ಉಡುಪಿ : ಉಗ್ರಂ ಚಿತ್ರ ಖ್ಯಾತಿಯ ಕನ್ನಡ ಚಿತ್ರರಂಗದ ಖ್ಯಾತ ನಟ ಶ್ರೀ ಮುರಳಿ ಮತ್ತು ಯುದ್ಧಕಾಂಡ ಚಿತ್ರ ಖ್ಯಾತಿಯ ಅಜಯರಾವ್ ಇಂದು ಶ್ರೀಕೃಷ್ಣಮಠಕ್ಕೆ ಭೇಟಿ ನೀಡಿ ಪೂಜ್ಯ ಪರ್ಯಾಯ ಯತಿದ್ವಯರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು.

ಈ ಸಂದರ್ಭದಲ್ಲಿ ಎರಡು ಚಿತ್ರನಟರೂ ಶ್ರೀಗಳಿಂದ ಕೋಟಿಗೀತಾಲೇಖನ ಯಜ್ಞದ ದೀಕ್ಷೆಯನ್ನು ಪಡೆದುಕೊಂಡರು.
