Friday, June 27, 2025

spot_img

ಭಕ್ತರಿಗೆ ತಯಾರಿಸುತ್ತಿದ್ದ ಅಡುಗೆಗೆ ಬೂದಿ ಎರಚಿದ ಪೊಲೀಸ್‌

ಪ್ರಯಾಗ್‌ರಾಜ್‌: ಜನವರಿ 13 ರಿಂದ ಮಹಾಕುಂಭ ಮೇಳ ಆರಂಭಗೊಂಡಿದ್ದು, ಕೋಟ್ಯಾಂತರ ಭಕ್ತರು ಪುಣ್ಯಸ್ಥಳಕ್ಕೆ ಬಂದು ಪವಿತ್ರಸ್ನಾನ ಮಾಡುತ್ತಿದ್ದಾರೆ. ಹೀಗೆ ಬರುವ ಭಕ್ತರಿಗೆ ಆಹಾರ, ಕುಡಿಯಲು ನೀರಿನ ವ್ಯವಸ್ಥೆಯನ್ನು ಕೂಡಾ ಮಾಡಲಾಗಿದೆ. ಆದರೆ ಇಲ್ಲೊಬ್ಬ ಪೊಲೀಸ್‌ ಅಧಿಕಾರಿ ಭಕ್ತರಿಗೆಂದು ತಯಾರು ಮಾಡಲಾಗುತ್ತಿದ್ದ ಅಡುಗೆಗೆ ಬೂದಿ ಎರಚಿರುವ ಅಮಾನವೀಯ ಘಟನೆಯೊಂದು ನಡೆದಿದೆ. ಇದರ ವೀಡಿಯೋ ವೈರಲ್‌ ಆಗಿದ್ದು, ಪೊಲೀಸ್‌ ಅಧಿಕಾರಿಯ ಕೃತ್ಯಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಘಟನೆ ನಡೆದ ಬೆನ್ನಲ್ಲೇ ಪೊಲೀಸ್‌ ಅಧಿಕಾರಿಯನ್ನು ಅಮಾನತು ಮಾಡಲಾಗಿದೆ ಎಂದು ಹಿರಿಯ ಪೊಲೀಸ್‌ ಅಧಿಕಾರಿ ಮಾಹಿತಿ ನೀಡಿದ್ದು, ಘಟನೆ ಕುರಿತು ತನಿಖೆ ನಡೆಸಲು ಆದೇಶ ನೀಡಿರುವುದಾಗಿ ಹೇಳಲಾಗಿದೆ.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles