ಬೈಂದೂರು : ತಮಿಳುನಾಡು ಸಿಎಂ ಎಂ ಕೆ ಸ್ಟಾಲಿನ್ ಅವರ ಧರ್ಮಪತ್ನಿ ದುರ್ಗಾ ಸ್ಟಾಲಿನ್ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳಕ್ಕೆ ಭೇಟಿ ನೀಡಿದರು. ಶುಕ್ರವಾರದಂದು ಸ್ನೇಹಿತೆಯರ ಜೊತೆ ಬಂದು ದುರ್ಗಾ ಸ್ಟಾಲಿನ್ ಅವರು ಮೂಕಾಂಬಿಕಾ ದೇವಿಯ ದರ್ಶನ ಗೈದು ವಿಶೇಷ ಪೂಜೆ ಸಲ್ಲಿಸಿದರು.

ಮೊದಲಿನಿಂದಲೂ ಕೂಡ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಿಯ ವಿಶೇಷ ಭಕ್ತಿ ಯಾಗಿರುವ ದುರ್ಗಾ ಸ್ಟಾಲಿನ್ ಅವರು ದಕ್ಷಿಣ ಭಾರತದ ವಿವಿಧ ದೇಗುಲಗಳಿಗೆ ಭೇಟಿ ನೀಡುವುದರ ಜೊತೆಗೆ ದೇವಸ್ಥಾನಗಳಿಗೆ ಕೊಡುಗೆಯನ್ನ ನೀಡುತ್ತಿರುತ್ತಾರೆ.

ಸ್ಟಾಲಿನ್ ಅವರ ಪುತ್ರ ಉದಯನಿಧಿ ಸ್ಟಾಲಿನ್, ನಿರಂತರವಾಗಿ ಸನಾತನ ಧರ್ಮದ ವಿರುದ್ಧ ಟೀಕೆ ಮಾಡುತ್ತಿದ್ದು, ಈ ಹಿನ್ನೆಲೆಯಲ್ಲಿ ದುರ್ಗಾ ಸ್ಟಾಲಿನ್ ಅವರು ಅವರ ಕೊಲ್ಲೂರು ಭೇಟಿ ಗಮನ ಸೆಳೆಯಿತು. ಕೊಲ್ಲೂರು ಭೇಟಿ ನೀಡಿದ ಸಂದರ್ಭ ದುರ್ಗಾ ಸ್ಟಾಲಿನ್ ಅವರ ಸ್ನೇಹಿತೆ ಕೊಲ್ಲೂರು ಮೂಕಾಂಬಿಕಾ ದೇವಿಗೆ ಚಿನ್ನದ ಕಿರೀಟ ಅರ್ಪಿಸಿದ್ದು ವಿಶೇಷವಾಗಿತ್ತು.

ಬೈಂದೂರು ತಾಲೂಕಿನಲ್ಲಿರುವ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವುಳವು ದಕ್ಷಿಣ ಭಾರತದ ಅತಿ ದೊಡ್ಡ ಶಕ್ತಿಪೀಠ ವಾಗಿದ್ದು ಇಲ್ಲಿಗೆ ರಾಜಕಾರಣಿಗಳು ಸಿನಿಮಾ ನಟರು ಸೆಲಬ್ರೆಟಿಗಳು ಇನ್ನಿತರರು ತಮ್ಮ ಇಷ್ಟಾರ್ಥ ಸಿದ್ದಿಗೆ ಸದಾ ಕಾಲ ಭೇಟಿ ನೀಡುತ್ತಿರುತ್ತಾರೆ.