Saturday, June 28, 2025

spot_img

ನದಿಗೆ ಹಾರಿದ ಅಕ್ರಮ ಜಾನುವಾರು ಸಾಗಾಟ ಆರೋಪಿಗಳು..!

ಬೈಂದೂರು: ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ಆರೋಪಿಗಳು ನದಿಗೆ ಹಾರಿ ತಪ್ಪಿಸಿಕೊಳ್ಳಲು ಯತ್ನಿಸಿದ ಘಟನೆ ಗಂಗೊಳ್ಳಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಆರೋಪಿಗಳ ಪೈಕಿ ಮೂವರ ಬಂಧನ ಓರ್ವ ತಪ್ಪಿಸಿಕೊಂಡಿದ್ದಾನೆ, ಮಹಮ್ಮದ್ ಸಿನಾನ್, ಮಹಮ್ಮದ್ ಅಬೀಬ್, ಮಹಮ್ಮದ್ ಅಬಾನ್ ಬಂದಿತ ಆರೋಪಿಗಳು.

ಗಂಗೊಳ್ಳಿ ಠಾಣಾ ವ್ಯಾಪ್ತಿಯ ಬಂಟ್ವಾಡಿ ಶಾಲೆಯ ಬಳಿ, ಬಂಟ್ವಾಡಿಯಿಂದ ಆಲೂರು ಕಡೆಗೆ ಚಲಿಸುತ್ತಿದ್ದ ಪಿಕಪ್ ವಾಹನಕ್ಕೆ ಆಲೂರಿನಿಂದ ಬಂಟ್ವಾಡಿ ಕಡೆಗೆ ಬರುತ್ತಿದ್ದ ಕಾರುಡಿಕ್ಕಿಯಾಗಿದೆ. ಅಪಘಾತ ಸ್ಥಳದಲ್ಲಿ ಪರಿಶೀಲಿಸಿದಾಗ ಕಾರಿನೊಳಗೆ ಜಾನುವಾರು ಪತ್ತೆಯಾಗಿದೆ, ಇದರಿಂದ ಭಯಗೊಂಡ ಆರೋಪಿಗಳು ಕಾರಿನಿಂದ ಇಳಿದು ನದಿಗೆ ಹಾರಿ ತೀರ ಪ್ರದೇಶದಲ್ಲಿ ಅವಿತು ಕುಳಿತಿದ್ದಾರೆ.

ಇದನ್ನು ಗಮನಿಸಿದ ಸ್ಥಳೀಯರು ಪೊಲೀಸ್‌ ರ ನೆರವಿನಿಂದ ಆರೋಪಿಗಳನ್ನು ಬಂಧಿಸಿದ್ದಾರೆ. ಅದರೆ ತೌಹಿದ್‌ ಎನ್ನುವ ಆರೋಪಿ ಪರಾರಿಯಾಗಿದ್ದಾನೆ. ಗಂಗೊಳ್ಳಿ ಪೊಲೀಸ್‌ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles