Friday, June 27, 2025

spot_img

ನೇಜಾರು ಕೊಲೆ ಪ್ರಕರಣಕ್ಕೆ ಬಳಸಿದ ಕಾರು ಲೋನ್‌ ಡ್ಯು…

ಉಡುಪಿ: ಇಲ್ಲಿನ ಮಲ್ಪೆ ಠಾಣಾ ವ್ಯಾಪ್ತಿಯ ನೇಜಾರಿನ ತಾಯಿ ಮತ್ತು ಮೂವರು ಮಕ್ಕಳ ಹತ್ಯೆ ಪ್ರಕರಣದ ಆರೋಪಿ ಪ್ರವೀಣ್ ಚೌಗುಲೆ ಕೃತ್ಯಕ್ಕೆ ಬಳಸಿದ ಕಾರನ್ನು ಸಾಲದ ಕಂತು ಪಾವತಿಸದ ಹಿನ್ನೆಲೆಯಲ್ಲಿ ತಮ್ಮ ವಶಕ್ಕೆ ನೀಡುವಂತೆ ಸಂಬಂಧಪಟ್ಟ ಬ್ಯಾಂಕಿನವರು ಉಡುಪಿಯ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಸಲ್ಲಿಸಿರುವ ಅರ್ಜಿಗೆ ವಿಶೇಷ ಸರಕಾರಿ ಅಭಿಯೋಜಕರು ಆಕ್ಷೇಪಣೆ ಸಲ್ಲಿಸಿದರು.

ಶುಕ್ರವಾರ ವಿಶೇಷ ಸರಕಾರಿ ಅಭಿಯೋಜಕ ಶಿವಪ್ರಸಾದ್ ಆಳ್ವ ಕೆ. ಎಚ್‌ಡಿಎಫ್‌ಸಿ ಬ್ಯಾಂಕಿನ ಅರ್ಜಿಗೆ ಆಕ್ಷೇಪಣೆ ಸಲ್ಲಿಸಿ ತನ್ನ ವಾದ ಮಂಡಿಸಿದರು. ಆರೋಪಿ ಕೃತ್ಯ ಎಸಗಿದ ಹಿಂದಿನ ದಿನ ಅದೇ ಕಾರಿನಲ್ಲಿ ಹೆಜಮಾಡಿ ಟೋಲ್ ಮೂಲಕ ಸಂತೆಕಟ್ಟೆ ಕಡೆಗೆ ಹೋಗಿರುವುದರಿಂದ ಸಾಕ್ಷ್ಯ ವಿಚಾರಣೆ ಸಂದರ್ಭ ಟೋಲ್ ಸಿಬ್ಬಂದಿ ಕಾರನ್ನು ಗುರುತಿಸಬೇಕಾಗಿದೆ. ಅದೇ ರೀತಿ ಸಾಕ್ಷಿ ವಿಚಾರಣೆ ಸಂದರ್ಭ ಬೇರೆ ಬೇರೆ ಸಾಕ್ಷಿಗಳಿಗೆ ಕಾರು ಅಗತ್ಯವಾಗಿರುವುದರಿಂದ ಬ್ಯಾಂಕಿನ ವಶಕ್ಕೆ ನೀಡದಂತೆ ಆಕ್ಷೇಪಣೆ ಸಲ್ಲಿಸಿದರು.

ಬ್ಯಾಂಕಿನ ಪರ ವಕೀಲರು ವಾದ ಮಂಡಿಸಲು ಸಮಯಾವಕಾಶವನ್ನು ಕೇಳಿದರು. ಅದರಂತೆ ನ್ಯಾಯಾಧೀಶ ಸಮಿವುಲ್ಲಾ ವಿಚಾರಣೆಯನ್ನು ಫೆ.20ಕ್ಕೆ ಮುಂದೂಡಿ ಆದೇಶ ನೀಡಿದರು. ಬೆಂಗಳೂರು ಜೈಲಿನಲ್ಲಿರುವ ಆರೋಪಿ ಪ್ರವೀಣ್ ಚೌಗುಲೆಯನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles