ಉಡುಪಿ : ಪ್ರೇಮಿಗಳ ದಿನದಂದು ತಡರಾತ್ರಿ ವಿದ್ಯಾರ್ಥಿಗಳ ಜಿಲ್ಲಾಧಿಕಾರಿಗಳ ಕಛೇರಿಗೆ ತೆರಳುವ ಸಾರ್ವಜನಿಕ ರಸ್ತೆಯಲ್ಲಿಯೇ ಭೀಕರ ಮಾರಾಮಾರಿ ನಡೆಸಿದ ಘಟನೆ ಮಣಿಪಾಲದಲ್ಲಿ ನಡೆದಿದೆ.

ಮಣಿಪಾಲದ ಕಾಯಿನ್ ಸರ್ಕಲ್ ನ ಬಳಿ ಇರುವ ಬಾರ್ ಮುಂಭಾಗ ಘಟನೆ ನಡೆದಿದ್ದು, ಮೊದಲು ಬಾರ್ ಒಳಗಡೆ ನಡೆದ ಗಲಾಟೆ ಜೋರಾಗಿ ಬಾರ್ ಮುಂಭಾಗ ಹೊಡೆದಾಟಕ್ಕೆ ತಿರುಗಿದೆ. ಮದ್ಯದ ಅಮಲಿನಲ್ಲಿದ್ದ ವಿದ್ಯಾರ್ಥಿಗಳು ಎರಡು ತಂಡವಾಗಿ ಹೊಡೆದಾಡಿಕೊಂಡಿದ್ದು, ಹೊಡೆದಾಟದ ಪರಿಣಾಮ ಓರ್ವ ವಿದ್ಯಾರ್ಥಿ ಬಟ್ಟೆ ಹರಿದು ಹೋಗಿದ್ದರು ಗಲಾಟೆ ಮುಂದುವರಿದೆ.

ಹುಡುಗಿಯ ವಿಚಾರಕ್ಕೆ ವಾಗ್ವಾದ ನಡೆದು ಗಲಾಟೆ ನಡೆದಿದೆ ಎನ್ನಲಾಗಿದ್ದು, ಘಟನಾಸ್ಥಳಕ್ಕೆ ಪೊಲೀಸ್ ರು ಬಂದರು ಕೂಡ ಕೇರ್ ಮಾಡದ ವಿದ್ಯಾರ್ಥಿಗಳು ಹೊಡೆದಾಡಿಕೊಂಡಿದ್ದಾರೆ.