ಉಡುಪಿ: ಉಡುಪಿ ಜಿಲ್ಲೆಯಲ್ಲಿಯೇ ಅತ್ಯಂತ ಹಿಂದುಳಿದ ತಾಲೂಕು ಎನ್ನುವ ಹಣೆಪಟ್ಟಿ ಬೈಂದೂರು ತಾಲೂಕಿಗೆ ಇದೆ. ಕಾರಣ ಇಲ್ಲಿ ಭೌಗೋಳಿಕವಾಗಿ ಸಂಪನ್ನವಾಗಿದ್ದರು ಕೂಡ ಅದನ್ನು ಸರಿಯಾದ ರೀತಿಯಲ್ಲಿ ಇದುವರೆಗೆ ಬಳಕೆ ಮಾಡದಿರುವುದು ಎನ್ನುವುದು ತಿಳಿದವರು ಹೇಳುವ ಮಾತು. ಈ ತಾಲೂಕಿನಲ್ಲಿ ಇರುವ ಪ್ರಾಕೃತಿಕ ಸೌಂದರ್ಯ ಜಿಲ್ಲೆಯ ಉಳಿದ ಭಾಗದಲ್ಲಿ ಇಲ್ಲ, ಈ ಹಿಂದೆಯೇ ಇಲ್ಲಿ ಪ್ರವಾಸೋದ್ಯಮಕ್ಕೆ ಹೆಚ್ಚಿನ ಒತ್ತು ನೀಡಿದ್ದರೆ ಬೈಂದೂರು ತಾಲೂಕು ಜಿಲ್ಲೆ ಮುಂದುವರಿದ ತಾಲೂಕಾಗಿ ಬದಲಾಗುತ್ತಿತ್ತು. ಸದ್ಯ ಇನ್ನೇನು ಒಂದು ತಿಂಗಳುಗಳ ಅವಧಿಯಲ್ಲಿ ಬೈಂದೂರು ತಾಲೂಕನ್ನು ಭಯಾನಕವಾಗಿ ಕಾಡುವ ವಿಚಾರವೊಂದು ಇದೆ. ಮಳೆಗಾಲ ಬಂತೆಂದರೆ ಸಾಕು ಅದೊಂದು ವಿಚಾರಕ್ಕೆ ಬೈಂದೂರಿಗರು ಹೆದರುತ್ತಾರೆ ಎಂದರೆ ಆಶ್ವರ್ಯ ಪಡಬೇಕಾಗಿಲ್ಲ, ಯಾಕೆಂದರೆ ಅಷ್ಟೋಂದು ಭಯಾನಕ ಸಾವು ನೋವುಗಳಿಗೆ ಕಾರಣವಾದ ವಿಷಯ ಎಂದರೆ “ಕಾಲು ಸಂಕ”

ನಾನು ಹೇಳುವಾಗಿ ಏನಷ್ಪ ಈ ಕಾಲು ಸಂಕಗಳು ಎಂದರೆ ಕ್ರೂರ ಮೃಗಗಳ ಎನ್ನುವ ಪ್ರಶ್ನೆ ನಿಮ್ಮಲ್ಲಿ ಮೂಡಬಹುದು. ಆದರೆ ಸರಿಯಾದ ಮೂಲಭೂತ ವ್ಯವಸ್ಥೆ ಇಲ್ಲದೆ, ನಡೆದಾಡುಲು ಸೂಕ್ತ ರಸ್ತೆ ಸೇತುವೆ ಇಲ್ಲದ ಬೈಂದೂರು ತಾಲೂಕಿನ ಬಹುತೇಕ ಹಳ್ಳಿಗಳಲ್ಲಿ ಕಾಲು ಸಂಕ ಮಳೆಗಾಲದಲ್ಲಿ ಯಮರಾಯನ ಯಮಪುರಿ ಮಹಾದ್ವಾರವಾಗಿ ಬಿಡುತ್ತದೆ. ಇಲ್ಲಿ ಕಾಲು ಸಂಕಗಳು ಅಷ್ಟೇ ಅನಿವಾರ್ಯವು ಹೌದು, ಯಾಕೆಂದರೆ ಬೈಂದೂರಿ ಗ್ರಾಮೀಣ ಭಾಗದಲ್ಲಿ ಪ್ರತಿ ಮನೆಯ ಹಿಂದೆ ಒಂದು ಹರಿಯುವ ತೋಡು ಇದೆ ಎಂದರೆ ತಪ್ಪಾಗಲಾರದು. ದಿನನಿತ್ಯ ಕೆಲ ಕಾರ್ಯಗಳಿಗೆ, ಶಾಲೆಗೆ ತೆರಳಲು, ಕೃಷಿ ಕಾರ್ಯಕ್ಕಾಗಿ ಮಳೆಗಾಲದಲ್ಲಿ ಈ ಹರಿಯುವ ತೋಡು ದಾಟಲು ಈ ಕಾಲು ಸಂಕಗಳು ಅನಿವಾರ್ಯ. ಹರಿಯುವ ನೀರಿನ ತೋಡಿನ ಒಂದು ದಂಡೆಯಿಂದ ಎದುರಿನ ಇನ್ನೊಂದು ದಂಡೆಗೆ ಸ್ಥಳೀಯವಾಗಿ ಸಿಗುವ ಮರಮಟ್ಟು, ಅಡಿಕೆ ಮರ, ಬಿದಿರು ಬಳಸಿ ನಡೆದಾಡುವ ಯೋಗ್ಯವಾಗುವಂತೆ ಈ ಕಾಲು ಸಂಕಗಳನ್ನು ನಿರ್ಮಿಸಲಾಗುತ್ತದೆ. ಮಳೆಗಾಲದ ಪ್ರಾರಂಭವಾಗುವ ವಾರಗಳ ಮೊದಲು ಅಂದರೆ ಮೇ ತಿಂಗಳೀನ ಅಂತ್ಯದ ವೇಳೆ ಈ ಕಾಲು ಸಂಕಗಳನ್ನು ಸ್ಥಳೀಯರೇ ನಿರ್ಮಿಸಿಕೊಳ್ಳುವುದು ವಾಡಿಕೆ. ಮಳೆಗಾಲದ ಮೂರು ತಿಂಗಳುಗಳ ಕಾಲ ಪ್ರತಿನಿತ್ಯವು ಇದರ ಮೇಲೆ ಇಲ್ಲಿನ ಜನರ ಓಡಾಟ, ಶಾಲೆಗೆ ಹೋಗುವ ಚಿಕ್ಕ ಮಕ್ಕಳನ್ನು, ಅನಾರೋಗ್ಯ ಪಿಡಿತ ವಯೋವೃದ್ಧರನ್ನು ಕೂಡ ಸರ್ಕಸ್ ಮಾಡುತ್ತಾ ದಾಟಿಸುವುದೆ ಕಷ್ಟದ ಕೆಲಸ. ಸರಿಯಾದ ರಸ್ತೆ ವ್ಯವಸ್ಥೇ ಇಲ್ಲ ಬಹುತೇಕ ಕಡೆಗಳಲ್ಲಿ ಇಂದಿಗೂ ಕಾಲು ಸಂಕಗಳೆ ಸಂಚಾರಕ್ಕೆ ಸಹಕಾರಿ.

ಮಳೆಗಾಲದಲ್ಲಿ ಭಾರಿ ಮಳೆಯಾದಾಗ ಈ ಹರಿಯುವ ನೀರಿನ ತೋಡುಗಳು ಉಕ್ಕಿ ಹರಿಯುತ್ತದೆ ಈ ಸಂದರ್ಭದಲ್ಲಿ ಕಾಲು ಸಂಕದಲ್ಲಿ ತೊರೆ ದಾಟಲು ಹೋದಾಗ ಅದೇಷ್ಟೆ ಜನ ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ಸಾವನ್ನಪ್ಪಿದ ಘಟನೆ ಬೈಂದೂರಿನ ಗ್ರಾಮ ಗ್ರಾಮಗಳಲ್ಲಿ ನಡೆದಿದೆ. ಪ್ರತಿ ವರ್ಷವು ಕೂಡ ಮಳೆಗಾಲ ಆರಂಭಕ್ಕೂ ಮೊದಲು ಸರಕಾರ ಬೈಂದೂರಿನ ಜನತೆಗೆ ಕಾಲು ಸಂಕದ ಗಿಫ್ಟ್ ನೀಡುತ್ತದೆಯೋ ಎಂದು ಸ್ಥಳೀಯರು ಕಾಯುತ್ತಾರೆ. ಪ್ರತಿ ವರ್ಷವು ಕೂಡ ಅದೇ ಕಾಲು ಸಂಕವನ್ನು ದುರಸ್ಥಿ ಮಾಡಿಕೊಂಡು ಮತ್ತೆ ಭಯದಲ್ಲೆ ಬದುಕಬೇಕಾದ ಪರಿಸ್ಥಿತಿ ಇದೆ. ಈ ಬಾರಿ ಬೈಂದೂರು ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ ಅವರು ಇಂತಹ ಕಾಲು ಸಂಕಗಳನ್ನು ಗುರುತಿಸಿ ಬೆಂಗಳೂರಿನ ಅರುಣಾಚಲ ಟ್ರಸ್ಟ್ ಸಹಯೋಗದಲ್ಲಿ ಲಾರಿಗಳ ಹಳೆಯ ಛಾಸ್ಸಿ ಬಳಸಿ ಬಹುತೇಕ ಕಡೆಗಳಲ್ಲಿ ಸೇತುವೆ ನಿರ್ಮಾಣ ಕಾರ್ಯ ಮಾಡಿದ್ದಾರೆ. ಆದರೆ ಕೇವಲ ಬೈಂದೂರು ತಾಲೂಖಿನಲ್ಲಿ 400ಕ್ಕೂ ಅಧಿಕ ಕಾಲು ಸಂಕದ ಬೇಡಿಕೆ ಇದೇ ಹೀಗಾಗ ಈ ಭೇಡಿಕೆಯನ್ನು ಪೋರೈಸುವುದು ಕಷ್ಟದ ಕೆಲಸ. ಹೀಗಾಗಿ ನರೇಗಾ ಯೋಜನೆಯಡಿ ಕಾಲು ಸಂಕ ನಿರ್ಮಾಣಕ್ಕೆ ಅವಕಾಶ ಕಲ್ಪಿಸಬೇಕು ಎಂದು ಗ್ರಾಮಸ್ಥರು ಹಲವು ವರ್ಷಗಳೀಂದ ಬೇಡಿಕೆವ ಇಡುತ್ತಾ ಬಂದಿದ್ದಾರೆ. ಸದ್ಯ ನರೇಗಾ ಯೋಜನೆಯಡಿ 5 ಲಕ್ಷದ ಒಳಗೆ ಕಾಲು ನಿರ್ಮಿಸಲು ಸರಕಾರ ಮಳೆಗಾಲ ಪ್ರಾರಂಭದ ವೇಳೆ ನೀಡಿದೆ. ಕೇವಲ 15-20 ದಿನಗಳಲ್ಲಿ ಈ ಅವಕಾಶ ಬಳಸಿಕೊಂಡು ಕಾಲು ಸಂಕ ನಿರ್ಮಿಸಲು ಸಾಧ್ಯವೇ ಎನ್ನುವುದು ಸದ್ಯದ ಪ್ರಶ್ನೆ

ಒಟ್ಟಾರೆಯಾಗಿ ಸರಕಾರ ಕೊನೆಗೂ ಕಾಲು ಸಂಕ ನಿರ್ಮಾಣಕ್ಕೆ ನರೇಗಾ ಯೋಜನೆಯಲ್ಲಿ ಇದ್ದ ತೊಡಕು ನಿವಾರಣೆ ಮಾಡಿದೆ. ಇತ್ತೀಚೆಗೆ ಉಡುಪಿಗೆ ಭೇಟಿ ನೀಡಿದ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಅಧಿಕೃತವಾಗಿ ಈ ಬಗ್ಗೆ ಹೇಳಿಕೆ ನೀಡಿ, ಅಧಿಕಾರಿಗಳಿಗೆ ತಕ್ಷಣಕ್ಕೆ ಕಾರ್ಯರೂಪಕ್ಕೆ ಬರುವಂತೆ ಕೆಲಸ ಪ್ರಾರಂಭಿಸಲು ತಿಳಿಸಿದ್ದಾರೆ. ಇನ್ನು ಅಧಿಕಾರಿ ಈ ನಿಟ್ಟಿನಲ್ಲಿ ಯಾವ ಮ್ಯಾಜಿಕ್ ಮಾಡಿ ಬೈಂದೂರು ಭಾಗದ ಕಾಲು ಸಂಕದ ಸಮಸ್ಯೆಗೆ ಮುಕ್ತಿ ನೀಡುತ್ತಾರೆ ಎನ್ನುದನ್ನು ಕಾದು ನೋಡಬೇಕಿದೆ.
ಮಳೆಗಾಲದಲ್ಲಿ ಉಡುಪಿ ಜಿಲ್ಲೆಯ ಕೆಲವು ಕಡೆ ಕಾಲು ಸಂಕಗಳು ಇಲ್ಲದೇ ಇರುವು ದರಿಂದ ದೊಡ್ಡ ಸಮಸ್ಯೆಗಳು ಆಗುತ್ತಿವೆ. ಕಾಲು ಸಂಕ ನಿರ್ಮಾಣಕ್ಕೆ ಈಗಾಗಲೇ 8ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ಉಳಿದ 400 ಕಾಲು ಸಂಕಗಳಿಗೆ ಅನುದಾನ ಕೂಡ ಮಂಜೂರಾಗಿದೆ. ಮುಂದಿನ ವರ್ಷದೊಳಗೆ ಉಡುಪಿ ಜಿಲ್ಲೆಯ ಎಲ್ಲ ಕಾಲು ಸಂಕಗಳ ನಿರ್ಮಾಣ ಕಾರ್ಯ ಪೂರ್ಣಗೊಳಿಸ ಲಾಗುವುದು. ಜಿಲ್ಲೆಯಲ್ಲಿ ಲೋಕೋಪಯೋಗಿ ಇಲಾಖೆಯಡಿ 438 ಹಾಗೂ ನರೇಗಾ ಯೋಜನಯಡಿ 420 ಕಾಲು ಸಂಕ ನಿರ್ಮಾಣ ಮಾಡಲಾಗುತ್ತಿದ್ದು, ಇದಕ್ಕಾಗಿ 8 ಕೋಟಿ ರೂ. ಮಂಜೂರು ಮಾಡಲಾಗಿದೆ.
ಲಕ್ಷ್ಮೀ ಹೆಬ್ಬಾಳ್ಕರ್ (ಜಿಲ್ಲಾ ಉಸ್ತುವಾರಿ ಸಚಿವೆ)