ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಸುದ್ದಿಯಲ್ಲಿರುವ ಡಿಜಿಟಲ್ ಅರೆಸ್ಟ್ ವಂಚನೆ ಪ್ರಕರಣಕ್ಕೆ ಸಂಬಂಧಪಟ್ಟ ಹಾಗೆ ಒರ್ವ ಆರೋಪಿಯನ್ನ ಉಡುಪಿ ಸೆನ್ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಬಂದಿತ ಆರೋಪಿಯಿಂದ ಒಟ್ಟು ಏಳು ಲಕ್ಷ ರೂಪಾಯಿ ನಗದು ಸ್ವಾಧಿನ ಪಡಿಸಿಕೊಳ್ಳಲಾಗಿದೆ. ಯಾದಗಿರಿ ಜಿಲ್ಲೆಯ ಶಹಪುರ ನಿವಾಸಿ ಕಿರಣ್(24) ಡಿಜಿಟಲ್ ಅರೆಸ್ಟ್ ಪ್ರಕರಣದ ಪ್ರಮುಖ ಆರೋಪಿ.

ಉಡುಪಿಯ ಕನ್ನಾರು ಸಂತೋಷ್ ಕುಮಾರ್ ಎನ್ನುವವರಿಗೆ ಆರೋಪಿಗಳು ಕರೆ ಮಾಡಿ ಟೆಲಿಕಾಂ ರೆಗ್ಯುಲೇಟರಿ ಆಥೋರಿಟಿ ಆಫ್ ಇಂಡಿಯಾ ಎಂದು ಹೇಳಿ ನಿಮ್ಮ ಮೇಲೆ ಒಟ್ಟು 17 fir ಆಗಿದ್ದು ಇನ್ನು ಎರಡು ಗಂಟೆಯ ಒಳಗೆ ನಿಮ್ಮ ಹೆಸರಿನಲ್ಲಿರುವ ಎಲ್ಲಾ ಕಾಂಟಾಕ್ಟ್ ನಂಬರ್ ಡಿಸ್ ಕನೆಕ್ಟ್ ಮಾಡುತ್ತೇವೆ. ನಿಮ್ಮ ಮೇಲೆ ಅರೆಸ್ಟ್ ವಾರೆಂಟ್ ಜಾರಿಯಲ್ಲಿದೆ ಎಂದು ವಾಟ್ಸಾಪ್ ವಿಡಿಯೋ ಕರೆ ಮಾಡಿ ಬೆದರಿಕೆ ಹಾಕಿರುತ್ತಾರೆ. ಕರೆ ಮಾಡಿದ ವ್ಯಕ್ತಿಯು ಪೊಲೀಸ್ ಅಧಿಕಾರಿಯ ಸಮವಸ್ತ್ರದಲ್ಲಿದ್ದು ಸೈಬರ್ ಅಂದೇರಿ ಈಸ್ಟ್ ಮುಂಬೈ ಎಂದು ಹೇಳಿ ಬೇರೆ ಆರೋಪಗಳನ್ನ ಮಾಡಿ ಸಂತೋಷ್ ಕುಮಾರ್ ಅವರಿಂದ 89,00,000 ಗಳನ್ನು ಪಡೆದಿದ್ದರು. ಈ ಬಗ್ಗೆ ಕನ್ನಾರ್ ಸಂತೋಷ್ ಕುಮಾರ್ ನೀಡಿದ ದೂರಿನಂತೆ ಉಡುಪಿ ಎನ್ನುತ್ತಾನೆಯಲ್ಲಿ ಪ್ರಕರಣ ದಾಖಲಾಗಿತ್ತು.
ಉಡುಪಿ ಸೆನ್ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಕೇರಳ ಮತ್ತು ಮಹಾರಾಷ್ಟ್ರ ದಲ್ಲಿ ಕಾರ್ಯಾಚರಣೆ ನಡೆಸಿ ಧಾರವಾಡದಲ್ಲಿ ಆರೋಪಿಯನ್ನ ವಶಕ್ಕೆ ಪಡೆದು ಆತನಿಂದ ಒಂದು ಮೊಬೈಲ್ ಫೋನ್ ಹಾಗೂ 5 ಲಕ್ಷ ರೂಪಾಯಿ ನಗದನ್ನ ವಶಕ್ಕೆ ಪಡೆದಿದ್ದಾರೆ. ಇನ್ನು ಈ ಹಿಂದೆ ಕೇರಳ ರಾಜ್ಯದ ಮಹಮದ್ ನಿಶಾನ್ ಸಿಕೆ ಎಂಬುವವರ ಖಾತೆಗೆ ಈ ಪ್ರಕರಣಕ್ಕೆ ಸಂಬಂಧಿಸಿದ 2 ಲಕ್ಷ ಹಣ ಜಮಾ ಆಗಿದ್ದು, ಆ ಹಣವನ್ನ ಕೂಡ ಪೊಲೀಸರು ಸ್ವಾಧೀನಕ್ಕೆ ಪಡೆದಿದ್ದು ಒಟ್ಟು ಪ್ರಕರಣದಲ್ಲಿ ಏಳು ಲಕ್ಷಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
