು. ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಉಪನಿರ್ದೇಶಕಿ ಪೂರ್ಣಿಮಾ, ಸ್ಮರಣಿಕಾ ಉಡುಪಿ ಪ್ರವರ್ತಕ ದಿವಾಕರ ಸಾಲ್ಯಾನ್, ಸಾಯಿಬಾಬಾ ಮಂದಿರದ ಧರ್ಮದರ್ಶಿ ತೋಟದಮನೆ ದಿವಾಕರ ಶೆಟ್ಟಿ, ಸುಮನಸಾ ಕೊಡವೂರು, ಸಂಚಾಲಕ ಭಾಸ್ಕರ ಪಾಲನ್ ಉಪಸ್ಥಿತರಿದ್ದರು.

ಬಾವುಟ ಸಿಕ್ಕಿಸಿ ದೋಣಿ ಸಾಗಿಸುವ ಮೂಲಕ ಕಾರ್ಯಕ್ರಮವನ್ನು ವಿಶಿಷ್ಠವಾಗಿ ಉದ್ಘಾಟಿಸಲಾಯಿತು. ಸಂಸ್ಥೆಯ ಅಧ್ಯಕ್ಷ ಪ್ರಕಾಶ್ ಜಿ. ಕೊಡವೂರು ಸ್ವಾಗತಿಸಿದರುವಂದಿಸಿದರು. ನಾಗೇಶ್ ಪ್ರಸಾದ್ ವಂದಿಸಿದರು. ಅಕ್ಷತ್ ಅಮೀನ್ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಪಯಣ ಬೆಂಗಳೂರು ಇವರು ‘ತಲ್ಕಿ” ನಾಟಕ ಪ್ರದರ್ಶಿಸಿದರು.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles